Satwadhara News

ಸಮುದ್ರದಲ್ಲಿ ಮುಳುಗುತ್ತಿರುವ ನಾಲ್ವರ ರಕ್ಷಣೆ

ಗೋಕರ್ಣ: ಇಲ್ಲಿಯ ಮುಖ್ಯ ಕಡಲ ತೀರದ ಮಿಡ್ಸ್ ಬೀಚಿನ ಬಳಿ ಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದ ಕೇರಳ ಮೂಲದ ನಾಲ್ವರು ಪ್ರವಾಸಿಗರನ್ನು ಬುಧವಾರ ಸಂಜೆ ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿ ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ.

ಕೇರಳದ ಅದ್ಭತ್, ಮುರುಳಿ, ತೇಜಸ್ವಿ ಮತ್ತು ಪ್ರಿಯಾಮ್ಮಾದ ಎಂಬುವರು ರಕ್ಷಿಸಲ್ಪಟ್ಟ ನಾಲ್ವರು ಪ್ರವಾಸಿಗರು. ಇವರು ಕುಟುಂಬ ಸಮೇತ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಸಮುದ್ರದಲ್ಲಿ ಈಜಾಡುತ್ತಿರುವಾಗ ಅಲೆಯ ಸುಳಿಗೆ ಸಿಲುಕಿ ಮುಳುಗುವ ಹಂತದಲ್ಲಿದ್ದರು. ಕೂಡಲೇ ಇದನ್ನು ಗಮನಿಸಿದ ಜೀವ ರಕ್ಷಕ ಸಿಬ್ಬಂದಿ ಮಹಾಂತೇಶ ಹರಿಕಂತ್ರ, ಸ್ಥಳೀಯರಾದ ರಾಘವೇಂದ್ರ ಗೌಡ ಮತ್ತು ಸಂತೋಷ ಗೌಡ ಜೀವ ರಕ್ಷಕ ಪರಿಕರದೊಂದಿಗೆ ಧಾವಿಸಿ ನಾಲ್ವರನ್ನೂ ರಕ್ಷಿಸಿ ದಡಕ್ಕೆ ತಂದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.