Satwadhara News

ಭೀಕರ ಅಪಘಾತ : ಐವರಿಗೆ ಮಾರಣಾಂತಿಕ ಪೆಟ್ಟು.

ಶಿರಸಿ : ಶಿರಸಿ-ಸಿದ್ದಾಪುರ ರಾಜ್ಯ ಹೆದ್ದಾರಿಯ ಯಡಹಳ್ಳಿ ಸಮೀಪದ ಕಲ್ಲಕೈ ಬಳಿ ಕಾರು ಹಾಗು ಆಟೋರಿಕ್ಷಾ ನಡುವೆ ಭೀಕರ ಅಪಘಾತ ಮಂಗಳವಾರ ಸಂಜೆ ಸಂಭವಿಸಿದೆ. ಶಿರಸಿ ಕಡೆ ಸಾಗುತ್ತಿದ್ದ ಆಟೋರಿಕ್ಷಾ ಹಾಗು ಎದುರಿನಿಂದ ಬಂದ ಕಾರ್ ನಡುವೆ ಡಿಕ್ಕಿ ಸಂಭವಿಸಿದ್ದು, ಗಾಯಾಳುಗಳು ಒಂದೇ ಕುಟುಂಬದವರು ಎನ್ನಲಾಗಿದೆ. ನಗರದ ನಿಲೇಕಣಿಯ ಶಿರಾಲಿ ಕುಟುಂಬದವರು ಎನ್ನಲಾಗಿದೆ.

ಐದು ಜನರಿಗೆ ಗಂಭೀರ ಸ್ವರೂಪದಲ್ಲಿ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ. ಅಟೋದಲ್ಲಿದ್ದ ಆಶೋಕ ಶಿರಾಲಿ (೫೨) ನಿಲೇಕಣಿ,ವಿಶಾಲಾಕ್ಷ್ಮೀ (೫೫) ಅಂಭಾಗಿರಿ,ತ್ರೀಶಾ ಅಶೋಕ ಶಿರಾಲಿ (೯),ಅನಿತಾ ಅಶೋಕ ಶಿರಾಲಿ (೪೦) ,ಆದರ್ಶ ಅಶೋಕ ಶಿರಾಲಿ (೧೮) ಹಾಗು ಅಪರಂಜಿತ (೪೫) ಮಾರಣಾಂತಿಕವಾಗಿ ಗಾಯಗೊಂಡವರು ಎನ್ನಲಾಗಿದೆ.