1.3K
ಕುಮಟಾ : ಪಟ್ಟಣದ ಶ್ರೀ ಶಾಂತೇರಿ ಕಾಮಾಕ್ಷಿ ರಾಮನಾಥ ಲಕ್ಷ್ಮೀ ನಾರಾಯಣ ದೇವಸ್ಥಾನದ ಆಡಳಿತ ಸಮಿತಿಯ ಸಕ್ರೀಯ ಸದಸ್ಯ, ಜಿ.ಎಸ್.ಬಿ ಯುವ ವಾಹಿನಿಯ ಮಾಜಿ ಅಧ್ಯಕ್ಷ, ಹಲವಾರು ಸಂಘಟನೆಗಳಲ್ಲಿ ಹಾಗೂ ದೇವಾಲಯದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಜನಮನ್ನಣೆ ಗಳಿಸಿದ್ದ ಚಿತ್ರಗಿ ನಿವಾಸಿ ಮುಕುಂದ ಬಾಬು ಶಾನಭಾಗ (೬೨) ವಲ್ಲಿಗದ್ದೆ ಅವರು ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾದರು.
ಮೃತರು ಕುಮಟಾದಲ್ಲಿ ವಿವಿಧ ಕಂಪನಿಗಳ ನೀರು ಮತ್ತು ತಂಪುಪಾನೀಯಗಳ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಎಲ್ಲ ಸಮಾಜಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಅವರು ಹಲವು ಸಾಮಾಜಿಕ ಕಾರ್ಯಗಳಲ್ಲೂ ಸಕ್ರೀಯವಾಗಿ ತೊಡಗಿಕೊಂಡು ಎಲ್ಲೆಡೆ ಪರಿಚಿತರಾಗಿದ್ದರು. ಮೃತರು ಓರ್ವ ಪುತ್ರ ಹಾಗೂ ಕುಟುಂಬದವರನ್ನು ಹಾಗೂ ಅಪಾರ ಬಂಧು ಬಳಗದವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ವಿವಿಧ ಸಮಾಜಗಳ ಪ್ರಮುಖರು, ಗಣ್ಯರು ಕಂಬಿನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದಾರೆ.
