ಹೊನ್ನಾವರ : ನಿನ್ನೆ ಅಂಕೋಲಾ ತಾಲೂಕಿನ ಕೇಣಿ ಗ್ರಾಮದಲ್ಲಿ ಬಂದರು ನಿರ್ಮಾಣ ವಿರೋಧಿಸಿ ಮೀನುಗಾರರ ತೀವ್ರ ಹೋರಾಟ ನಡೆಸಿದ್ದು, ಇಂದು ಹೊನ್ನಾವರ ತಾಲೂಕಿನ ಕಾಸರಕೋಡಿನಲ್ಲಿ ಬಂದರು ನಿರ್ಮಾಣದ ಸರ್ವೆ ಕಾರ್ಯ ವಿರೋಧಿಸಿ ಮೀನುಗಾರರು ಕಡಲಿಗೆ ಇಳಿದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣದ ವಿರುದ್ದ ಮೀನುಗಾರರ ಆಕ್ರೋಶ ಹೆಚ್ಚಾಗಿದೆ.

ಬಂದರು ನಿರ್ಮಾಣದ ಮೂಲಕ ವ್ಯಾಪಾರ ವ್ಯವಹಾರ ವೃದ್ದಿ ಮಾಡಬೇಕು ಎನ್ನುವುದು ಸರ್ಕಾರದ ಚಿಂತನೆಯಾದರೆ ಇನ್ನೊಂದೆಡೆ ತಮ್ಮ ತುತ್ತ ಅನ್ನ ಸಂಪಾದನೆಯ ದುಡಿಮೆಯ ಸ್ಥಳ ಬಂದರಿಗೆ ಬಲಿಯಾಗಲಿದೆ ಎನ್ನುವ ಆತಂಕ ಮೀನುಗಾರಲ್ಲಿ ಉಂಟಾಗಿದೆ. ಮುಂದಿನ ದಿನದಲ್ಲಿ ಈ ಹೋರಾಟ ಯಾವ ಹಾದಿ ಹಿಡಿಯಲಿದೆ ಎನ್ನುವುದು ತಿಳಿಯದಾಗಿದೆ.

ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸುಮಾರು 600ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣಕ್ಕೆ ಮುಂದಾಗಿದ್ದು, ಇಂದು ಬಂದರು ರಸ್ತೆ ನಿರ್ಮಾಣ ಸಂಬಂಧ ಸರ್ವೆಗೆ ಜಿಲ್ಲಾಡಳಿತ ಮುಂದಾಗಿತ್ತು. ಮೀನುಗಾರರು ಪ್ರತಿಭಟನೆ ನಡೆಸದಂತೆ ಮುಂಚಿತವಾಗಿ ನಿಷೇದಾಜ್ಞೆ ಹೇರಿದ್ದು ನಿಷೇದಾಜ್ಞೆಗೂ ಲೆಕ್ಕಿಸದ ಮೀನುಗಾರರು ಶಾಲಾ ಮಕ್ಕಳನ್ನ ಕರೆದುಕೊಂಡು ಬಂದು ಪ್ರತಿಭಟನೆಗೆ ಮುಂದಾಗಿದ್ದರು.

ಮೀನಗಾರರ ಪ್ರತಿಭಟನೆ ಹಿನ್ನಲೆಯಲ್ಲಿ ಸುಮಾರು 50ಕ್ಕೂ ಅಧಿಕ ಮೀನುಗಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ವಶಕ್ಕೆ ಪಡೆದ ಮೀನುಗಾರರ ಬಿಡುಗಡೆ ಮಾಡುವಂತೆ ಉಳಿದವರು ಪ್ರತಿಭಟನೆ ಮುಂದುವರೆಸಿದ್ದರು.

ಹೊನ್ನಾವರ ಬಂದರು ನಿರ್ಮಾಣ ಸಂಬಂಧ ಕಳೆದ ಮೂರ್ನಾಲ್ಕು ವರ್ಷದಿಂದ ಹೋರಾಟ ನಡೆಯುತ್ತಲೇ ಇದೆ. ಇಂದು ಬಂದರು ನಿರ್ಮಾಣ ಸಂಬಂಧ ಸರ್ವೆ ಕಾರ್ಯ ಮಾಡಲು ಮುಂದಾದ ವೇಳೆಯಲ್ಲಿ ಮೀನುಗಾರರು ದೊಡ್ಡ ಮಟ್ಟದಲ್ಲಿಯೇ ಪ್ರತಿಭಟನೆಗೆ ಮುಂದಾಗಿದ್ದರು. ಇನ್ನು ಕಡಲಿಗೆ ಇಳಿದು ಮೀನುಗಾರರು ಪ್ರತಿಭಟಿಸಿದ್ದು ಸುಮಾರು ನಾಲ್ವರು ಅಸ್ಥಸ್ಥಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಬಂಧಿತರನ್ನು ಬಿಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ ಬಾಲಕಿ ಅಪೇಕ್ಷಾ

ಕಾಸರಕೋಡ ಬಂದರು ನಲ್ಲಿ ವಾಣಿಜ್ಯ ಬಂದರು ನಿರ್ಮಾಣ ಸರ್ವೆ ನಡೆಯುತ್ತಿದ್ದು, ಅಲ್ಲಿನ ಮೀನುಗಾರರಿಗೆ ರಕ್ಣಣೆ ನೀಡ ಬೇಕು, ನಮ್ಮ ಸ್ಥಳದಲ್ಲಿ ಯಾವುದೇ ವಾಣಿಜ್ಯ ಬಂದರು ಮಾಡುವಂತಿಲ್ಲಾ ಎಂದು ಮೀನುಗಾರರು ಹೋರಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಅಲ್ಲಿ ಮಿನುಗಾರರು ಸರ್ವೆ ಮಾಡಲು ಅಡ್ಡಿ ಪಡಿಸಿದ್ದಕ್ಕೆ ಅವರನ್ನು ಬಂದಿಸಲಾಗಿದೆ. ಆಗ ಕೆಲವು ಮೀನುಗಾರರು ಅತ್ಮ ಹತ್ಯೆಗೆ ಪ್ರಯತ್ನಿಸಿದ್ದು ಅವರ ಜೀವ ರಕ್ಷಣೆ ಮಾಡಲಾಗಿದೆ.

ಬಂಧಿತ ಮೀನುಗಾರರನ್ನು 4 ಗಂಟೆ ಒಳಗೆ ಬಿಡದಿದ್ದರೆ ಅಪೇಕ್ಷಾ ಎಂಬ ಬಾಲಕಿ ಅತ್ಮಹತ್ಯೆ ಮಾಡಿಕೊಳ್ಳುವದಾಗಿ ತಿಳಿಸಿದ್ದಾರೆ. ನಮಗೆ ನ್ಯಾಯ ಬೇಕು, ಮೀನುಗಾರ ಸಚಿವರಾದ ಮಂಕಾಳ ವೈದ್ಯರು ನಮಗೆ ನಾಯ್ಯ ಕೊಡಿಸಬೇಕು. ಅವರು ಸಚಿವರಾಗುವ ಮೊದಲು ನಮಗೆ ಹೆಳಿದ್ದರು ಯಾವುದೆ ವಾಣಿಜ್ಯ ಬಂದರು ಅಗಲು ಬಿಡುವುದಿಲ್ಲಾ, ನಾನು ನಿಮ್ಮ ಜೊತೆ ಇರುತ್ತೇನೆ ಎಂದವರು ಇವತ್ತು ಇಷ್ಟೊಂದು ಅನ್ಯಾಯ ವಾಗುತ್ತಿದ್ದರೂ ಸಚಿವರು ಸ್ಥಳಕ್ಕೆ ಬರಲಿಲ್ಲಾ ನನ್ನ ಅತ್ಮ ಹತ್ಯೆಗೆ ವಾಣಿಜ್ಯ ಬಂದರು , ಜಿಲ್ಲಾಧಿಕಾರಿಗಳು. ಸಚಿವರಾದ ಮಂಕಾಳ ಎಸ್ ವೈದ್ಯರವರೇ ಕಾರಣ ಎಂದು ಅತ್ಮ ಹತ್ಯೆ ಮಾಡಿ‌ಕೊಳ್ಳುತ್ತೇವೆ ಎಂದು ಅಪೇಕ್ಷಾರವರು ಹೇಳಿದ್ದಾರೆ.