573
ಕುಮಟಾ : ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾದ ಸಾಂಸೃತಿಕ ಸಂಘದ ಅಡಿಯಲ್ಲಿ ಹಮ್ಮಿಕೊಂಡ ೦೮ ದಿನಗಳ ಲಲಿತ ಕಲೆ ಮತ್ತು ರಂಗಭೂಮಿ ಶಿಕ್ಷಣದ ಕಾರ್ಯಾಗಾರವನ್ನು ರಂಗ ಕಲಾಶಿಕ್ಷಕ ಶ್ರೀಕಾಂತ ಕುಮಟಾ ಉದ್ಘಾಟಿಸಿ ರಂಗಭೂಮಿ ಮತ್ತು ಶಿಕ್ಷಣಕ್ಕೆ ಇರುವ ಸಹ ಸಂಬಂಧವನ್ನು ಹಲವಾರು ದ್ರಷ್ಟಾಂತಗಳೊಂದಿಗೆ ಮನೋಜ್ಞವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಜಿ.ಡಿ ಭಟ್ ಇವರು ಮಾತನಾಡಿ ಶಿಕ್ಷಕ ತರಬೇತಿಯಲ್ಲ್ಲಿ ನಾಟಕ ಕಲೆಯ ಪ್ರಮುಖ ಪಾತ್ರವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಉಷಾ ಗೌಡ ಪ್ರಾರ್ಥಿಸಿದರು. ಸಹ ಪ್ರಾಧ್ಯಾಪಕ ಶ್ರೀಧರ ಬಳಗಾರ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ನಮ್ರತಾ ವಂದಿಸಿದರು. ಶಿಕ್ಷಕ ವಿದ್ಯಾರ್ಥಿಗಳಾದ ಸಂದೀಪ ಮರಾಠೆ ಹಾಗೂ ನಾಗಶ್ರೀ ಮುಕ್ರಿ ಕಾರ್ಯಕ್ರಮ ನಿರೂಪಿಸಿದರು.