7.6K
ಕುಮಟಾ : ತಾಲೂಕಿನ ಹೆಗಡೆಯಿಂದ ಕುಮಟಾಕ್ಕೆ ಪ್ರಯಾಣಿಕರನ್ನು ತುಂಬಿಕೊಂಡು ಹೊರಟಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚಹಾ ಅಂಗಡಿಗೆ ನುಗ್ಗಿ ಕೆಲ ಕಾಲ ಸುತ್ತಲೂ ಜನರು ಕಂಗಾಲಾದ ಘಟನೆ ಮುಂಜಾನೆ ನಡೆದಿದೆ. ಬಸ್ ಅವಘಡದಿಂದಾಗಿ, ಅಂಗಡಿ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಈ ಬಸ್ ಹೆಗಡೆಯಿಂದ ಕುಮಟಾ ಬಸ್ ನಿಲ್ದಾಣಕ್ಕೆ ಸಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಇಂಡಸ್ಟ್ರಿರ್ ಏರಿಯಾ ಸಮಿಪ ಬರುತ್ತಿದ್ದಂತೆ ಚಾನಲಕ ನಿಯಂತ್ರಣ ತಪ್ಪಿ ಹೆಗಡೆ ಕುಮಟಾ ರಸ್ತೆ ಬದಿಯಲ್ಲಿದ್ದ ನಾಗೇಶ ನಾಯ್ಕ ಎಂಬುವವರ ಚಹಾ ಅಂಗಡಿಗೆ ನುಗ್ಗಿದ ಬಗ್ಗೆ ಸ್ಥಾನೀಯ ವರದಿ ಲಭ್ಯವಾಗಿದೆ.

ಹಬ್ಬ ಹಿನ್ನಲೆಯಲ್ಲಿ ನಾಗೇಶ ನಾಯ್ಕ ಅಂಗಡಿ ಬಂದ್ ಮಾಡಿದ್ದ, ಘಟನೆ ಸಂದರ್ಭದಲ್ಲಿ ಚಹಾ ಅಂಗಡಿ ಬಂದ್ ಆಗಿರುವ ಕಾರಣ ದೊಡ್ಡಮಟ್ಟದ ಅನಾಹುತ ತಪ್ಪಿದಂತಾಗಿದೆ. ವಿಷಯ ತಿಳಿಯುತ್ತಿದ್ದಂತೆ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡುವ ಜೊತೆಗೆ ಅಂಗಡಿಕಾರನಿಗೆ ಸಿಗಬೇಕಾದ ಪರಿಹಾರ ಕೊಡಿಸಿದರು.