Satwadhara News

ನಾಗರಾಜ ನಾಯಕ ತೊರ್ಕೆ ಯವರಿಂದ ಮನೆ ಮನೆ ಭೇಟಿ.

ಭಟ್ಕಳ: ಬಿಜೆಪಿಯ ಮುಖಂಡ ನಾಗರಾಜ ನಾಯಕ ತೋರ್ಕೆ ಭಟ್ಕಳ ತಾಲೂಕಿನ ಮಾವಳ್ಳಿಯಲ್ಲಿ ಪಕ್ಷದ ವಿಸ್ತಾರಕರಾಗಿ ಮನೆ‌‌ ಮನೆ‌ ಭೇಟಿ ಮಾಡುವ ಮೂಲಕ ಮಿಂಚಿನ ಸಂಚಲನ ಮೂಡಿಸಿದ್ದರು.

ನಾಗರಾಜ ತೊರ್ಕೆ ಇಂದು ಭಟ್ಕಳ ತಾಲೂಕಿನ‌ ಮಾವಳ್ಳಿ ಸೇರಿದಂತೆ ವಿವಿಧ ಭಾಗಗಳಿಗೆ ಇಲ್ಲಿನ ಬಿಜೆಪಿ ಕಾರ್ಯಕರ್ತರ ಜೊತೆಗೂಡಿ ಮನೆ‌ ಮನೆ ತೆರಳಿ ಬಿಜೆಪಿಯ ಪರ ಜನರಲ್ಲಿ ಜಾಗೃತಿ ಮೂಡಿಸಿದ್ದರು.

ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೆ ಏನ್ ಎಲ್ಲಾ ಅಭಿವೃದ್ಧಿ ಕೆಲಸವನ್ನು ದೇಶದಲ್ಲಿ ಮಾಡಿದೆ ಎನ್ನುವ ಬಗ್ಗೆ ಜನತೆಗೆ ಮನದಟ್ಟು ಮಾಡಿದ್ರು. ಜಿಎಸ್ ಟಿ ಇಂದಿ ಬಡವರಿಗೆ ಯಾವೇಲ್ಲಾ ರೀತಿಯಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿಕೊಟ್ಟರು. ನಾಗರಾಜ ನಾಯಕ ಅವರ ಪ್ರತಿಯೊಂದು ಮಾತನ್ನು ಆಲಿಸಿದ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ರು.

Comments

Leave a Reply

Your email address will not be published. Required fields are marked *