ಹೊಸಾಡದ ಅಮೃತಧಾರಾ ಗೋ ಶಾಲೆಯಲ್ಲಿ ಆಯೋಜನೆ : ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಕರೆ.

ಕುಮಟಾ : ವೈಜ್ಞಾನಿಕ ಯುಗದಲ್ಲಿಯೂ ಜನರನ್ನು ಕಿತ್ತು ತಿನ್ನುವ ಮಾರಕ ಖಾಯಿಲೆಗಳಿಂದ ಮುಕ್ತಿ ಪಡೆಯಲು ಹರ ಸಾಹಸವನ್ನೇ ಮಾಡಬೇಕು. ಜೀವನದಲ್ಲಿ ಗಳಿಸಿದ್ದನ್ನೆಲ್ಲವನ್ನೂ ಆಸ್ಪತ್ರೆಗೆ ಸುರಿದರೂ, ರೋಗದಿಂದ ಮುಕ್ತಿ ಸಿಕ್ಕೀತು ಎಂಬ ನಂಬುಗೆಯಿಲ್ಲ. ಆದರೆ ಇಂತಹ ಕಾಲಘಟ್ಟದಲ್ಲಿಯೂ ‘ಪಂಚಗವ್ಯ ಚಿಕಿತ್ಸೆ’ ಬಹು ರೋಗಗಳಿಗೆ ಸಂಜೀವಿನಿಯಾಗಿದೆ. ಅದರಲ್ಲಿಯೂ ಡಾ. ಡಿ.ಪಿ ರಮೇಶ ಅವರು ಹಲವಾರು ವಿಧದಲ್ಲಿ ಸಂಶೋಧನೆಗಳನ್ನು ನಡೆಸಿದ್ದು, ಕ್ಯಾನ್ಸರ್ ನಂತಹ ಮಾರಕ ಖಾಯಿಲೆಗಳನ್ನು ಪಂಚಗವ್ಯ ಚಿಕತ್ಸೆಯ ಮೂಲಕವೇ ಹತೋಟಿಗೆ ತಂದಿರುವುದು ವಿಶೇಷ.

ವೇದಲೋಕ ಗೋವಿನಲ್ಲಿ ಬದುಕು ಕಟ್ಟಿಕೊಂಡವರ ಬದುಕು ಹಸನು ಎಂದಿರುವುದೂ ಅದೇ ಕಾರಣಕ್ಕೆ. ಅಂತಹ ಗೋವಿನ ಉತ್ಪನ್ನಗಳಿಂದ ನಡೆಸುವ ಚಿಕಿತ್ಸೆ ಮಾ. ೨ ರಂದು ತಾಲೂಕಿನ ಮೂರೂರಿನ ಹೊಸಾಡದ ಅಮೃತಧಾರಾ ಗೋ ಶಾಲೆಯಲ್ಲಿ ನಡೆಯಲಿದೆ. ಡಾ. ಡಿ.ಪಿ. ರಮೇಶ ಈ ಶಿಬಿರದಲ್ಲಿ ಹಾಜರಿದ್ದು, ಮಾರ್ಗದರ್ಶನ ಮಾಡಲಿದ್ದಾರೆ.

ಡಾ. ಡಿ.ಪಿ ರಮೇಶ ಪರಿಚಯ ಇಲ್ಲಿದೆ.

ಹಲವರಿಗೆ ಬದುಕು ನೀಡಿದ ಭಗವಂತ ಎಂದೇ ಬಿಂಬಿತರಾಗಿದ್ದಾರೆ ಡಾ. ಡಿ.ಪಿ ರಮೇಶ. ಪ್ರಾಚೀನ ವೈದ್ಯಕೀಯ ವಿಜ್ಞಾನವಾದ ಆಯುರ್ವೇದದಲ್ಲಿ ಅಪಾರ ಆಸಕ್ತಿ ಹೊಂದಿದ್ದವರು, 1992 ರಲ್ಲಿ ಆಯುರ್ವೇದ ಕಾಲೇಜಿಗೆ ಸೇರಿದರು. ಆಯುರ್ವೇದ ವೈದ್ಯಕೀಯದಲ್ಲಿ ಅನೇಕ ಔಷಧಿಗಳಲ್ಲಿ ಹಾಲಿನ ಪ್ರಮುಖ ಪಾತ್ರವನ್ನು ಅವರು ಗಮನಿಸಿದರು. ಪ್ರಾಯೋಗಿಕ ಆಯುರ್ವೇದದ ಕುರಿತು ಪ್ರಾಧ್ಯಾಪಕಿ ಡಾ. ಅಹಲ್ಯ ಅವರ ಉಪನ್ಯಾಸಗಳನ್ನು ಕೇಳಿದ ನಂತರ, ಆಯುರ್ವೇದದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವಲ್ಲಿ ಹೆಚ್ಚು ತೊಡಗಿಸಿಕೊಂಡರು. ನಂತರ ಅವರ ತೀವ್ರ ಸಂಶೋಧನೆಯ ಸಮಯದಲ್ಲಿ ಪಂಚಗವ್ಯದ (ಹಾಲು, ಮೊಸರು, ತುಪ್ಪ, ಗೋಮೂತ್ರ ಮತ್ತು ಹಸುವಿನ ಸಗಣಿ) ಮಹತ್ವದ ಬಗ್ಗೆ ಕಂಡುಕೊಂಡರು. ಅಂದಿನಿಂದ ಆಯುರ್ವೇದದ ಒಂದು ಶಾಖೆಯಾದ ಪಂಚಗವ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದರು ಮತ್ತು ಸ್ಥಳೀಯ ಮತ್ತು ವಿದೇಶಿ ವಂಶವಾಹಿಗಳ ಬಗ್ಗೆ ಸಂಶೋಧನೆಯನ್ನು ಮುಂದುವರೆಸಿದರು.

ನಂತರ ಮುಂದುವರೆದು ಜ್ಞಾನಗಂಗಾ ಗೋಮೂತ್ರ ವಿತರಣಾ ಕೇಂದ್ರದಲ್ಲಿ 3 ವರ್ಷ ಕೆಲಸ ಮಾಡಿದ್ದಾರೆ. ನಂತರ ಡಾ. ಜೈನ್ ಅವರ ಹಸು ಮೂತ್ರ ಚಿಕಿತ್ಸಾ ಆರೋಗ್ಯ ಚಿಕಿತ್ಸಾಲಯದಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದರು. ಸುಮಾರು 1000 ವಿವಿಧ ಖಾಯಿಲೆಗಳಿಗೆ ಚಿಕಿತ್ಸೆ ನೀಡಿದರು. ಅದರಲ್ಲಿ ಬಹು ಉಲ್ಲೇಖನೀಯವಾದುದ್ದೆಂದರೆ, ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಾಗೂ ಆಸ್ಪತ್ರೆಯಲ್ಲಿ ಅವನ್ನು ಉಳಿಸಲು ಸಾಧ್ಯವಿಲ್ಲವೆಂದು ಹೇಳಿದ್ದ ನಂತರದಲ್ಲಿಯೂ, ಡಾ. ಡಿ.ಪಿ ರಮೇಶ ಅವರ ಪಂಚಗವ್ಯ ಚಿಕಿತ್ಸೆಯಿಂದ ಅವನು 6 ತಿಂಗಳಲ್ಲಿ ಚೇತರಿಸಿಕೊಂಡನು. ಈಗ ಅವನು ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾನೆ.

ಡಾ. ಡಿ.ಪಿ ರಮೇಶ ಅಮೆರಿಕ, ಫ್ರಾನ್ಸ್ ಮತ್ತು ಇಟಲಿಯಂತಹ 40 ಕ್ಕೂ ಹೆಚ್ಚು ದೇಶಗಳ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. 800 ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, 150 ಕ್ಕೂ ಹೆಚ್ಚು ಮೂತ್ರಪಿಂಡದ ಕಾಯಿಲೆಗಳು, 400 ಕ್ಕೂ ಹೆಚ್ಚು ಚರ್ಮ ರೋಗಗಳು, 1000ಕ್ಕೂ ಹೆಚ್ಚು ಆಸ್ತಮಾ ರೋಗಿಗಳು, 2000ಕ್ಕೂ ಅಧಿಕ ಹೊಟ್ಟೆ ಸಂಬಂಧಿತ ಸಮಸ್ಯೆಗಳು ಮತ್ತು 15 ಎಚದ.ಐ.ವಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಡಾ. ಡಿ.ಪಿ ರಮೇಶ ಅವರ ಸಂಶೋಧನೆಗಳು.

ಪಂಚಗವ್ಯ ಆಧಾರಿತ ದೈನಂದಿನ ಉತ್ಪನ್ನಗಳಾದ ಸ್ನಾನದ ಸೋಪ್, ಶಾಂಪೂ, ಫೇಸ್ ಪೌಡರ್, ಫೇಸ್ ಕ್ರೀಮ್ ಇತ್ಯಾದಿಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ತಯಾರಿಸಿದ ಸ್ನಾನದ ಸೋಪ್ ಈಗಾಗಲೇ ಮಾರುಕಟ್ಟೆಯಲ್ಲಿದೆ.

ಇವರು ೨೦೦೫ರಲ್ಲಿ “ಗೋವೇದ” ಎಂಬ ಪುಸ್ತಕ ಪ್ರಕಟಿಸಿದ್ದಾರೆ. “ಆಯುಷ್ ಹೆಲ್ತ್ ಇನ್ಫೋ” ಎಂಬ ಇಂಗ್ಲಿಷ್ ನಿಯತಕಾಲಿಕೆಯ ಸಂಪಾದಕರಾಗಿದ್ದು, “ಆಯುರ್ವರ್ಧಕ ಗೋವೇದ” ಕನ್ನಡ ಮಾಸಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದರು. ಕನ್ನಡಪ್ರಭ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಹೊಸದಿಗಂತ, ವೈದ್ಯಲೋಕ ಮುಂತಾದ ಪ್ರಮುಖ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಗೋಮೂತ್ರ ಚಿಕಿತ್ಸೆಯ ಕುರಿತು ಟಿವಿ9, ಸುವರ್ಣ, ಉದಯ ಟಿವಿ, ಕಸ್ತೂರಿ ಮತ್ತು ಸ್ಥಳೀಯ ಕೇಬಲ್ ಟಿವಿ ಚಾನೆಲ್‌ಗಳಲ್ಲಿ ಹಲವು ಟಿವಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಇವರ ಸಾಮಾಜಿಕ ಚಟುವಟಿಕೆಗಳು.

ಇವರು ಸರ್ಕಾರಿ ಆಯುರ್ವೇದ ವಿದ್ಯಾರ್ಥಿಗಳ ಸಂಘವು ಆಯುರ್ವೇದ ಜಾಗೃತಿಗಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ನಡೆಸಿದ ಸೈಕಲ್ ಯಾತ್ರೆಯಲ್ಲಿ ಭಾಗವಹಿಸಿದರು. ಈ ಸೈಕಲ್ ಯಾತ್ರೆಯು ಸುಮಾರು ೨೦ ಹಳ್ಳಿಗಳಲ್ಲಿ ಉಚಿತ ಶಿಬಿರಗಳು ಮತ್ತು ಉಚಿತ ಆಯುರ್ವೇದ ಔಷಧಿ ವಿತರಣೆಯನ್ನು ಒಳಗೊಂಡಿತ್ತು. ಇವರು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಒರಿಸ್ಸಾ ಚಂಡಮಾರುತದ ಸಮಯದಲ್ಲಿ, 10 ವೈದ್ಯರ ತಂಡದೊಂದಿಗೆ 15 ದಿನಗಳ ಶಿಬಿರದಲ್ಲಿ ಭಾಗವಹಿಸಿದರು.
ಸುನಾಮಿಯ ಸಮಯದಲ್ಲಿ ವೈದ್ಯಕೀಯ ಪರಿಹಾರ ಶಿಬಿರದಲ್ಲಿ 10 ದಿನಗಳ ಕಾಲ ಸೇವೆ ಸಲ್ಲಿಸಿದರು. 600ಕ್ಕೂ ಅಧಿಕ ಉಚಿತ ಶಿಬಿರಗಳನ್ನು ನಡೆಸಿದ್ದಾರೆ, ಟಿವಿ ಸಂದರ್ಶನಗಳನ್ನು ನೀಡಿದ್ದಾರೆ, ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ.

3000 ಕ್ಕೂ ಅಧಿಕ ಔಷಧೀಯ ಸಸ್ಯಗಳನ್ನು ನೆಟ್ಟು ಆರೋಗ್ಯ ರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದವರು ಇವರು. ಬೆಂಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗ ಸೇರಿದಂತೆ ಕರ್ನಾಟಕದ ಸುಮಾರು 25 ಜಿಲ್ಲೆಗಳಲ್ಲಿ ಉಚಿತ ಶಿಬಿರಗಳನ್ನು ನಡೆಸಿ 1000 ಕ್ಕೂ ಹೆಚ್ಚು ರೋಗಿಗಳ ಪಾಲಿಗೆ ಆಪದ್ಬಾಂಧವ ಎನಿಸಿಕೊಂಡಿದ್ದಾರೆ.

ಇವರ ಮಾರ್ಗದರ್ಶನದಲ್ಲಿ ನಡೆಯುವ ‘ವಿಶೇಷ ಪಂಚಗವ್ಯ ಚಿಕಿತ್ಸಾ ಶಿಬಿರ’ದಲ್ಲಿ‌ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅದರ ಪ್ರಯೋಜನ ಪಡೆಯುವಂತೆ ಅಮೃತಧಾರಾ ಗೋ ಶಾಲಾ ಸಮಿತಿ ಸಾರ್ವಜನಿಕರಲ್ಲಿ ವಿನಂತಿಸಿದೆ.p