Home ರಾಜ್ಯಬಸ್ ದುರಂತದಲ್ಲಿ ಕುಮಟಾದ ಯುವಕರು ಸೇಫ್

ಬಸ್ ದುರಂತದಲ್ಲಿ ಕುಮಟಾದ ಯುವಕರು ಸೇಫ್

ಮನೆ ಸೇರಿದ ಇಬ್ಬರೂ ಯುವಕರು - ತಾಲೂಕಿನಲ್ಲಿ ಸಂತಸ

by News Desk
0 comments

ಕುಮಟಾ : ಗುರುವಾರ ನಸುಕಿನಲ್ಲಿ ಚಿತ್ರದುರ್ಗ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಸಿಲುಕಿಕೊಂಡಿದ್ದ ಕುಮಟಾದ ಇಬ್ಬರು ಯುವಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿ ಮನೆ ಸೇರಿದ್ದು ತಾಲೂಕಿನಲ್ಲಿ ಸಂತಸ ತಂದಿದೆ.

ತಾಲೂಕಿನ ವಿಜಯ ಹಾಗೂ ಮೇಘರಾಜ ಎಂಬ ಈರ್ವರೂ ಯುವಕರು ಬೆಂಗಳೂರಿನಿಂದ ಕುಮಟಾಕ್ಕೆ ಆಗಮಿಸುತ್ತಿದ್ದರು. ಬಸ್ ಗೆ ಬೆಂಕಿ ಹೊತ್ತಿಕೊಂಡಾಗ ಬಸ್‌ನ ಗ್ಲಾಸ್ ಒಡೆದು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಆದರೆ ಗ್ಲಾಸ್ ಒಡೆದು ಹೊರಬರುವ ಸಂದರ್ಭದಲ್ಲಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕುಮಟಾದ ಚಿತ್ರಗಿಯ ಮಿಡ್ಲ್ ಗುಂದ ನಿವಾಸಿ ವಿಜಯ ದತ್ತ ಭಂಡಾರಿ (೨೭) ಹಾಗೂ ಕುಮಟಾ ಅಳ್ವೆದಂಡೆ ನಿವಾಸಿ ಮೇಘರಾಜ ಪಾರಾದ ಯುವಕರಾಗಿದ್ದಾರೆ. ಅವರು ಗುರುವಾರ ಮನೆಗೆ ಸುರಕ್ಷಿತವಾಗಿ ಆಗಮಿಸಿದ್ದಾರೆ. ಹಿರಿಯೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಇವರು ಮರಳಿದ್ದಾರೆ.

ಸಾಗರ ಮೂಲದ ಆದಿತ್ಯ ಎಂಬುವರನ್ನೂ ಸೇರಿಸಿಕೊಂಡು, ಬದುಕುಳಿದ ಮೂವರನ್ನೂ ವಿಜಯ ಅವರ ಅಣ್ಣ ಗಜೇಂದ್ರ ಅವರು ಊರಿಗೆ ಕರೆತಂದಿದ್ದಾರೆ.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".