Satwadhara News

ಉತ್ತರಕನ್ನಡದ ಸ್ಥಳೀಯ ಸುದ್ದಿಗಳು.

ಜೋಯ್ಡಾ : ತಾಲೂಕಿನ ಅವಮೋಡ್ ಬಳಿ
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಹಳ್ಳಕ್ಕೆ ಬಿದ್ದ ಘಟನೆ ನಡೆದಿದೆ, ಕಾರಿನಲ್ಲಿ ನಾಲ್ವರು ಇದ್ದು ನಾಲ್ವರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಗೋವಾದಿಂದ ಅನಮೋಡ್ ಮಾರ್ಗವಾಗಿ ರಾಮನಗರಕ್ಕೆ ತೆರಳುತ್ತಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಾರು ಬಿದ್ದ ರೀತಿ ನೋಡಿದ್ರೆ, ಕಾರಿನಲ್ಲಿ ಇದ್ದವರು ಬದುಕಿದ್ದೆ ಪವಾಡ ಎಂಬoತಿದೆ.

ಕಾರವಾರದಲ್ಲಿ ಓರ್ವ ಸಾವು

ಕಾರವಾರ: ರೋಡ್ ಕ್ರಾಸ್ ಮಾಡುವ ವೇಳೆ ಬೈಕಿನ ಹಿಂಭಾಗಕ್ಕೆ ಕಾರೊಂದು ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಬಿಗಣಾದಲ್ಲಿ ನಡೆದಿದೆ. ಬಾಡದ ಪಾದ್ರಿಭಾಗದ ನಿವಾಸಿ ಇಜಾಕ್ ಲೂಯಿಸ್ ಫರ್ನಾಂಡೀಸ್ ಮೃತಪಟ್ಟ ಸವಾರ. ಈತ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಕೂರಿಸಿಕೊಂಡು ಅಂಕೋಲಾ ಕಡೆಗೆ ತೆರಳುತ್ತಿದ್ದಾಗ , ರೋಡ್ ಕ್ರಾಸ್ ಮಾಡುವ ವೇಳೆ, ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

Comments

Leave a Reply

Your email address will not be published. Required fields are marked *