ಕುಮಟಾ: ಮಿತಿಮೀರಿದ ಮೊಬೈಲ್ ಹಾಗೂ ಅಂತರ್ಜಾಲದ ಬಳಕೆಯಿಂದ ಇಂದು ವಿದ್ಯಾರ್ಥಿಗಳು ಓದಿನ ಆನಂದದಿಂದ ವಂಚಿತರಾಗಿದ್ದಾರೆಂದು ಉದ್ಯಮಿ ಹಾಗೂ ಶಿಕ್ಷಣಾಭಿಮಾನಿ ಎಂ.ಎಂ.ಹೆಗಡೆ ಅಭಿಪ್ರಾಯಪಟ್ಟರು. ಅವರು ಮಹಾತ್ಮಾ ಗಾಂಧಿ ಪ್ರೌಢಶಾಲೆಯ ನೂತನ ಮಂತ್ರಿಮಂಡಳ ಮತ್ತು ವಿವಿದ್ದೋದ್ದೇಶದ ಚಟುವಟಿಕೆಗಳ ಕ್ಲಬ್ಗಳನ್ನು ಉದ್ಘಾಟಿಸಿ, ಶಿಕ್ಷಕರಾದವರು ತಮ್ಮಲ್ಲಿಯ ಎಲ್ಲವನ್ನೂ ಧಾರೆಯೆರೆಯಲು ಸಾಧ್ಯವಿಲ್ಲ ಬದಲು ಮಕ್ಕಳ ಪ್ರತಿಭಾ ಕ್ಷೇತ್ರವನ್ನು ಮಾತ್ರ ಜಾಗೃತಗೊಳಿಸಬಲ್ಲರು ಎಂದು ನುಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕ ಸಾಹಿತ್ಯ ಒದಗಿಸಲು ಧನಸಹಾಯ ನೀಡಿದ ಎಂ.ಎಂ.ಹೆಗಡೆ ಅವರನ್ನು ಅಭಿನಂದಿಸಿದರು. ಪ್ರಾರಂಭದಲ್ಲಿ ಶ್ರೀಲಕ್ಷ್ಮಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಅನಿಲ್ ರೊಡ್ರಗೀಸ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ವಿಷ್ಣು ಭಟ್ಟ ಇಲಾಖಾ ನಿಯಮದಂತೆ ಸ್ಥಾಪಿತಗೊಂಡ ಕ್ಲಬ್ಗಳಾದ ವಿಜ್ಞಾನ ಸಂಘ, ಕಸ್ತೂರಬಾ ಇಕೋ ಕ್ಲಬ್, ಗಣಿತ ಸಂಘ, ಇತಿಹಾಸ ಮತ್ತು ಕಾನೂನು ಸಾಕ್ಷರತಾ ಸಂಘ, ಸಾಂಸ್ಕøತಿಕ ಸಂಘ, ಕ್ರೀಡಾ ಸಂಘ, ಬಿ.ಎ.ಸನದಿ ಸಾಹಿತ್ಯ ಸಂಘ, ಶಿಸ್ತು ಮತ್ತು ಅಭಿವೃದ್ಧಿ ಸಂಘ, ಕನ್ನಡ, ಹಿಂದಿ, ಇಂಗ್ಲೀಷ್ ಭಾಷಾ ಸಂಘಗಳು ಸಕ್ರಿಯವಾಗಿದ್ದು ಪುನಃ ಶೈಕ್ಷಣಿಕ ವರ್ಷದಾರಂಭದಲ್ಲಿ ಚಟುವಟಿಕೆ ಆರಂಭಿಸಿವೆ ಎಂದು ವಿವರ ನೀಡಿದರು. ಕುಮಾರಿ ಐಶ್ವರ್ಯ ಶಾನಭಾಗ ಮತ್ತು ಕುಮಾರ ಸುಮನ್ ಮಡಿವಾಳ ಶಾಲಾ ಮುಖ್ಯಮಂತ್ರಿಗಳಾಗಿ ಸರ್ವಾನುಮತದಿಂದ ಆಯ್ಕೆಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಸಂಸತ್ತಿನ ಪ್ರಧಾನ ಸಂಚಾಲಕ ಶಿಕ್ಷಕ ಎಸ್.ಪಿ.ಪೈ ಪ್ರಮಾಣ ವಚನ ಬೋಧಿಸಿದರು. ಶಿಕ್ಷಕ ಕಿರಣ ಪ್ರಭು ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿ ನುಸೈಬಾ ಸಾಬ್ ವಂದಿಸಿದರು.
ಓದುವ ಆನಂದ ದಕ್ಕಿಸಿಕೊಳ್ಳಿ -ಎಂ.ಎಂ.ಹೆಗಡೆ
NEWS UPDATE
ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೆಳದರ್ಜೆಗೆ ತಳ್ಳುವ ಪ್ರಯತ್ನ : ಜನತೆಯಲ್ಲಿ ಶಾಸಕ ಭೀಮಣ್ಣ ಕ್ಷಮೆ ಕೇಳಲು...
satwawriter - 0
ಶಿರಸಿ: ಶಿರಸಿ ಪಂಡಿತ್ ಸಾರ್ವಜನಿಕ ಆಸ್ಫತ್ರೆ ವಿಚಾರವಾಗಿ ಸರ್ಕಾರ ವೈದ್ಯಕೀಯ ಸಲಕರಣೆಗಳಿಗೆ 30 ಕೋಟಿ ರೂಪಾಯಿ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಸ್ಪೆಷಾಲಿಟಿ ಆಸ್ಪತ್ರೆಯನ್ನ ಕೆಳದರ್ಜೆಗೆ ತಳ್ಳುವ ಪ್ರಯತ್ನ ಮಾಡುತ್ತಿರುವ ಮಾನ್ಯ ಶಾಸಕರಾದ ಭೀಮಣ್ಣ...
KUMTA NEWS
ಶಾಲೆಗೆ ೭ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ಶೈಕ್ಷಣಿಕ ಉಪಕರಣ ಕೊಡುಗೆ.
satwawriter - 0
ಕುಮಟಾ : ತಾಲೂಕಿನ ಕರ್ಕಿಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೊವೊ ನೊರ್ಡಿಸ್ಕ ಕಂಪನಿಯ ಸಿಎಸ್ಆರ್ ನಿಧಿಯಿಂದ ಕೊಡುಗೆಯಾಗಿ ನೀಡಿದ ೭ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ವಿಜ್ಞಾನ ಮತ್ತು ಇತರ...
HONNAVAR NEWS
ಶಿಕ್ಷಕ ಪಿ.ಆರ್. ನಾಯ್ಕರಿಗೆ ಶಿಶು ಸಂಗಮೇಶ ದತ್ತಿ ಪ್ರಶಸ್ತಿ
ಹೊನ್ನಾವರ: ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಶಿಶು ಸಂಗಮೇಶ ದತ್ತಿ ಪ್ರಶಸ್ತಿಯು ಶಿಕ್ಷಕ ಪಿ.ಆರ್.ನಾಯ್ಕರವರ ಮಕ್ಕಳ ಕೃತಿ ಪಾಟಿಚೀಲ ಕವನ ಸಂಕಲನಕ್ಕೆ ಸಂದಿವೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ...
ಫೇ. 20 ರಿಂದ ಹೊನ್ನಾವರ ಉತ್ಸವ
ಹೊನ್ನಾವರ: ಫೆಬ್ರವರಿ ೨೦ ರಿಂದ ೨೩ರವರೆಗೆ ಪಟ್ಟಣದ ಸೇಂಟ್ ಅಂತೋನಿ ಮೈದಾನದಲ್ಲಿ ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ದಿ ಟ್ರಸ್ಟ್ ಹಾಗೂ ಹೊನ್ನಾವರ ಉತ್ಸವ ಸಮಿತಿಯ ಆಶ್ರಯದಲ್ಲಿ ಹೊನ್ನಾವರ ಉತ್ಸವ - ೨೦೨೫...
ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟರಿಗೆ ಹವ್ಯಕ ಸಾಧಕ ರತ್ನ ಪ್ರಶಸ್ತಿ
ಸಿದ್ದಾಪುರ: ತಾಲೂಕಿನ ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟರಿಗೆ ಬೆಂಗಳೂರಿನಲ್ಲಿ ಡಿ.27 ರಿಂದ ಜರುಗುತ್ತಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸಾಧಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಸಿದ್ದಾಪುರ ತಾಲೂಕು ಕನ್ನಡ...
ಹವ್ಯಕ ಎನ್ನುವುದೇ ಒಂದು ಆತ್ಮೀಯತೆ : ಶಿವಾನಂದ ಹೆಗಡೆ ಕಡತೋಕಾ.
ಹೊನ್ನಾವರ : ಹವ್ಯಕ ಎಂಬುದೇ ಒಂದು ಆತ್ಮೀಯತೆ. ಹವ್ಯಕ ಎಂಬುದು ಸ್ವಾಭಿಮಾನ. ಹವ್ಯಕ ಎಂಬುದು ಒಂದು ಒಂದು ಶಕ್ತಿ. ನಾವು ಹವ್ಯಕರು ಎಂಬುದೇ ನಮ್ಮ ಹೆಮ್ಮೆ ಎಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ...
ಯಕ್ಷಗಾನವು ಸಂಸ್ಕಾರ ನೀಡುವ ಕಲೆ : ಕಾಗೇರಿ
ಹೊನ್ನಾವರ : ನಮ್ಮ ಶ್ರೀಮಂತಿಕೆಯನ್ನು ಹಣದಿಂದ ಅಳೆಯಬಾರದು. ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವುದರಿಂದ ವ್ಯಕ್ತಿತ್ವ ಶ್ರೀಮಂತಗೊಳ್ಳುವುದು. ಯಕ್ಷಗಾನದಂತಹ ಕಲೆಯು ಮನರಂಜನೆಯ ಜೊತೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿ ನಮಗೆ ಸಂಸ್ಕಾರವನ್ನು ನೀಡುತ್ತದೆ' ಎಂದು ಸಂಸದ...