ಕುಮಟಾ : ತಾಲ್ಲೂಕಿನ ಹೊಳೆಗದ್ದೆ ಟೊಲ್ ಬಳಿ ಇನ್ನೂರಕ್ಕೂ ಹೆಚ್ಚು ಲಾರಿಗಳು ನಿಂತಿದ್ದು ಎಲ್ಲ ಚಾಲಕರಿಗೆ ಆರು ದಿನಗಳಿಂದ ಊಟ ತಿಂಡಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ, ಇಂದು ಆ ಚಾಲಕರಿಗೆ ಊಟ ಬಡಿಸುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಾದ ಕುಮಟಾ ಹಾಗೂ ಹೊನ್ನಾವರ ಪಿಎಸ್ಐ ಗಳಾದ ಶ್ರೀ ಆನಂದಮೂರ್ತಿ ರವರು ಹಾಗೂ ಶಶಿಕುಮಾರ್ ಅವರು ಹಾಜರಿದ್ದು ಊಟ ಬಡಿಸುವ ಕಾರ್ಯದಲ್ಲಿ ಕೈಜೋಡಿಸಿ ಸರಳತೆ ಮೆರೆದಿದ್ದಾರೆ ಜನಮೆಚ್ಚುಗೆ ಪಡೆದಿದೆ.
ಈ ಬಗ್ಗೆ ಅನಿಸಿಕೆ ಹಂಚಿಕೊಂಡ ದೇವಗಿರಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಎಸ್ ಟಿ ನಾಯ್ಕ ಕಳೆದ ವಾರ ಸುರಿದ ಭಾರಿ ಮಳೆಗೆ ಜಿಲ್ಲೆಯಾದ್ಯಂತ ನದಿಗಳು ಉಕ್ಕಿ ಹರಿದಿದ್ದು ಅನೇಕ ಕಡೆ ಗುಡ್ಡಗಳು ಕುಸಿದ ರಸ್ತೆ ಸಂಚಾರ ಕಡಿತಗೊಂಡಿದೆ. ಯಲ್ಲಾಪುರ ಮಾರ್ಗವಾಗಿ ಹುಬ್ಬಳ್ಳಿ ಕಡೆ ಸಂಚರಿಸುವ ರಸ್ತೆ ಬಂದ್ ಆಗಿದೆ.
ಶಿರಸಿ ಮಾರ್ಗವಾಗಿ ತೆರಳುವ ರಸ್ತೆ ಕೂಡ ತುಂಬಾ ಹದಗೆಟ್ಟಿದ್ದು ಭಾರಿ ಸರಕು ವಾಹನ ಸಂಚಾರ ನಿಂತಿದೆ ಗುಡ್ಡ ಕುಸಿತದ ಕಾರಣದಿಂದ ಮತ್ತು ರಸ್ತೆ ಕೊಚ್ಚಿ ಹೋಗಿರುವುದರಿಂದ ಮಂಗಳೂರು ಕಡೆಯಿಂದ ಬಂದಿರುವ ಸಾಮಾನ್ಯ 300 ಕ್ಕೂ ಹೆಚ್ಚು ಲಾರಿ ಗಳು ಹೊಳೆಗದ್ದೆ ಟೊಲ್ ಬಳಿ ನಿಂತಿದೆ..ಅವರಿಗೆ ಊಟ ತಿಂಡಿ ಹಾಗೂ ನೀರಿನ ಸಮಸ್ಯೆ ಉಂಟಾಗಿತ್ತು ನಂತರ ನಾನು ಹಾಗೂ ನಮ್ಮ ಮಿತ್ರರು ಹಾಗೂ ಪ್ರಮುಖ ದಾನಿಗಳು ಮತ್ತು IRB ಅಧಿಕಾರಿಗಳು ಮಾತನಾಡಿಕೊಂಡು ಪ್ರತಿದಿನ ಆ ಎಲ್ಲ ಚಾಲಕರಿಗೆ ಊಟ ತಿಂಡಿ ನೀರಿನ ವ್ಯವಸ್ಥೆ ಮಾಡುತ್ತಿದ್ದೇವೆ. ಈ ಕಾರ್ಯಕ್ಕೆ ಬಾಲಕ್ರಷ್ಣ ಬಾಳೆರಿ, ಸುಬ್ರಮಣ್ಯ ಉಡದಂಗಿ, ಕುಮಟಾ ಪಿಎಸ್ಐ ಆನಂದಮೂರ್ತಿ, ಪಿಎಸ್ಐ ಶಶಿಕುಮಾರ್ ಹೊನ್ನಾವರ, ದೇವಗಿರಿ ವೀಪತ್ತು ಘಟಕದ ಅಧ್ಯಕ್ಷ ಮಾದೇವ ಪಟಗಾರ ಹಾಗೂ ಸದಸ್ಯರು , ಪಾಂಡು ಪಟಗಾರ, ರಾಜು ನಾಯ್ಕ, ಬಷೀರ್, ಸುರೇಶ್ ಶೇಟ್ಟಿ ಹಾಗೂ IRB ಯವರು ಸಹಕಾರ ನೀಡಿದ್ದಾರೆ ಎಂದರು.
ನಾವೂ ಕೂಡ ಬೇರೆ ಕಡೆ ಹೋದಾಗ ಇಂಥಹ ಪರಿಸ್ಥಿತಿ ಬಂದಾಗ ಆ ಕಷ್ಟ ಏನಂತ ಗೊತ್ತು ಆದ್ದರಿಂದ ಅವರಿಗೆ ಈ ವ್ಯವಸ್ಥೆ ಮಾಡಿದ್ದೇವೆ.
ನಮ್ಮ ಕುಮಟಾ ಹಾಗೂ ಹೊನ್ನಾವರ ಪಿಎಸ್ಐ ಗಳಾದ ಶ್ರೀ ಆನಂದಮೂರ್ತಿ ರವರು ಹಾಗೂ ಶಶಿಕುಮಾರ್ ರೂ ಕೂಡ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿ ತಾವೂ ಕೂಡ ಸ್ವತಃ ಅವರಿಗೆ ಊಟ ಬಿಡಿಸುವ ಕಾರ್ಯದಲ್ಲಿ ನೆರವಾದದ್ದು ನಮಗೆಲ್ಲ ತುಂಬಾ ಸಂತಸ ತಂದಿದೆ ಹಾಗೂ ಅವರೂ ಕೂಡ ಯಾವತ್ತೂ ಸಮಾಜ ಸೇವಾ ಕಾರ್ಯದಲ್ಲಿ ಯಾವತ್ತೂ ತೊಡಗಿಸಿಕೊಳ್ಳುವುದು ಅವರ ಮಾನವೀಯ ಗುಣ ಎಂದರು.
ಪೊಲೀಸ್ ಅಧಿಕಾರಿಗಳು ಸಾಮಾನ್ಯ ಜನರ ಜೊತೆ ಸಾಮಾನ್ಯರಂತೆ ಬಂದು ಸೇವಾಕಾರ್ಯದಲ್ಲಿ ಕೈಜೋಡಿಸಿದ್ದು ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಆ ಸುದ್ದಿಗಳ ಮೇಲೆ ಕ್ಲಿಕ್ ಮಾಡಿ
- ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೆಳದರ್ಜೆಗೆ ತಳ್ಳುವ ಪ್ರಯತ್ನ : ಜನತೆಯಲ್ಲಿ ಶಾಸಕ ಭೀಮಣ್ಣ ಕ್ಷಮೆ ಕೇಳಲು ಆಗ್ರಹಶಿರಸಿ: ಶಿರಸಿ ಪಂಡಿತ್ ಸಾರ್ವಜನಿಕ ಆಸ್ಫತ್ರೆ ವಿಚಾರವಾಗಿ ಸರ್ಕಾರ ವೈದ್ಯಕೀಯ ಸಲಕರಣೆಗಳಿಗೆ 30… Read more: ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೆಳದರ್ಜೆಗೆ ತಳ್ಳುವ ಪ್ರಯತ್ನ : ಜನತೆಯಲ್ಲಿ ಶಾಸಕ ಭೀಮಣ್ಣ ಕ್ಷಮೆ ಕೇಳಲು ಆಗ್ರಹ
- ಚೀನಾದಲ್ಲಿ ಪತ್ತೆಯಾಯ್ತಂತೆ ಕೊರೋನಾದಂತಹುದೇ ಇನ್ನೊಂದು ಹೊಸ ವೈರಸ್…!ಕೋವಿಡ್-19 (COVID-19) ವೈರಸ್ ಭೀಕರ ಸಾಂಕ್ರಾಮಿಕ ರೋಗಕ್ಕೆ ಕಾರಣವಾದಂತೆಯೇ ಪ್ರಾಣಿಯಿಂದ ಮನುಷ್ಯನಿಗೆ ಹರಡುವ… Read more: ಚೀನಾದಲ್ಲಿ ಪತ್ತೆಯಾಯ್ತಂತೆ ಕೊರೋನಾದಂತಹುದೇ ಇನ್ನೊಂದು ಹೊಸ ವೈರಸ್…!
- ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ರಾಷ್ಟ್ರ ಮಟ್ಟದಲ್ಲಿ ಹೆಸರಾದ ಸಂಪನ್ಮೂಲ ವ್ಯಕ್ತಿಗಳು ವಿಧಾತ್ರಿಯ ಜೊತೆಗೆ : ಇನ್ನು ಕುಮಟಾದಲ್ಲಿ ನಿರಂತರವಾಗಿ ತರಬೇತಿ.ಈಗಾಗಲೇ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡಿ, ಸಂಸ್ಥೆಯ ಹೆಸರನ್ನು… Read more: ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ರಾಷ್ಟ್ರ ಮಟ್ಟದಲ್ಲಿ ಹೆಸರಾದ ಸಂಪನ್ಮೂಲ ವ್ಯಕ್ತಿಗಳು ವಿಧಾತ್ರಿಯ ಜೊತೆಗೆ : ಇನ್ನು ಕುಮಟಾದಲ್ಲಿ ನಿರಂತರವಾಗಿ ತರಬೇತಿ.
- ಶ್ರೀದೇವಿ ಚೌಡೇಶ್ವರಿ ವಾರ್ಷಿಕ ಸಮಾರಾಧನೆ ಹಾಗೂ ಸನ್ಮಾನಸಿದ್ದಾಪುರ : ಇತ್ತೀಚಿಗೆ ತಾಲೂಕಿನ ಕುಳ್ಳೆ ಗ್ರಾಮದಲ್ಲಿ ಶ್ರೀದೇವಿ ಚೌಡೇಶ್ವರಿ ವಾರ್ಷಿಕ ಸಮಾರಾಧನೆ… Read more: ಶ್ರೀದೇವಿ ಚೌಡೇಶ್ವರಿ ವಾರ್ಷಿಕ ಸಮಾರಾಧನೆ ಹಾಗೂ ಸನ್ಮಾನ
- ಉಚಿತ ತರಬೇತಿಗೆ ಅರ್ಜಿ ಆಹ್ವಾನಕಾರವಾರ: ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ನ ಸಹಯೋಗದಲ್ಲಿ… Read more: ಉಚಿತ ತರಬೇತಿಗೆ ಅರ್ಜಿ ಆಹ್ವಾನ