ಶಿರಸಿ: ತಾಲೂಕಿನ ಸೋಂದಾ ಕ್ರಾಸ್ ಬಳಿಯ ಚೌಡಿಕೆರೆ ಹತ್ತಿರ ಸಾರಿಗೆ ಬಸ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ ಬಸ್ ಜಕಂಗೊಂಡಿದೆ. ಯಲ್ಲಾಪುರದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್ ಟಿಸಿ ಬಸ್‌ಗೆ ಗುದ್ದಿದ ಲಾರಿಯನ್ನು ಚಾಲಕ ಅಪಘಾತ ಸ್ಥಳದಿಂದ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಆತನ ವಿರುದ್ಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.