Satwadhara News

ಏ.೨೬ ರಂದು ಚುಟುಕು ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ತಿಗಣೇಶ ಮಾಗೋಡ ಆಯ್ಕೆ.

ಕುಮಟಾ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕುಮಟಾ ಘಟಕದ ಆಶ್ರಯದಲ್ಲಿ ಕುಮಟಾ ತಾಲೂಕಿನ ನಾಲ್ಕನೇ ವರ್ಷದ ಚುಟುಕು ಸಾಹಿತ್ಯ ಸಮ್ಮೇಳನವನ್ನು ಕುಮಟಾ ಪುರಭವನದಲ್ಲಿ ಏ.೨೬ ಶನಿವಾರದಂದು ಬೆಳಿಗ್ಗೆ 10 ಗಂಟೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಣಪತಿ ಅಡಿಗುಂಡಿ ಪ್ರಕಟಣೆಮೂಲಕ ತಿಳಿಸಿದ್ದಾರೆ.

ಸಮ್ಮೇಳನದ ಸರ್ವಾಧ್ಯಕ್ಷತೆಗೆ ಹಿರಿಯ ಚುಟುಕು ಸಾಹಿತಿ ಕಲಾವಿದ ತಿಗಣೇಶ ಮಾಗೋಡ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಸಮ್ಮೇಳನಕ್ಕೆ ಚುಟುಕು ಸಾಹಿತ್ಯಾಭಿಮಾನಿಗಳು ತಮ್ಮ ಸಹಕಾರ ನೀಡುವಂತೆ ಸಂಘಟಕರು ಕೋರಿದ್ದಾರೆ.

ಜಿಲ್ಲಾಮಟ್ಟದ ಮುಕ್ತ ಚುಟುಕು ಬರಹ ಸ್ಪರ್ಧೆ

ಸಮ್ಮೇಳನದ ಅಂಗವಾಗಿ ಜಿಲ್ಲಾಮಟ್ಟದ ಮುಕ್ತ ಚುಟುಕು ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಭಾಗವಹಿಸುವವರು,
ಚುಟುಕುಗಳೊಂದಿಗೆ ತಮ್ಮ ಸ್ವ ವಿವರ ಮತ್ತು ಭಾವಚಿತ್ರವನ್ನು ಏ.೨೦ರ ಒಳಗೆ ಕಳುಹಿಸಲು ತಿಳಿಸಲಾಗಿದೆ. ನಂತರ ಬಂದ ಚುಟುಕುಗಳನ್ನು ಪರಿಗಣಿಸಲಾಗುವುದಿಲ್ಲ. ಇದು ಮುಕ್ತ ಸ್ಪರ್ಧೆಯಾಗಿದ್ದು, ವಯಸ್ಸಿನ ಯಾವುದೇ ನಿರ್ಬಂಧ ಇರುವುದಿಲ್ಲ. ಒಬ್ಬರು ನಾಲ್ಕು ಚಟುಕುಗಳನ್ನು ಮಾತ್ರ ಕಳುಹಿಸತಕ್ಕದ್ದು. ಇದರಲ್ಲಿ ಎರಡನ್ನು ಮಾತ್ರ ಆಯ್ಕೆ ಮಾಡಿಕೊಂಡು ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಹಾಗೂ ಆಯ್ಕೆಯಾದ ಎರಡು ಚುಟುಕುಗಳನ್ನು ಸಮ್ಮೇಳನದಲ್ಲಿ ವಾಚಿಸಲು ಅವಕಾಶ ನೀಡಲಾಗುವುದು.

ಕಳುಹಿಸುವ ಚುಟುಕಿನಲ್ಲಿ ಒಂದು ಆಶಯ ಹಾಗೂ ಸಮಾಜಕ್ಕೊಂದು ಸಂದೇಶವಿರಲಿ. ಆಯ್ಕೆಯಾದ ಉತ್ತಮ 3 ಚುಟುಕುಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ನೀಡಲಾಗುವುದು. ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣ ಸಂಚಿಕೆಯನ್ನು ನೀಡಲಾಗುವುದು. ಎಂದು ಅವರು ತಿಳಿಸಿದ್ದು, ಚುಟುಕುಗಳನ್ನು ಉದಯ ಎಸ್. ಮಡಿವಾಳ ಪೋಸ್ಟ್ ಹೆಗಡೆ ತಾಲ್ಲೂಕು ಕುಮಟಾ 581330 ಇವರಿಗೆ ಅಂಚೆಯ ಮೂಲಕ ಅಥವಾ 9008810592 ಈ ನಂಬರ್ ಗೆ ವಾಟ್ಸಪ್ ಮಾಡಬಹುದಾಗಿದೆ.