ಕಾರವಾರ: ಇದೇ ಶನಿವಾರ ಬೆಳಿಗ್ಗೆ 9.00 ರಿಂದ ಸಂಜೆ 4.00 ರವರೆಗೆ ಕೋವಿಡ್ 19 ಲಸಿಕೆ ಹಾಕುವ ಕಾರ್ಯಕ್ರಮವನ್ನು ಉ.ಕ.ಜಿಲ್ಲೆಯ ಆರೋಗ್ಯ ಇಲಾಖೆಯ ಸಹಯೋಗದ ಅಡಿಯಲ್ಲಿ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವ ಮತ್ತು ಹೊರ ರಾಜ್ಯದ ಗೋವಾ ,ಮಹಾರಾಷ್ಟ್ರಕ್ಕೆ ಬೋಟ್ ಗಳಲ್ಲಿ ದುಡಿಯಲು ತೆರಳುವ 18 ವರ್ಷ ಮೇಲ್ಪಟ್ಟ ಎಲ್ಲ ಮೀನುಗಾರರಿಗೆ ಲಸಿಕಾಕರಣ ಆಯೋಜಿಸಲಾಗಿದೆ.
ಬೈತಕೋಲ ಕಾರವಾರ, ಅಮದಳ್ಳಿ, ತದಡಿ,ಹೊನ್ನಾವರ ಹಾಗೂ ಮಾವಿನಕುರ್ವೆ ಭಟ್ಕಳ ಮತ್ತು ಮೀನುಗಾರಿಕೆಯ ಇಳಿದಾಣ ಕೇಂದ್ರ ಗಳು- ಅಳ್ವೆಕೋಡಿ, ಬೆಳಂಬಾರ,ಗಂಗಾವಳಿ, ಬೇಲೆಕೇರಿ, ವನ್ನಳ್ಳಿ, ಮಂಜುಗುಣಿ, ತೆಂಗಿನ ಗುಂಡಿ,ಕಾಗಲ್ ಹಿಣಿ, ಹಾರವಾಡ, ಕಿಮಾನಿ ಹೊರಭಾಗ, ಅಳ್ವೆದಂಡೆ, ಶಶಿಹಿತ್ತಲು, ಮತ್ತು ಬೆಳಕೆ ಪ್ರದೇಶಗಳಲ್ಲಿ, ಲಸಿಕಾಕರಣ ಹಮ್ಮಿಕೊಳ್ಳಲಾಗಿದೆ.
ಎಲ್ಲ ಮೀನುಗಾರರು ತಪ್ಪದೆ ತಮ್ಮ ಮೀನುಗಾರಿಕೆ ಗುರುತಿನ ಪತ್ರ, ಆಧಾರ್ ಕಾರ್ಡ್ ಗಳೂಂದಿಗೆ ಮೇಲ್ಕಂಡ ಕೇಂದ್ರ ಗಳಲ್ಲಿ ಹಾಜರಾಗಿ ಲಸಿಕೆ ಹಾಕಿಸಿ ಕೂಳ್ಳಲು ಸೂಚಿಸಲಾಗಿದೆ. ಮೀನುಗಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಮೀನುಗಾರರ ಮುಖಂಡರು ಮೀನುಗಾರ ಕಾರ್ಮಿಕ ರನ್ನು ಲಸಿಕೆ ಹಾಕುವ ಕೇಂದ್ರಗಳಿಗೆ ಕರೆ ತರುವ ಮೂಲಕ ಈ ಲಸಿಕಾ ಅಭಿಯಾನವನ್ನು ಯಶಸ್ವಿಗೂಳಿಸಬೇಕೆಂದು ಮೀನುಗಾರಿಕೆ ಇಲಾಖೆ,ಕಾರವಾರ ವಲಯ ಇದರ ಜಂಟಿ ನಿರ್ದೇಶಕರಾದ ಪಿ.ನಾಗರಾಜು ಅವರು ಮಾಹಿತಿ ನೀಡಿದ್ದಾರೆ.
ಈ ಪ್ರಮುಖ ಸುದ್ದಿಗಳನ್ನು ಓದಲು ಸುದ್ದಿಗಳ ಮೇಲೆ ಕ್ಲಿಕ್ ಮಾಡಿ.
- ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೆಳದರ್ಜೆಗೆ ತಳ್ಳುವ ಪ್ರಯತ್ನ : ಜನತೆಯಲ್ಲಿ ಶಾಸಕ ಭೀಮಣ್ಣ ಕ್ಷಮೆ ಕೇಳಲು ಆಗ್ರಹಶಿರಸಿ: ಶಿರಸಿ ಪಂಡಿತ್ ಸಾರ್ವಜನಿಕ ಆಸ್ಫತ್ರೆ ವಿಚಾರವಾಗಿ ಸರ್ಕಾರ ವೈದ್ಯಕೀಯ ಸಲಕರಣೆಗಳಿಗೆ 30… Read more: ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೆಳದರ್ಜೆಗೆ ತಳ್ಳುವ ಪ್ರಯತ್ನ : ಜನತೆಯಲ್ಲಿ ಶಾಸಕ ಭೀಮಣ್ಣ ಕ್ಷಮೆ ಕೇಳಲು ಆಗ್ರಹ
- ಚೀನಾದಲ್ಲಿ ಪತ್ತೆಯಾಯ್ತಂತೆ ಕೊರೋನಾದಂತಹುದೇ ಇನ್ನೊಂದು ಹೊಸ ವೈರಸ್…!ಕೋವಿಡ್-19 (COVID-19) ವೈರಸ್ ಭೀಕರ ಸಾಂಕ್ರಾಮಿಕ ರೋಗಕ್ಕೆ ಕಾರಣವಾದಂತೆಯೇ ಪ್ರಾಣಿಯಿಂದ ಮನುಷ್ಯನಿಗೆ ಹರಡುವ… Read more: ಚೀನಾದಲ್ಲಿ ಪತ್ತೆಯಾಯ್ತಂತೆ ಕೊರೋನಾದಂತಹುದೇ ಇನ್ನೊಂದು ಹೊಸ ವೈರಸ್…!
- ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ರಾಷ್ಟ್ರ ಮಟ್ಟದಲ್ಲಿ ಹೆಸರಾದ ಸಂಪನ್ಮೂಲ ವ್ಯಕ್ತಿಗಳು ವಿಧಾತ್ರಿಯ ಜೊತೆಗೆ : ಇನ್ನು ಕುಮಟಾದಲ್ಲಿ ನಿರಂತರವಾಗಿ ತರಬೇತಿ.ಈಗಾಗಲೇ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡಿ, ಸಂಸ್ಥೆಯ ಹೆಸರನ್ನು… Read more: ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ರಾಷ್ಟ್ರ ಮಟ್ಟದಲ್ಲಿ ಹೆಸರಾದ ಸಂಪನ್ಮೂಲ ವ್ಯಕ್ತಿಗಳು ವಿಧಾತ್ರಿಯ ಜೊತೆಗೆ : ಇನ್ನು ಕುಮಟಾದಲ್ಲಿ ನಿರಂತರವಾಗಿ ತರಬೇತಿ.
- ಶ್ರೀದೇವಿ ಚೌಡೇಶ್ವರಿ ವಾರ್ಷಿಕ ಸಮಾರಾಧನೆ ಹಾಗೂ ಸನ್ಮಾನಸಿದ್ದಾಪುರ : ಇತ್ತೀಚಿಗೆ ತಾಲೂಕಿನ ಕುಳ್ಳೆ ಗ್ರಾಮದಲ್ಲಿ ಶ್ರೀದೇವಿ ಚೌಡೇಶ್ವರಿ ವಾರ್ಷಿಕ ಸಮಾರಾಧನೆ… Read more: ಶ್ರೀದೇವಿ ಚೌಡೇಶ್ವರಿ ವಾರ್ಷಿಕ ಸಮಾರಾಧನೆ ಹಾಗೂ ಸನ್ಮಾನ
- ಉಚಿತ ತರಬೇತಿಗೆ ಅರ್ಜಿ ಆಹ್ವಾನಕಾರವಾರ: ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ನ ಸಹಯೋಗದಲ್ಲಿ… Read more: ಉಚಿತ ತರಬೇತಿಗೆ ಅರ್ಜಿ ಆಹ್ವಾನ