Home ಜಿಲ್ಲೆಉದ್ಯಮಿ ರತ್ನ ಪ್ರಶಸ್ತಿ ಪಡೆದ ಮಂಜುನಾಥ ಭಟ್ಟರಿಗೆ ಸನ್ಮಾನ

ಉದ್ಯಮಿ ರತ್ನ ಪ್ರಶಸ್ತಿ ಪಡೆದ ಮಂಜುನಾಥ ಭಟ್ಟರಿಗೆ ಸನ್ಮಾನ

ಒಳಿತುಮಾಡುವ ಮನಸ್ಸೇ ಸಾಧನೆಗೆ ಕಾರಣ : ಡಾ. ಡಿ.ಡಿ ಭಟ್ಟ

by News Desk
0 comments

ಕುಮಟಾ : ಸಮಾಜಕ್ಕೆ ತನ್ನಿಂದ ಏನನ್ನಾದರೂ ಕೊಡಬೇಕು ಎನ್ನುವ ತುಡಿತವೇ ಮಂಜುನಾಥ ಭಟ್ಟರವರ ಸಾಧನೆಯ ಮೊದಲ ಮೆಟ್ಟಿಲೆಂದು ನಿವೃತ್ತ ಪ್ರಾಚಾರ್ಯ ಡಾ.ಡಿ.ಡಿ. ಭಟ್ ಹೇಳಿದರು.

ನಾಗಮ್ಮ ಪ್ರಕಾಶನ ಹೊಳೆಗದ್ದೆ ಇವರ ಆಶ್ರಯದಲ್ಲಿ ನಡೆದ ಉದ್ಯಮಿ ರತ್ನ ಪ್ರಶಸ್ತಿ ಪುರಸ್ಕೃತ ಮಂಜುನಾಥ ಭಟ್ ರವರನ್ನು ಸುವರ್ಣಗದ್ದೆಯ ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಮಾತನಾಡಿದರು. ಓರ್ವ ಸಾಧಕನ ಹಿಂದೆ ಕಠಿಣ ಪರಿಶ್ರಮವಿರುತ್ತದೆ. ಶ್ರಮ ಸಂಸ್ಕೃತಿಯ ಜೊತೆಗೆ ಇತರರನ್ನು ಗೌರವಿಸುವ ಉದಾರ ಗುಣ ಸಂಪನ್ನ ಮಂಜುನಾಥ್ ಭಟ್ ರವರಿಗೆ ಈ ಪ್ರಶಸ್ತಿ ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅವರನ್ನು ಅಭಿನಂದಿಸಿ ಮಾತನಾಡಿದರು.

ದೇವಗಿರಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಎಸ್. ಟಿ. ನಾಯ್ಕ ಮಾತನಾಡಿ, ಮಂಜುನಾಥ ಭಟ್ ರವರಿಗೆ ಉದ್ಯಮಿ ರತ್ನ ಪ್ರಶಸ್ತಿ ಬಂದಿರುವುದು ಇಡೀ ನಮ್ಮ ಪಂಚಾಯಿತಿಗೆ ಹೆಮ್ಮೆ ತಂದಿದೆ. ಹೊಳೆಗದ್ದೆ ಹಾಗೂ ಸುತ್ತಮುತ್ತಲಿನ ಹಲವು ಕುಟುಂಬದ ಜನರಿಗೆ ಉದ್ಯೋಗ ಒದಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬರಲಿ ಎಂದರು.

ಪ್ರಶಸ್ತಿ ಪುರಸ್ಕೃತ ಸ್ವರ್ಣ ಲೆಟೆಕ್ಸ್ ಮಾಲೀಕ ಮಂಜುನಾಥ್ ಭಟ್ ಮಾತನಾಡಿ, ಊರಿನವರಿಂದ ಪಡೆದ ಸನ್ಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಪ್ರಶಸ್ತಿಯನ್ನು ನನ್ನ ಕಂಪನಿಯ ಎಲ್ಲಾ ನೌಕರರಿಗೆ ಅರ್ಪಿಸುತ್ತೇನೆ. ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ಪರಿಹರಿಸುವ ಎದೆಗಾರಿಕೆಯೊಂದಿಗೆ ಮುನ್ನಡೆದಾಗ ಮಾತ್ರ ನಮ್ಮ ಗುರಿ ಮುಟ್ಟಿ ನಾವು ಬಯಸಿದ್ದನ್ನು ಪಡೆಯಬಹುದು. ಪ್ರೀತಿ ವಿಶ್ವಾಸದಿಂದ ಇಟ್ಟ ಹೆಜ್ಜೆ ಬದುಕಿನ ದಿಕ್ಕನೆ ಬದಲಾಯಿಸಲು ಸಾಧ್ಯ ಎಂದರು.

ನಾಗಮ್ಮ ಪ್ರಕಾಶನ ಸಂಸ್ಥಾಪಕ ಪಿ.ಆರ್. ನಾಯ್ಕ ಮಾತನಾಡಿ, ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿಗೆ ಉದ್ಯಮಿ ರತ್ನ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಉದ್ಯಮಿಯಾದವರು ಇತರರ ಕಷ್ಟಕ್ಕೆ ನೆರವಾದವರಲ್ಲಿ ಸ್ವರ್ಣ ಲೆಟಕ್ಸ್ ಕಂಪನಿ ಇತರರಿಗೆ ಮಾದರಿ ಎಂದರು.

ವೇದಿಕೆಯಲ್ಲಿ ಮಂಜುನಾಥ ಭಟ್ ರವರ ಮಾತೋಶ್ರೀ ಮಾದೇವಿ ಭಟ್ಟ, ಪತ್ನಿ ವಿದ್ಯಾಭಟ್ಟ,ಕುಮಾರ ಗಜಾನನ ಭಟ್ಟ ಮುಂತಾದವರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ ಸದಸ್ಯರಾದ ದೇವೇಂದ್ರ ಶೇರುಗಾರ, ಪಾಂಡು ಪಟಗಾರ, ಉದ್ದಿಮೆದಾರ ಸಚಿನ ನಾಯ್ಕ, ಮಾಜಿ ಗ್ರಾಮ ಪಂಚಾಯತ ಸದಸ್ಯ ಸುರೇಶ್ ಹರಿಕಾಂತ, ಜೆ.ಕೆ. ನಾಯ್ಕ, ಜನಾರ್ಧನ ಹರ್ನಿರು, ಸುಬ್ರಾಯ ಶಾನಭಾಗ, ಮಹೇಶ ನಾಯ್ಕ ಮುಂತಾದವರು ಮಂಜುನಾಥ ಭಟ್ ರವರ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು.

ಪ್ರಾರಂಭದಲ್ಲಿ ಯುವಜನ ಸೇವಾ ಕ್ರೀಡಾಧಿಕಾರಿ ಸುದೀಶ ನಾಯ್ಕ ಸ್ವಾಗತಿಸಿದರೆ, ಶಿಕ್ಷಕ ಸಂಘದ ಪ್ರತಿನಿಧಿ ಸುರೇಶ ನಾಯ್ಕ ನಿರೂಪಿಸಿ, ವಂದಿಸಿದರು.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".