Home ಮಾಹಿತಿಜನ ಜಾತಿಗಣತಿಯಲ್ಲಿ ಗೊಂದಲಕ್ಕೊಳಗಾಗದಂತೆ ಉತ್ತರ ಕನ್ನಡ ಜಿಲ್ಲಾಭಂಡಾರಿ ಸಮಾಜೋನ್ನತಿ ಸಂಘದ ಜಿಲ್ಲಾಧ್ಯಕ್ಷ ಅರುಣ ಮಣಕೀಕರ್ ಕರೆ.

ಜನ ಜಾತಿಗಣತಿಯಲ್ಲಿ ಗೊಂದಲಕ್ಕೊಳಗಾಗದಂತೆ ಉತ್ತರ ಕನ್ನಡ ಜಿಲ್ಲಾಭಂಡಾರಿ ಸಮಾಜೋನ್ನತಿ ಸಂಘದ ಜಿಲ್ಲಾಧ್ಯಕ್ಷ ಅರುಣ ಮಣಕೀಕರ್ ಕರೆ.

by News Desk
0 comments

ಕುಮಟಾ : ಕರ್ನಾಟಕ ಸರಕಾರವು ಪ್ರಸಕ್ತ ವರ್ಷ ನಡೆಸುತ್ತಿರುವ ಜಾತಿ ಜನಗಣತಿಯಲ್ಲಿ ಕೆಲವು ಪ್ರಮುಖ ಮಾಹಿತಿಯನ್ನು ಕಲೆಹಾಕುತ್ತಿದ್ದು ಈ ಮಾಹಿತಿಯ ಆಧಾರದಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ವಾಸಿಸುವ ನಮ್ಮ ಕೊಂಕಣಿ ಭಾಷಿಕ ಭಂಡಾರಿ ಜನಾಂಗದ ಹೆಸರು ಕೆಲವು ಪ್ರದೇಶಗಳಲ್ಲಿ ಬಗೆಬಗೆಯಾಗಿದೆ. ಇತಿಹಾಸದಲ್ಲಿ ಕ್ಷತ್ರಿಯರಾಗಿ ಭೂಮಿ ಬದುಕಿಸಿದ ಭಂಡಾರಿಗಳೆಂದೇ ಹೆಸರಾದ ಸಮುದಾಯವು ಸರಕಾರದ ಜಾತಿಯ ಪಟ್ಟಿಯಲ್ಲಿ ದೇಶಭಂಡಾರಿ ಎಂದು ನಮೂದಿಸಿಕೊಂಡಿದೆ.

ಭಂಡಾರಿ ಹೆಸರಿನಲ್ಲಿ ಇರುವವರು ಸವಿತಾ ಸಮಾಜದ ಹೆಸರಲ್ಲಿ ಗಣನೆಗೆ ಸರಕಾರ ತೆಗೆದುಕೊಂಡ ಪರಿಣಾಮ ನಮ್ಮ ಸಮಾಜದ ನಿಜವಾದ ಅಂಕೆ ಸಂಖ್ಯೆ ಮರೆಮಾಚಲ್ಪಟ್ಟಿದೆ. ಭವಿಷ್ಯದಲ್ಲಿ ಇದನ್ನು ಸರಿಪಡಿಸುವ ಗಂಭೀರ ಪ್ರಯತ್ನಗಳು ಸಾಗಿದೆ.ಈಗಾಗಲೇ ಭಂಡಾರಿ, ನಾಯ್ಕ, ಗಾಂವ್ಕರ್ ಇತ್ಯಾದಿ ಇತ್ಯಾದಿ ಹೆಸರಿಂದ ಗುರುತಿಸಿಕೊಂಡವರು ಸಮಾಜದ ಮುಖ್ಯ ಪಟ್ಟಿಯಲ್ಲಿ ಸೇರ್ಪಡೆ ಆಗುವ ನಿಟ್ಟಿನಲ್ಲಿ ಉಪಜಾತಿ ಎಂದು ನಮೂದಿಸುವ ಸಂದರ್ಭದಲ್ಲಿ ದೇಶಭಂಡಾರಿ ಎಂದು ಕುಲಕಸುಬು ಎಂಬಲ್ಲಿ ಮಾಡಕಾರ( ಸೇಂದಿ ಇಳಿಸುವವರು) ಎಂದು ಬರೆಸಿ ಇದನ್ನು ಇಂಗ್ಲಿಷ್ ಭಾಷೆಯಲ್ಲಿ Toddy Tapper ಎಂದು ಕಡ್ಡಾಯವಾಗಿ ನಮೂದಿಸುವಂತೆ ನೋಡಿಕೊಳ್ಳಬೇಕಾಗಿ ಭಂಡಾರಿ ಸಮಾಜೋನ್ನತಿ ಸಂಘ ಉ.ಕ. ಇದರ ಜಿಲ್ಲಾ ಅಧ್ಯಕ್ಷ ಅರುಣ ಸಿ. ಮಣಕೀಕರ್ ತಿಳಿಸಿದ್ದಾರೆ.

ಇಂದು ನಾವು ತೆಗೆದುಕೊಳ್ಳುವ ಈ ತೀರ್ಮಾನವು ಭವಿಷ್ಯದಲ್ಲಿಮುಂದಿನ ಪೀಳಿಗೆಗೆ ಬಹಳ ಅನುಕೂಲಕಾರಿ ಆಗಲಿದೆ ಎಂಬ ಆಶಯ ನಮ್ಮದಾಗಿದೆ. ಕಾರಣ ಯಾವುದೇ ವೈಯಕ್ತಿಕ ಪ್ರತಿಷ್ಠೆಯಾಗಿ ಇದನ್ನು ಭಾವಿಸದೇ ಎಲ್ಲರೂ ಈ ಸಲಹೆಯನ್ನು ಪಾಲಿಸಬೇಕಾಗಿ ಅವರು ವಿನಂತಿಸಿದ್ದಾರೆ.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".