3.4K
ಕುಮಟಾ : ಒಂದೆಡೆ ಮಳೆಯ ಆರ್ಭಟದ ಜೊತೆಗೆ ರಸ್ತೆ, ಚರಂಡಿಯಲ್ಲಿ ಓಡಾಡುತ್ತಿದ್ದ 12 ಅಡಿ ಕಾಳಿಂಗ ಸರ್ಪ ಕತಗಾಲ ಉಪ್ಪಿನಪಟ್ಟಣದ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ ಘಟನೆ ನಡೆದಿದೆ. ಮಳೆಯ ನಡುವೆ ಕಾಳಿಂಗ ಸರ್ಪ ರಸ್ತೆಯಲ್ಲಿ ಧಾವಿಸಿ ಬಂದು, ಹೆಡೆ ಎತ್ತಿ ಬುಸುಗುಟ್ಟಿದ್ದು ವಾಹನ ಸವಾರರು ಕೆಲಹೊತ್ತು ಕಂಗಾಲಾಗಿದ್ದಾರೆ.
ಸಾರ್ವಜನಿಕರು ಅರಣ್ಯ ಇಲಾಖೆಯ ಬೀಟ್ ಫೋರೆಸ್ಟರ್ ಭರತ್ ಅವರಿಗೆ ವಿಷಯ ತಿಳಿಸುತ್ತಿದ್ದಂತೆ, ಉರಗತಜ್ಞ ಪವನ್ ನಾಯ್ಕ ಅವರನ್ನು ಸ್ಥಳಕ್ಕೆ ಕರೆಯಿಸಿ ಹಾವನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
