Satwadhara News

ಹನುಮನ ಮೂರ್ತಿ ಸ್ಥಾಪನೆ ಮಾಡಿದ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯಲು ಮನವಿ

ಕುಮಟಾ : ಚಂದಾವರ ಗ್ರಾಮದ ಶ್ರೀ ಹನುಮಂತ ದೇವರ ಉತ್ಸವದ ಪ್ರಯುಕ್ತ ಚಂದಾವರ ವೃತ್ತದಲ್ಲಿ ದಿನಾಂಕ. 06-12-2018 ರಂದು ಹನುಮಂತ ದೇವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಹನುಮಂತ ದೇವರ ಮೂರ್ತಿ ಪ್ರತಿಷ್ಟಾಪಿಸಿದ ಕಾರ್ಯಕರ್ತರ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ.445 /2018 ಕಲಂ 290 ಐ.ಪಿ.ಸಿ ಮತ್ತು ಕಲಂ 3 ಕರ್ನಾಟಕ ಓಪನ್ ಪ್ಲೇಸಸ್ ( ಪ್ರಿವೆನ್ಷನ್ ಆಫ್ ಡಿಸ್ ಫಿಗರ್ ಮೆಂಟ್ ) ಆ್ಯಕ್ಟ್ ರೀತ್ಯ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು ಈ ಪ್ರಕರಣವನ್ನು ಹಿಂಪಡೆಯುವ ಬಗ್ಗೆ ಶಾಸಕ ದಿನಕರ ಶೆಟ್ಟಿಯವರು ಪ್ರಯತ್ನ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.

ಈ ಹಿಂದಿನಿಂದಲೂ ಅಮಾಯಕ ಕಾರ್ಯಕರ್ತರ ಮೇಲಿನ ಪ್ರಕರಣ ಹಿಂಪಡೆಯಬೇಕು ಎಂಬ ಒತ್ತಡ ಇತ್ತಾದರೂ ಇನ್ನೂ ವರೆಗೆ ಈ ವಿಷಯ ಯಾವುದೇ ಮುನ್ನೆಲೆಗೆ ಬಂದಿರಲಿಲ್ಲ. ಇದೀಗ ಶಾಸಕರೇ ಈ ಬಗ್ಗೆ ಅಧಿಕೃತವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈ ಬಗ್ಗೆ ಗೃಹಸಚಿವರು ಸಕಾರಾತ್ಮಕ ಧೋರಣೆ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.

ಶಾಸಕರು ಹೇಳಿದ್ದೇನು?

ಬೆಂಗಳೂರಿನಲ್ಲಿ ಮಾನ್ಯ ಗ್ರಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರನ್ನ ಭೇಟಿ ಮಾಡಿ ನನ್ನ ಕ್ಷೇತ್ರದ ಹೊನ್ನಾವರದ ಚಂದಾವರ ಗ್ರಾಮದ ಶ್ರೀ ಹನುಮಂತ ದೇವರ ಉತ್ಸವದ ಪ್ರಯುಕ್ತ ಚಂದಾವರ ವೃತ್ತದಲ್ಲಿ ದಿನಾಂಕ. 06-12-2018 ರಂದು ಹನುಮಂತ ದೇವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಹನುಮಂತ ದೇವರ ಮೂರ್ತಿ ಪ್ರತಿಷ್ಟಾಪಿಸಿದ ಹಿಂದೂ ಕಾರ್ಯಕರ್ತರ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ.445 /2018 ಕಲಂ 290 ಐ.ಪಿ.ಸಿ ಮತ್ತು ಕಲಂ 3 ಕರ್ನಾಟಕ ಓಪನ್ ಪ್ಲೇಸಸ್ ( ಪ್ರಿವೆನ್ಷನ್ ಆಫ್ ಡಿಸ್ ಫಿಗರ್ ಮೆಂಟ್ ) ಆ್ಯಕ್ಟ್ ರೀತ್ಯ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು 29 ಜನ ಅಮಾಯಕ ಹಿಂದೂ ಕಾರ್ಯಕರ್ತರು ತೊಂದರೆ ಅನುಭವಿಸುತ್ತಿದ್ದಾರೆ ಆದ್ದರಿಂದ ಸದರಿ ಕ್ರಿಮಿನಲ್ ಪ್ರಕರಣವನ್ನು ಸರಕಾರದಿಂದ ಹಿಂಪಡೆಯಲು ಶೀಘ್ರವಾಗಿ ಅಗತ್ಯ ಕ್ರಮ ಕೈಗೊಳ್ಳಲು ಮಾನ್ಯರಲ್ಲಿ ಕೋರಿದೆ‌‌,ಮಾನ್ಯ ಗ್ರಹ ಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು. – ಶಾಸಕ ದಿನಕರ ಶೆಟ್ಟಿ.

Comments

Leave a Reply

Your email address will not be published. Required fields are marked *