ಭಟ್ಕಳ : ಭಟ್ಕಳದಿಂದ ಹೊನ್ನಾವರ ಕಡೆ ಚಲಿಸುತ್ತಿದ್ದ ಟೆಂಪೋಗೆ ಹಿಂದಿನಿoದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಟೆಂಪೊದಲ್ಲಿದ್ದ ಪ್ರಯಾಣಿಕನೋರ್ವ ಗಾಯಗೊಂಡಿರುವ ಘಟನೆ ಬೈಲೂರು ಕ್ರಾಸಿನ ಬಳಿ ನಡೆದಿದೆ.
ಹೊನ್ನಾವರ ಮಂಕಿಯ ಸಿಂಗಾಣಿ ಹಿತ್ಲುವಿನ ಅಣ್ಣಪ್ಪ ನಾಯ್ಕ ಅವರು ಫೆ ೨೫ರಂದು ತಮ್ಮ ಟೆಂಪೋ ಓಡಿಸುತ್ತಿದ್ದರು. ಭಟ್ಕಳದಿಂದ ಹೊನ್ನಾವರ ಕಡೆ ಬರುತ್ತಿದ್ದ ಟೆಂಪೋ ಬೈಲೂರು ಕ್ರಾಸಿನ ಬಳಿ ನಿಂತಿತು. ಅಲ್ಲಿ ಇಳಿಯಬೇಕಾದ ಪ್ರಯಾಣಿಕರು ಇಳಿದಿದ್ದರು. ಟೆಂಪೋ ಹತ್ತುವ ಪ್ರಯಾಣಿಕರು ಕಾಯುತ್ತಿದ್ದರು.
ಈ ವೇಳೆ ಕೇರಳದ ಲಾರಿ ರಸ್ತೆ ಅಂಚಿನಲ್ಲಿ ನಿಂತಿದ್ದ ಟೆಂಪೋಗೆ ಹಿಂದಿನಿಂದ ಡಿಕ್ಕಿ ಹೊಡೆದರು. ಪರಿಣಾಮ ಟೆಂಪೊದಲ್ಲಿದ್ದ ಹೊನ್ನಾವರ ಮಂಕಿಯ ನರೇಂದ್ರ ಗೌಡ ಗಾಯಗೊಂಡಿದ್ದು, ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.