Satwadhara News

‘ಉದಯ ರಾಗ’ ಸಂಗೀತ ಕಾರ್ಯಕ್ರಮವು ಅ.20ರಂದು

ಶಿರಸಿ: ಕಲ್ಯಾಣ ಸಂಗೀತ ಸಭಾ ಟ್ರಸ್ಟ್ ಸೋಮನಹಳ್ಳಿ ಇವರಿಂದ ‘ಉದಯ ರಾಗ’ ಸಂಗೀತ ಕಾರ್ಯಕ್ರಮವು ಅ.20ರಂದು ಬೆಳಿಗ್ಗೆ 9.30 ಘಂಟೆಯಿಂದ ಚಿಪಗಿಯ ನಂದಗೋಕುಲದಲ್ಲಿ ನಡೆಯಲಿದೆ. ಕಲಾವಿದೆ ವಿದೂಷಿ ಮಂಜರಿ ಅಲೆಗಾಂವ್ಕರ್ ಕಾರ್ಯಕ್ರಮ ನಡೆಸಿಕೊಡಲಿದ್ದು, ಇವರಿಗೆ ತಬಲಾದಲ್ಲಿ ಪಂ.ಗುರುಮೂರ್ತಿ ವೈದ್ಯ, ಹಾರ್ಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು ಸಾಥ್ ನೀಡಲಿದ್ದಾರೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.