Satwadhara News

ದೀವಗಿಯಲ್ಲಿ ಭಜನಾ ಸಪ್ತಾಹ

ಕುಮಟಾ ತಾಲೂಕಿನ ದೀವಗಿಯಲ್ಲಿರುವ ಶ್ರೀ ರಾಮಾನಂದ ಸ್ವಾಮೀಜಿ ಮಠದಲ್ಲಿ ಇಂದು ದಿನಾಂಕ ೨೪ ರಿಂದ ಶ್ರೀ ರಾಮತಾರಕ ನಾಮ ಭಜನಾ ಸಪ್ತಾಹ ಆರಂಭವಾಗಿದ್ದು ದಿನಾಂಕ ೩೧ರ ಮಧ್ಯಾಹ್ನದ ಪರ್ಯಂತ ಅಖಂಡವಾಗಿ ಶ್ರೀ ರಾಮತಾರಕನಾಮ ಭಜನೆ ನಡೆಯಲಿದೆ.
ವೈಶಿಷ್ಠಪೂರ್ಣವಾದ ಈ ಕಾರ್ಯಕ್ರಮ ಕಳೆದ ಸುಮಾರು ೨೦ವರ್ಷಗಳಿಂದ ನಡೆದುಬರುತ್ತಿದೆ.
ಕ್ಷೇತ್ರದೇವನಾದ ಶ್ರೀಆಂಜನೇಯನ ಎದುರಲ್ಲಿ ನಂದಾದೀಪ ಬೆಳಗಿ ಅದರ ಸುತ್ತಲೂ ಭಕ್ತವೃಂದ ಸುತ್ತಿರುಗುತ್ತಾ ರಾಮಭಜನಾ ನಿರತರಾಗುತ್ತಾರೆ.ಪ್ರತಿದಿನ ಸತ್ಯನಾರಾಯಣ ವೃತ, ಗುರುಭಿಕ್ಷ, ಪಾದಪೂಜೆ ಇತ್ಯಾದಿ ಕಾರ್ಯಕ್ರಮಗಳು ಭಕ್ತರಿಂದ ನಡೆಯಲ್ಪಡುತ್ತವೆ.
ಪ್ರತಿದಿನ ಸಂಜೆ ದೀಪೋತ್ಸವವನ್ನು ಮಾಡುತ್ತಾರೆ.
ಮೂರೂರು , ಕೋಣಾರೆ ಭಾಗದ ಭಕ್ತರಿಂದ ಸಾಯಂಕಾಲ ವಿಶೇಷ ಭಜನಾ ಕುಣಿತ ನೋಡಲು ಕಣ್ಣಿಗೆ ಹಬ್ಬವೇ ಸರಿ. ಕುಮಟಾ,ಹೊನ್ನಾವರ, ಸಿರ್ಸಿ, ಸಿದ್ಧಾಪುರ,ಯಲ್ಲಾಪುರ, ಈ ಎಲ್ಲಾ ತಾಲೂಕಿನ ವಿವಿಧೆಡೆಯಿಂದ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ.ವರ್ಷದಿಂದ ವರ್ಷ ಭಕ್ತರು ಅಧಿಕ ಸಂಕ್ಯೆಯಲ್ಲಿ ಪಾಲ್ಗೊಂಡು ಶ್ರೀರಾಮಾಂಜನೇಯ ಹಾಗೂ ಸದ್ಗುರು ಶೀರಾಮಾನಂದರ ಕೃಪಾಪಾತ್ರರಾಗುತ್ತಿದ್ದಾರೆ. “ಶ್ರೀ ರಾಮ ಜಯ ರಾಮ ಜಯ ಜಯ ರಾಮ” ಎಂದು ಭಜಿಸಿ ರಾಮನ, ಒಲಿಸಿ ಹನುಮನ, ನಲಿಸಿ ಗುರುವನು, ಭಕ್ತರು ಕೃತಾರ್ಥರಾಗುತ್ತಿದ್ದಾರೆ.

Comments

Leave a Reply

Your email address will not be published. Required fields are marked *