ಕಾರವಾರ : ಕಳೆದ ೫ ವರ್ಷಗಳಿಂದ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ‌ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಫಿ ಸಾದುದ್ದಿನ್ ಅವರು‌ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಅವರಿಗೆ ಇಂದು ವಾರ್ತಾಇಲಾಖೆಯಲ್ಲಿ ಇಲಾಖಾ ಸಿಬ್ಬಂದಿಗಳು ಹಾಗೂ ಕಲಾವಿದರಿಂದ ಬಿಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕ.ಸಾ.ಪ ತಾಲುಕಾಧ್ಯಕ್ಷ ನಾಗರಾಜ ಹರಪನಹಳ್ಳಿ ಮಾತನಾಡಿ “ಕಳೆದ ಐದು ವರ್ಷದ ಸುದೀರ್ಘ ಅವಧಿಯಲ್ಲಿ ಶಫಿ ಅವರು ಅಧಿಕಾರಿಗಳು ಹಾಗೂ ಪತ್ರಕರ್ತರ ಕೊಂಡಿಯಾಗಿ ಅತ್ಯತ್ತಮ ಕಾರ್ಯನಿವಹಿಸಿದ್ದಾರೆ ಎಂದರು”.

ಇಲಾಖಾ ಸಿಬ್ಬಂದಿ ಕಸ್ತೂರಿ ಪಾಟಿಲ್ ಮಾತನಾಡಿ
” ಶಿಫಿ ಅವರು ಒಬ್ಬ ಅಧಿಕಾರಿಯಾಗಿ ದರ್ಪ ತೋರದೆ ಗೌರವದಿಂದಲೇ ಸಿಬ್ಬಂದಿಗಳಿಂದ ಕೆಲಸಮಾಡಿಸುತಿದ್ದರು. ಅವರು ವರ್ಗವಾಗಿ ಹೋಗುತ್ತಿರುವದು ಬೇಸರದ ಸಂಗತಿಯಾದರೂ ಅನಿವಾರ್ಯ, ಆದ್ದರಿಂದ ಅವರು ಮುಂದಿನ ಜೀವನ ಸುಖಕರ ವಾಗಿರಲಿ” ಎಂದು ಹಾರೈಸಿದರು.

ಈ‌ ಸಂದರ್ಭದಲ್ಲಿ ಪತ್ರಕರ್ತರಾದ ಕಡತೋಕಾ ಮಂಜು, ಉದಯ್ ಬರ್ಗಿ, ದರ್ಶನ್ ನಾಯ್ಕ್ , ದೀಪಕ್ ಗೋಕರ್ಣ , ಗಿರೀಶ್ ನಾಯ್ಕ್‌‌ ಹಾಗೂ ವಾರ್ತಾಇಲಾಖೆ ಸಿಬ್ಬಂದಿಗಳು, ಮತ್ತು ಕಲಾವಿದರು ಉಪಸ್ಥಿತರಿದ್ದರು.