ಹೊನ್ನಾವರ ತಾಲೂಕಿನ ಮಾವಿನಕುರ್ವಾದ ಸೊಸೈಟಿ ಬಳಿ ಘಟನೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾವಿನಕುರ್ವಾ.

ಮಾವಿನಕುರ್ವಾ ಭಟ್ರಕೇರಿ ನಿವಾಸಿಗಳಾದ ಯೋಗೇಶ ಮುಕ್ರಿ (26), ಮಾರುತಿ ಮುಕ್ರಿ (22), ಗೋಪಾಲ ಪರಮ ಮುಕ್ರಿ (28), ಮಂಜುನಾಥ ನಾಗು ಮುಕ್ರಿ (37) ಗಂಭೀರವಾಗಿ ಗಾಯಗೊಂಡವರು.

ಇವರು ಬೈಕ್ ನಲ್ಲಿ ಹೊಸಾಡದಿಂದ ಮಾವಿನಕುರ್ವಾಕ್ಕೆ ಹೋಗುತ್ತಿರುವಾಗ ಎರಡು ಬೈಕ್ ಗಳಿಗೆ ಗುದ್ದಿದ ಬೊಲೇರೋ ವಾಹನ.

ಬೈಕ್ ನ ಹಿಂಬದಿ ಸವಾರರಿಗೂ ಗಂಭೀರ ಗಾಯ.

ಗಾಯಾಳುಗಳನ್ನು ಹೊನ್ನಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ.