508
ಕುಮಟಾ : ತಾಲೂಕಾ 4 ನೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಕವಿ,ಸಾಹಿತಿ, ಕಲಾವಿದ ತಿಗಣೇಶ ಮಾಗೋಡ ರವರನ್ನು ಸಮ್ಮೇಳನಕ್ಕೆ ಆಮಂತ್ರಿಸಲಾಯಿತು.
ಸಮಿತಿಯ ಪರವಾಗಿ ಕುಮಟಾ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗಣಪತಿ ಅಡಿಗುಂಡಿ, ಮಾರ್ಗದರ್ಶಕ ರವೀಂದ್ರ ಭಟ್ಟ ಸೂರಿ, ಪ್ರಧಾನ ಕಾರ್ಯದರ್ಶಿ ಉದಯ ಮಡಿವಾಳ ರವರು ತಿಗಣೇಶ ಮಾಗೋಡ ದಂಪತಿಗಳಿಗೆ ಸನ್ಮಾನಿಸಿ ಸಮ್ಮೇಳನಕ್ಕೆ ಆಮಂತ್ರಿಸಿದರು.

ಏಪ್ರಿಲ್ 26 ರಂದು ಕುಮಟಾದ ಪುರಭವನದಲ್ಲಿ ನಡೆಯಲಿರುವ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ವಿಜಯಲಕ್ಷ್ಮೀ ಹೆಗಡೆಯವರ ಕೃತಿ “ಗಝಲ್ ನಗರಿಯಲ್ಲಿ ಹೆಜ್ಜೆಗಳ ಗುರುತು” ಲೋಕಾರ್ಪಣೆಗೊಳ್ಳಲಿದ್ದು ವಿವಿಧ ಗೋಷ್ಠಿಗಳು ನಡೆಯಲಿವೆ.
ಹಲವು ಗಣ್ಯರು ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದು ಜಿಲ್ಲಾ ಮಟ್ಟದ ಚುಟುಕು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ. ಸಂಸ್ಮರಣ ಸಂಚಿಕೆ ‘ ಕುಮಟಾ ಮುಕುಟ’ ಇದೇ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.