ಕಲ್ಲಡ್ಕ ಪ್ರಭಾಕರ ಭಟ್ ಅವರ ಆಶ್ರಯದಲ್ಲಿರುವ ಶ್ರೀರಾಮ ವಿದ್ಯಾ ಕೇಂದ್ರದ ಸಹಸ್ರಾರು ಮಕ್ಕಳ ಊಟಕ್ಕಾಗಿ ಅಕ್ಕಿ ಪೂರೈಸುವ ಕಾರ್ಯಾರ್ಥವಾಗಿ ಮುಳ್ಳೇರಿಯಾ ಹವ್ಯಕ ಮಂಡಲದ ವತಿಯಿಂದ ಕುಂಬಳೆ ಹವ್ಯಕ ವಲಯದಲ್ಲಿ ” ಅಕ್ಕಿ ಭಿಕ್ಷಾ ಅಭಿಯಾನ ” ಕ್ಕೆ ಚಾಲನೆ ನೀಡಲಾಯಿತು. ಮುಜುಂಗಾವು ವಿದ್ಯಾಪೀಠದ ಆಸುಪಾಸಿನ ಹಲವಾರು ಸಾರ್ವಜನಿಕರ ನಿವಾಸಗಳಿಗೆ ಅಭಿಯಾನ ನಡೆಸಿ ಅವರಿಗೆ ಈ ವಿಚಾರಗಳನ್ನು ತಿಳಿಸಲಾಯಿತು. ಅವರು ಸಂತೋಷಪೂರ್ವಕವಾಗಿ ನೀಡಿದ ಅಕ್ಕಿಯನ್ನು ಸ್ವೀಕರಿಸುತ್ತಾ ಭಿಕ್ಷಾಟನಾ ಅಭಿಯಾನ ನಡೆಸಲಾಯಿತು.
ಮಂಡಲಾಧ್ಯಕ್ಷ ಪ್ರೊ // ಶ್ರೀಕೃಷ್ಣ ಭಟ್, ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಉಪಾಧ್ಯಕ್ಷ ಕುಮಾರ್ ಯಸ್. ಪೈಸಾರಿ, ಸತ್ಯನಾರಾಯಣ ಮೊಗ್ರ, ಮಹೇಶ ಸರಳಿ, ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಶ್ರೀಕೃಷ್ಣ ಭಟ್ ಮೀನಗದ್ದೆ, ವೈ ಕೆ ಗೋವಿಂದ ಭಟ್ , ಕೇಶವ ಪ್ರಸಾದ ಎಡಕ್ಕಾನ, ಗೋವಿಂದಬಳ್ಳಮೂಲೆ , ಗೀತಾಲಕ್ಷ್ಮಿ ಮುಳ್ಳೇರ್ಯ. ದೇವಕಿ ಪನ್ನೇ, ಕೃಷ್ಣ ಮೋಹನ ಎಡನಾಡು, ಗೋಪಾಲಕೃಷ್ಣ ಭಟ್ ಸೇಡಿಗುಮ್ಮೆ, ಬಾಲಕೃಷ್ಣ ಶರ್ಮ, ಉದನೇಶ್ವರ ಪ್ರಸಾದ ಸೇಡಿಗುಮ್ಮೆ, ನಾರಾಯಣ ಹೆಗ್ಡೆ, ಶಿವಕುಮಾರಿ ಕುಂಚಿನಡ್ಕ ಇವರು ಈ ಅಭಿಯಾನದಲ್ಲಿ ಉಪಸ್ಥಿತರಿದ್ದರು.
ಶ್ರೀರಾಮ ವಿದ್ಯಾ ಕೇಂದ್ರದ ಮಕ್ಕಳಿಗಾಗಿ ‘ ಅಕ್ಕಿ ಭಿಕ್ಷಾ ಅಭಿಯಾನ ” ಕ್ಕೆ ಚಾಲನೆ
NEWS UPDATE
ಚೀನಾದಲ್ಲಿ ಪತ್ತೆಯಾಯ್ತಂತೆ ಕೊರೋನಾದಂತಹುದೇ ಇನ್ನೊಂದು ಹೊಸ ವೈರಸ್…!
satwawriter - 0
ಕೋವಿಡ್-19 (COVID-19) ವೈರಸ್ ಭೀಕರ ಸಾಂಕ್ರಾಮಿಕ ರೋಗಕ್ಕೆ ಕಾರಣವಾದಂತೆಯೇ ಪ್ರಾಣಿಯಿಂದ ಮನುಷ್ಯನಿಗೆ ಹರಡುವ ಅಪಾಯವನ್ನು ಹೊಂದಿರುವ ಹೊಸ ಬಾವಲಿ ಕೊರೊನಾ ವೈರಸ್ ಅನ್ನು ಚೀನಾದಲ್ಲಿ ಕಂಡುಹಿಡಿಯಲಾಗಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಪ್ರಕಾರ,...
KUMTA NEWS
ಶಾಲೆಗೆ ೭ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ಶೈಕ್ಷಣಿಕ ಉಪಕರಣ ಕೊಡುಗೆ.
satwawriter - 0
ಕುಮಟಾ : ತಾಲೂಕಿನ ಕರ್ಕಿಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೊವೊ ನೊರ್ಡಿಸ್ಕ ಕಂಪನಿಯ ಸಿಎಸ್ಆರ್ ನಿಧಿಯಿಂದ ಕೊಡುಗೆಯಾಗಿ ನೀಡಿದ ೭ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ವಿಜ್ಞಾನ ಮತ್ತು ಇತರ...
HONNAVAR NEWS
ಶಿಕ್ಷಕ ಪಿ.ಆರ್. ನಾಯ್ಕರಿಗೆ ಶಿಶು ಸಂಗಮೇಶ ದತ್ತಿ ಪ್ರಶಸ್ತಿ
ಹೊನ್ನಾವರ: ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಶಿಶು ಸಂಗಮೇಶ ದತ್ತಿ ಪ್ರಶಸ್ತಿಯು ಶಿಕ್ಷಕ ಪಿ.ಆರ್.ನಾಯ್ಕರವರ ಮಕ್ಕಳ ಕೃತಿ ಪಾಟಿಚೀಲ ಕವನ ಸಂಕಲನಕ್ಕೆ ಸಂದಿವೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ...
ಫೇ. 20 ರಿಂದ ಹೊನ್ನಾವರ ಉತ್ಸವ
ಹೊನ್ನಾವರ: ಫೆಬ್ರವರಿ ೨೦ ರಿಂದ ೨೩ರವರೆಗೆ ಪಟ್ಟಣದ ಸೇಂಟ್ ಅಂತೋನಿ ಮೈದಾನದಲ್ಲಿ ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ದಿ ಟ್ರಸ್ಟ್ ಹಾಗೂ ಹೊನ್ನಾವರ ಉತ್ಸವ ಸಮಿತಿಯ ಆಶ್ರಯದಲ್ಲಿ ಹೊನ್ನಾವರ ಉತ್ಸವ - ೨೦೨೫...
ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟರಿಗೆ ಹವ್ಯಕ ಸಾಧಕ ರತ್ನ ಪ್ರಶಸ್ತಿ
ಸಿದ್ದಾಪುರ: ತಾಲೂಕಿನ ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟರಿಗೆ ಬೆಂಗಳೂರಿನಲ್ಲಿ ಡಿ.27 ರಿಂದ ಜರುಗುತ್ತಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸಾಧಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಸಿದ್ದಾಪುರ ತಾಲೂಕು ಕನ್ನಡ...
ಹವ್ಯಕ ಎನ್ನುವುದೇ ಒಂದು ಆತ್ಮೀಯತೆ : ಶಿವಾನಂದ ಹೆಗಡೆ ಕಡತೋಕಾ.
ಹೊನ್ನಾವರ : ಹವ್ಯಕ ಎಂಬುದೇ ಒಂದು ಆತ್ಮೀಯತೆ. ಹವ್ಯಕ ಎಂಬುದು ಸ್ವಾಭಿಮಾನ. ಹವ್ಯಕ ಎಂಬುದು ಒಂದು ಒಂದು ಶಕ್ತಿ. ನಾವು ಹವ್ಯಕರು ಎಂಬುದೇ ನಮ್ಮ ಹೆಮ್ಮೆ ಎಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ...
ಯಕ್ಷಗಾನವು ಸಂಸ್ಕಾರ ನೀಡುವ ಕಲೆ : ಕಾಗೇರಿ
ಹೊನ್ನಾವರ : ನಮ್ಮ ಶ್ರೀಮಂತಿಕೆಯನ್ನು ಹಣದಿಂದ ಅಳೆಯಬಾರದು. ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವುದರಿಂದ ವ್ಯಕ್ತಿತ್ವ ಶ್ರೀಮಂತಗೊಳ್ಳುವುದು. ಯಕ್ಷಗಾನದಂತಹ ಕಲೆಯು ಮನರಂಜನೆಯ ಜೊತೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿ ನಮಗೆ ಸಂಸ್ಕಾರವನ್ನು ನೀಡುತ್ತದೆ' ಎಂದು ಸಂಸದ...