Home HONNAVAR ನಾವು ನಮ್ಮಿಷ್ಟದ ಮೂಲಕ ಜನರ ಮನ ಗೆದ್ದ ಸೂರಣ್ಣ ಇನ್ನಿಲ್ಲ.

ನಾವು ನಮ್ಮಿಷ್ಟದ ಮೂಲಕ ಜನರ ಮನ ಗೆದ್ದ ಸೂರಣ್ಣ ಇನ್ನಿಲ್ಲ.

ಕುಮಟಾ : ನಾವು ನಮ್ಮಿಷ್ಟ ಸಾಮಾಜಿಕ ಜಾಲತಾಣ ಬಳಗವನ್ನು ಕಟ್ಟಿ 5 ಸಾವಿರಕ್ಕೂ ಹೆಚ್ಚು ಜನರಿಗೆ ಎಡ್ಮಿನ್ ಆಗಿ ಅವರ ದಿನನಿತ್ಯದ ಬದುಕು ಸುಂದರವಾಗುವಂತೆ ಕಾರ್ಯಕ್ರಮವನ್ನು ಕೊಡುತ್ತಿದ್ದ ಕಡತೋಕಾದ ಸೂರ್ಯನಾರಾಯಣ ಹೆಗಡೆ, ಸೂರಣ್ಣ ಎಂದು ಎಲ್ಲೆಯಲ್ಲಿ ಪ್ರಸಿದ್ದರು. ಕಡತೋಕಾ ಹೆಗಡೆಮನೆ ಕುಟುಂಬದ ಇವರು ಪೇಸ್ ಬುಕ್ ಬಳಗದ ಸಮ್ಮೇಳನಗಳನ್ನು ನಡೆಸಿ ಸಮಾಜದಲ್ಲಿ ಸಂತೋಷ, ಸೌಹಾರ್ದ, ಗೆಳೆತನವನ್ನು ಬಿತ್ತಿ ಬೆಳೆದಿದ್ದ ಸೂರಣ್ಣ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೊನ್ನಾವರ ತಾಲೂಕಿನ ಕಡತೋಕಾದ ಸೂರ್ಯನಾರಾಯಣ ಹೆಗಡೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ನಿಧನರಾಗಿದ್ದಾರೆ.

ಅತ್ಯಂತ ಕ್ರೀಯಾಶೀಲ ವ್ಯಕ್ತಿತ್ವದಿಂದ ಕಾರ್ಯಕ್ರಮದ ಸಂಘಟನೆ, ಸoಯೋಜನೆಯಲ್ಲೂ ಸೈ ಎನಿಸಿಕೊಂಡಿದ್ದ ಸೂರ್ಯನಾರಾಯಣ ಹೆಗಡೆ ತಮ್ಮ ಆಪ್ತ ವಲಯದಲ್ಲಿ ಸೂರಣ್ಣ ಎಂದೇ ಖ್ಯಾತಿ ಪಡೆದಿದ್ದರು.

ಅವರ ಅಗಲುವಿಕೆಗೆ ಅವರ ಸಹೋದರ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಸೇರಿದಂತೆ ಗಣ್ಯರು ಹಾಗೂ ಕುಟುಂಬದವರು ಕಂಬನಿ ಮಿಡಿದಿದ್ದಾರೆ.