Satwadhara News

Category: SIRSI

ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವು.

    ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವು.

    ಶಿರಸಿ : ಇಲ್ಲಿನ ಗಾಂತನಗರದಲ್ಲಿರುವ ಬಾಡಿಗೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

    ರುಕ್ಷಾಭಾಯಿ (68) ಮೃತ ಮಹಿಳೆ. ಈಕೆ ಮಾ.10 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಾಡಿಗೆ ಮನೆಯಲ್ಲಿ ಮಲಗಿದ್ದಾಗ ಕಾಟ್ ನಿಂದ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಳು. ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಎ.11 ರಂದು ಸಂಜೆ ಮೃತಪಟ್ಟಿದ್ದಾಳೆ ಎಂದು ಪುತ್ರಿ ಗಾಯತ್ರಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಪೇಟೆಗೆ ಹೋಗಲು ಸಿದ್ಧನಾಗುತ್ತಿದ್ದವ ಒಮ್ಮೆಲೇ ಹೌಹಾರಿದ.

    ಪೇಟೆಗೆ ಹೋಗಲು ಸಿದ್ಧನಾಗುತ್ತಿದ್ದವ ಒಮ್ಮೆಲೇ ಹೌಹಾರಿದ.

    ಶಿರಸಿ : ಪೇಟೆಗೆ ಹೋಗಲೆಂದು ಅಂಗಿ ತೊಟ್ಟು, ಪ್ಯಾಂಟ್ ತೊಡಲೆಂದು ಪ್ಯಾಂಟ್ ಗೆ ಕೈ ಹಾಕಿದ ಸಂದರ್ಭದಲ್ಲಿ ಹಾವೊಂದು ಸಿಕ್ಕಿ ವ್ಯಕ್ತಿ ಹೌಹಾರಿದ ಘಟನೆ ಶಿರಸಿ ನಾರಾಯಣಗುರು ನಗರದಲ್ಲಿ ನಡೆದಿದೆ.

    ಇಲ್ಲಿಯ ಮಾಂತೇಶ ಅವರು ಶುಕ್ರವಾರ ಸಂಜೆ ಪೇಟೆಗೆ ಹೋಗುವವರಿದ್ದರು. ಅಂಗಿ ಧರಿಸಿದ ಅವರು ಪ್ಯಾಂಟಿಗಾಗಿ ಕೈ ಹಾಕಿದರು. ಆಗ, ಅದರೊಳಗಿದ್ದ ನಾಗರ ಬುಸ್ ಎಂದಿದ್ದು, ಮಾಂತೇಶ್ ಅವರು ಬೆಚ್ಚಿ ಬಿದ್ದಿದ್ದಾರೆ.

    ತಕ್ಷಣ ಆ ಪ್ಯಾಂಟನ್ನು ನೆಲದ ಮೇಲೆ ಎಸೆದು ದೂರ ಸರಿದರು. ಕಂಗಾಲಾದ ಮಾಂತೇಶ ಅವರು ಜೋರಾಗಿ ಬೊಬ್ಬೆ ಹೊಡೆದರು. ಅದನ್ನು ಕೇಳಿ ಅಕ್ಕ-ಪಕ್ಕದವರು ಸಹ ಆಗಮಿಸಿದರು. ಬಳಿಕ ಉರಗತಜ್ಞ ಪ್ರಶಾಂತ ಹುಲೆಕಲ್ ಅವರನ್ನು ಜನ ಸ್ಥಳಕ್ಕೆ ಕರೆಯಿಸಿದರು.

    ಪ್ಯಾಂಟಿನ ಒಳಗೆ ಸಿಲುಕಿಕೊಂಡಿದ್ದ ಹಾವನ್ನು ಪ್ರಶಾಂತ ಹುಲೆಕಲ್ ಹೊರತೆಗೆದರು. ನಂತರ ಅದನ್ನು ಕಾಡಿಗೆ ಬಿಟ್ಟರು. ಮಾಂತೇಶ ಕುಟುಂಬದವರು ಸಹ ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

  • ಕೃಷಿ ಹಾಗೂ ಗೋಪಾಲನೆ ಆರೋಗ್ಯಕರ ಜೀವನದ ಅಗತ್ಯತೆಗಳು : ಡಾ. ಸೌಮ್ಯಶ್ರೀ ಶರ್ಮಾ

    ಕೃಷಿ ಹಾಗೂ ಗೋಪಾಲನೆ ಆರೋಗ್ಯಕರ ಜೀವನದ ಅಗತ್ಯತೆಗಳು : ಡಾ. ಸೌಮ್ಯಶ್ರೀ ಶರ್ಮಾ

    ಸಿದ್ದಾಪುರ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕುಟುಂಬವು ಆಧುನಿಕತೆಗೆ ತೆರೆದುಕೊಳ್ಳುವ ಭರದಲ್ಲಿ ಕೃಷಿಯಿಂದ ಹಾಗೂ ಗೋ ಸಾಕಾಣಿಕೆಯಿಂದ ವಿಮುಖವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ, ಪ್ರತಿಯೊಬ್ಬರ ಆರೋಗ್ಯ ಪೂರ್ಣ ಜೀವನದಲ್ಲಿ ಇವು ಒಂದು ಭಾಗವಾಗಬೇಕಾಗಿದೆ ಎಂದು ಗೋಕರ್ಣದ ಸಸ್ಯ ಸಂಜೀವಿನಿ ಪಂಚಕರ್ಮ ಕೇಂದ್ರದ ಡಾ. ಸೌಮ್ಯಶ್ರೀ ಶರ್ಮಾ ಅವರು ಅಭಿಪ್ರಾಯ ಪಟ್ಟರು.

    ಸಿದ್ದಾಪುರ ತಾಲೂಕಿನ ಹಳ್ಳಿಬೈಲ್ ಗ್ರಾಮದ ಹುತ್ಗಾರ ಶಾಲೆ ಆವಾರದಲ್ಲಿ ಸ್ಪಂದನ ಟ್ರಸ್ಟ್ (ರಿ.) ಹಳ್ಳಿಬೈಲ್ ಆಯೋಜನೆಯ ಹನ್ನೊಂದನೇ ವರ್ಷದ ಹಳ್ಳಿಹಬ್ಬ – 2025 ರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಸೌಮ್ಯಶ್ರೀ ಶರ್ಮಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    “ಗ್ರಾಮದಿಂದ ಅನ್ಯೋನ್ಯ ಕಾರಣಗಳಿಗಾಗಿ ಷಹರ ಸೇರಿರುವ ಊರವರನ್ನು ಒಂದು ದಿನ ತಮ್ಮ ಹುಟ್ಟುರಿಗೆ ಕರೆಸಿ ಎಲ್ಲರೂ ಜೊತೆಯಾಗಿ ಹಳ್ಳಿಹಬ್ಬವನ್ನು ಆಚರಿಸುತ್ತಿರುವುದು ಇಂದಿನ ವಿದ್ಯಮಾನದಲ್ಲಿ ಸ್ಪಂದನ ಟ್ರಸ್ಟ್ ನ ಕಾರ್ಯ ಶ್ಲಾಘನೀಯವಾಗಿದೆ, ಹಾಗೆಯೇ ಹುತ್ಗಾರ ಶಾಲೆಯಲ್ಲಿ ಕಲಿಸಿದ ನಿವೃತ್ತ ಶಿಕ್ಷಕರನ್ನು ಗೌರವಿಸಿ ಅವರಿಂದ ಆಶೀರ್ವಾದ ಪಡೆಯುವ ಗುರುವಂದನೆ, ಹೃದಯಸ್ಪರ್ಶಿ ಕ್ಷಣಗಳು. ಅದರಲ್ಲೂ ಅಂಗನವಾಡಿ ಕೇಂದ್ರದಲ್ಲಿ ಕೆಲಸ ನಿರ್ವಹಿಸಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರು ಹಾಗೂ ಸಹಾಯಕಿ ಇಬ್ಬರನ್ನೂ ಗೌರವಿಸುತ್ತಿರುವುದು ನಿಮ್ಮ ಊರು ಅವರ ಮೇಲಿಟ್ಟ ಪ್ರೀತಿಗೆ ಸಾಕ್ಷಿಯಾಗಿದೆ.

    ಒಂದು ಗ್ರಾಮದ ಅಥವಾ ಸಂಸ್ಥೆಯ ಒಗ್ಗಟ್ಟು ಕಷ್ಟದ ಸಮಯದಲ್ಲಿ ತಿಳಿಯುತ್ತದೆ, ಇಂದು ಮಳೆಯಿಂದ ಅನೇಕ ಸಮಸ್ಯೆಗಳು ಉದ್ಭವವಾಗಿ ಕಾರ್ಯಕ್ರಮ ತಡವಾಗಿ ಪ್ರಾರಂಭವಾದರು ಊರಿನ ಪ್ರತಿಯೊಬ್ಬರು ಒಬ್ಬರಿಗೊಬ್ಬರಿಗೆ ಸಹಕರಿಸುತ್ತಾ ಬಂದದ್ದು ನೋಡಿದರೆ ನಿಮ್ಮ ಊರಿನ ಸಹಬಾಳ್ವೆ ಉಳಿದವರಿಗೆ ಮಾದರಿಯಾಗಿದೆ ಎನ್ನುತ್ತಾ ತಮ್ಮ ಬಾಲ್ಯ ಜೀವನವನ್ನು ಮೆಲುಕು ಹಾಕಿ ಸಂತಸದ ನುಡಿಗಳನ್ನು ಹಂಚಿಕೊಂಡರು. ಡಾಕ್ಟರ್ ಆಗಿದ್ದರು ಸಹ, ಊರವರ ಜೊತೆಗೆ ಊರಿನವರಾಗೆ ಕಾಣಿಸಿಕೊಂಡದ್ದು ವಿಶೇಷವಾಗಿತ್ತು.

    ಈ ಸಂದರ್ಭದಲ್ಲಿ ಹುತ್ಗಾರ ಅಂಗನವಾಡಿ ಕೇಂದ್ರದ ನಿವೃತ್ತ ಶಿಕ್ಷಕಿ ಹೇಮಾವತಿ ಹೆಗಡೆ ಹಾಗೂ ಸಹಾಯಕಿ ಕಮಲಾ ಗೌಡ ಇವರನ್ನು ಟ್ರಸ್ಟ್ ನ ವತಿಯಿಂದ ಗೌರವಿಸಲಾಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಪೂರ್ಣ ಏಳು ವರ್ಷಗಳ ಕಾಲ ಅಧ್ಯಯನ ಮಾಡಿ ಕಳೆದ ಸಾಲಿನಲ್ಲಿ ಎಸ್.ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಕು‌. ಮಧುರಾ ಭಟ್ಟ ಹಾಗೂ ಕು. ವಿಜೇತಾ ಹೆಗಡೆ ಇವರಿಗೆ ಟ್ರಸ್ಟ್ ನ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.

    ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುತ್ಗಾರನ ಎಸ್.ಡಿ.ಎಮ್.ಸಿ ಅಧ್ಯಕ್ಷರು ಹಾಗೂ ಸ್ಪಂದನ ಟ್ರಸ್ಟ್ ನ ಕಾರ್ಯದರ್ಶಿಗಳಾದ ಗಣೇಶ ಹೆಗಡೆ ಬಿಳೇಕಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿಲ್ಕುಂದ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಟ್ರಸ್ಟಿನ ಸದಸ್ಯರಾದ ರಾಜಾರಾಮ ಹೆಗಡೆ ಬಿಳೇಕಲ್ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು. ಟ್ರಸ್ಟಿನ ಅಧ್ಯಕ್ಷರಾದ ಪ್ರಸನ್ನ ಹೆಗಡೆ ಸೂರನಜಡ್ಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
    ಭೂಮಿಕಾ ಭಟ್ಟ ಹಾಗೂ ಲತಾ ಹೆಗಡೆ ಅನಿಸಿಕೆಗಳನ್ನು ಹಂಚಿಕೊಂಡರು. ನಿತೀಶ್ ಹೆಗಡೆ ಹಾಗೂ ಸುಬ್ರಹ್ಮಣ್ಯ ಹೆಗಡೆ ಅತಿಥಿಗಳ ಹಾಗೂ ಗುರುಗಳ ಪರಿಚಯ ಮಾಡಿಕೊಟ್ಟರು.

    ಪನ್ನಗ ಹೆಗಡೆ ಸ್ವಾಗತಿಸಿದರು ಮತ್ತು ನರೇಂದ್ರ ಹೆಗಡೆ ವಂದಿಸಿದರು. ಕಿರಣ ಭಟ್ಟ ಹುತ್ಗಾರ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿಗಳಾದ ಬಾಲಚಂದ್ರ ಹೆಗಡೆ, ದಿನೇಶ ಹೆಗಡೆ, ಪ್ರಸನ್ನ ಹೆಗಡೆ ಹಳ್ಳಿಬೈಲ್ ಸಹಕರಿಸಿದರು.

    ಸಭಾಕಾರ್ಯಕ್ರಮದ ನಂತರ ಅಂಗನವಾಡಿ ಹಾಗೂ ಹಿರಿಯ ಪ್ರಾರ್ಥಮಿಕ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು ಮತ್ತು ಊರಿನ ಹಿರಿ-ಕಿರಿಯ ಉದಯೋನ್ಮುಖ ಕಲಾವಿದರಗಳು ಜಾನಪದ ಸಂಗೀತ, ನೃತ್ಯ, ನಾಟಕ, ಬಿಂಗಿ ಕುಣಿತ, ಕೋಲಾಟ ಹೀಗೆ ಹಲವಾರು ಮನೋರಂಜನಾ ಕಾರ್ಯಕ್ರಮವನ್ನು ನೀಡಿದರು.

    ಗಜಾನನ ಹೆಗಡೆ ಸೂರನಜಡ್ಡಿ ಹಾಗೂ ಸಂಗಡಿಗರು ರುಚಿ-ಶುಚಿಯಾದ ಊಟವನ್ನು ನೆರೆದ 300ಕೂ ಹೆಚ್ಚು ಜನರಿಗೆ ಉಣಬಡಿಸಿದರು. ಉಮೇಶ ಹೆಗಡೆ ಕಲ್ಲಾರೆಮನೆ ಹಾಗೂ ಸಂಗಡಿಗರು ಲೈಟಿಂಗ್ ವ್ಯವಸ್ಥೆಯಲ್ಲಿ ಹಾಗೂ ಶ್ರೀ ಸೌಂಡ್ಸ್ ಹೆಗ್ಗರಣಿ ಇವರು ಧ್ವನಿವರ್ಧಕ ವ್ಯವಸ್ಥೆಯಲ್ಲಿ ಸಹಕರಿಸಿದರು.

  • ಅಂತರಾಷ್ಟ್ರೀಯ ಮನ್ನಣೆಗಳಿಸಿದ ಡಾ. ಸುಮಂತ್ ಬಳಗಂಡಿ

    ಅಂತರಾಷ್ಟ್ರೀಯ ಮನ್ನಣೆಗಳಿಸಿದ ಡಾ. ಸುಮಂತ್ ಬಳಗಂಡಿ

    ಕುಮಟಾ :- ‘ಇಂಟರ್ ನ್ಯಾಶನಲ್ ಲೀಗ್ ಅಗೇನಸ್ಟ್ ಎಪಿಲೆಪ್ಸಿ’ ವತಿಯಿಂದ ನವದೆಹಲಿಯಲ್ಲಿ ಫೆಬ್ರುವರಿ 20 ರಿಂದ 23 ರವರೆಗೆ ನಡೆದ 15ನೇ ‘ಏಷಿಯನ್ ಆ್ಯಂಡ್ ಓಷಿಯನ್ ಎಪಿಲೆಪ್ಸಿ ಕಾಂಗ್ರೆಸ್’ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ ಡಾ. ಸುಮಂತ್ ಬಳಗಂಡಿ, ತಮ್ಮ ವಿಶಿಷ್ಟ ಸಂಶೋಧನಾತ್ಮಕ ಪ್ರಬಂಧವನ್ನು ಮಂಡಿಸಿ, ಪ್ರಥಮ ಸ್ಥಾನ ಗಳಿಸಿದ್ದಾರೆ.

    “ಎಪಿಲೆಪ್ಸಿ (ಅಪಸ್ಮಾರ/ಮೂರ್ಛೆರೋಗ)
    ಹೊಂದಿರುವ ಪುರುಷರಲ್ಲಿ ಲೈಂಗಿಕ ಆರೋಗ್ಯ” ಎಂಬ ಮಹತ್ವದ ವಿಷಯದ ಕುರಿತು ಮಂಡಿಸಿದ ಅವರ ಪ್ರಬಂಧವು ಜಾಗತಿಕ ತಜ್ಞರ ಮೆಚ್ಚುಗೆ ಪಡೆಯುವಂತಾಗಿದ್ದು, ಜಪಾನ್ ಮತ್ತು ಆಸ್ಟ್ರೇಲಿಯಾ ಪ್ರತಿನಿಧಿಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಸಾಗರದ ‘ಭಾಗವತ್ ಆಸ್ಪತ್ರೆ’ಯಲ್ಲಿ ಮೆದುಳು ಮತ್ತು ನರರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸುಮಂತ್ ಬಳಗಂಡಿ, ತಮ್ಮ ಈ ಮಹತ್ವದ ಸಾಧನೆಯ ಮೂಲಕ ದೇಶದ ಜತೆಗೆ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ್ದಾರೆ.
    ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಿವಾಸಿಗಳಾಗಿರುವ ಸ್ವಾತಿ ಮತ್ತು ಜಯದೇವ ಬಳಗಂಡಿ ದಂಪತಿಯ ಸುಪುತ್ರರಾಗಿರುವ ಇವರು, ತಮ್ಮ ನಿರಂತರ ಪರಿಶ್ರಮ ಹಾಗೂ ಕಠಿಣ ಅಧ್ಯಯನದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ.

    ‘ಇಂಟರ್ ನ್ಯಾಶನಲ್ ಲೀಗ್ ಅಗೇನಸ್ಟ್ ಎಪಿಲೆಪ್ಸಿ’ ಒಂದು ಜಾಗತಿಕ ಸಂಸ್ಥೆಯಾಗಿದ್ದು , ವಿಶ್ವ ಆರೋಗ್ಯ ಸಂಸ್ಥೆ (W.H.O.) ಜೊತೆಗೂಡಿ ಎಪಿಲೆಪ್ಸಿ ಕುರಿತು ಸಂಶೋಧನೆ,ಉತ್ತಮ ಚಿಕಿತ್ಸಾ ವಿಧಾನಗಳ ಅಭಿವೃದ್ಧಿ ಮತ್ತು ಜಾಗೃತಿಯನ್ನು ವೃದ್ಧಿಸುವ ಉದ್ದೇಶ ಹೊಂದಿದ್ದು,’ಏಷಿಯನ್ ಆ್ಯಂಡ್ ಓಷಿಯನ್ ಎಪಿಲೆಪ್ಸಿ ಕಾಂಗ್ರೆಸ್ ’ ಸಂಸ್ಥೆಯು ಏಷ್ಯಾ ಹಾಗೂ ಓಶಿಯಾನಿಯಾ ಪ್ರದೇಶಗಳ ದೇಶಗಳಾದ ಭಾರತ, ಚೀನಾ, ಜಪಾನ್, ಆಸ್ಟ್ರೇಲಿಯಾ, ಮಲೇಷಿಯಾ, ದಕ್ಷಿಣ ಕೊರಿಯಾ ಮುಂತಾದ ರಾಷ್ಟ್ರಗಳಲ್ಲಿ ಎಪಿಲೆಪ್ಸಿ ಕುರಿತ ಸಂಶೋಧನೆ, ತಜ್ಞರ ತರಬೇತಿ ಹಾಗೂ ಆರೋಗ್ಯ ಸೇವಾ ಸುಧಾರಣೆಗೆ ಮೀಸಲಾಗಿರುವ ಪ್ರಮುಖ ವೇದಿಕೆಯಾಗಿದೆ. ಈ ಮಹತ್ವದ ಸಮ್ಮೇಳನವು ಈ ಬಾರಿ ಭಾರತದಲ್ಲಿ ಜರುಗಿದ್ದು ಹಲವು ದೇಶಗಳ ಎಪಿಲೆಪ್ಸಿ ತಜ್ಞ ವೈದ್ಯರುಗಳು ಭಾಗವಹಿಸಿದ್ದರು.

    ಡಾ.ಸುಮಂತ್ ಬಳಗಂಡಿ ಅವರ ಈ ಸಂಶೋಧನಾತ್ಮಕ ಪ್ರಬಂಧವು ಭಾರತೀಯ ವೈದ್ಯಕೀಯ ಸಂಶೋಧನೆಗೆ ಮಹತ್ತರ ಕೊಡುಗೆ ನೀಡಿದಂತಾಗಿದೆ.

  • ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೆಳದರ್ಜೆಗೆ ತಳ್ಳುವ ಪ್ರಯತ್ನ : ಜನತೆಯಲ್ಲಿ ಶಾಸಕ ಭೀಮಣ್ಣ ಕ್ಷಮೆ ಕೇಳಲು ಆಗ್ರಹ

    ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೆಳದರ್ಜೆಗೆ ತಳ್ಳುವ ಪ್ರಯತ್ನ : ಜನತೆಯಲ್ಲಿ ಶಾಸಕ ಭೀಮಣ್ಣ ಕ್ಷಮೆ ಕೇಳಲು ಆಗ್ರಹ

    ಶಿರಸಿ: ಶಿರಸಿ ಪಂಡಿತ್ ಸಾರ್ವಜನಿಕ ಆಸ್ಫತ್ರೆ ವಿಚಾರವಾಗಿ ಸರ್ಕಾರ ವೈದ್ಯಕೀಯ ಸಲಕರಣೆಗಳಿಗೆ 30 ಕೋಟಿ ರೂಪಾಯಿ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಸ್ಪೆಷಾಲಿಟಿ ಆಸ್ಪತ್ರೆಯನ್ನ ಕೆಳದರ್ಜೆಗೆ ತಳ್ಳುವ ಪ್ರಯತ್ನ ಮಾಡುತ್ತಿರುವ ಮಾನ್ಯ ಶಾಸಕರಾದ ಭೀಮಣ್ಣ ಅವರು ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.

    ಅವರು ಶಿರಸಿಯ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಹಾಲಿ ಶಾಸಕರ ಆಪ್ತರು ಇತ್ತಿಚಿಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ಶಿರಸಿಯದು ಸ್ಪೆಷಾಲಿಟಿ ಆಸ್ಪತ್ರೆಯಲ್ಲ, ಕೇವಲ ಮೇಲ್ದರ್ಜೆಗೇರಿಸಿದ ಆಸ್ಪತ್ರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಸ್ಪೆಷಾಲಿಟಿ ಆಸ್ಪತ್ರೆಗೆ ಅವಶ್ಯವಿರುವ ಎಲ್ಲ ಸೌಲಭ್ಯವನ್ನು ಮಾಜಿ ಸಭಾಧ್ಯಕ್ಷರಾದ ಕಾಗೇರಿಯವರು ಮಂಜೂರಿ ಮಾಡಿಸಿಕೊಂಡು ಬಂದಿದ್ದರು. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪಡೆದುಕೊಂಡು ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರ ವೈದ್ಯಕೀಯ ಉಪಕರಣಗಳ ಖರೀದಿಗಾಗಿ ಮೀಸಲಿರಿಸಿದ್ದ 30 ಕೋಟಿ ರೂಪಾಯಿ ಕೊಡುವುದಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯನ್ನು ಕೆಳದರ್ಜೆಗೆ ಇಳಿಸುವ ಶಾಸಕರ ಪ್ರಯತ್ನ ಜನತೆಗೆ ಮಾಡುವ ದ್ರೋಹವಾಗಿದೆ. ಸ್ಪೆಷಾಲಿಟಿ ಆಸ್ಪತ್ರೆಗಿರುವ ಸೌಲಭ್ಯವನ್ನು ನಿರಾಕರಿಸಿ ಕೆಳದರ್ಜೆಯ ಆಸ್ಪತ್ರೆಯನ್ನಾಗಿಸುವುದು ಎಂದಿಗೂ ಸರಿಯಲ್ಲ. ಹೊಸ ವೈದ್ಯಾಧಿಕಾರಿಗಳನ್ನ ನೇಮಿಸಿಕೊಂಡು ಸಲಕರಣೆಗಾಗಿ 30 ಕೋಟಿ ಬದಲಿಗೆ 5.20 ಕೋಟಿ ಪ್ರಸ್ತಾವನೆ ಕಳಿಸಿದ್ದೀರಿ. ನಂತರ ನಿಮ್ಮಲ್ಲಿ ನೇರವಾಗಿ ಕೇಳಿದಾಗ 18.5 ಕೋಟಿ ಸಲಕರಣೆ ಬಂದಿದೆ ಎಂಬುದಾಗಿ ಮಾಧ್ಯಮಕ್ಕೆ ಹೇಳಿದ್ದೀರಿ. ಇದನ್ನು ಪ್ರಶ್ನೆ ಮಾಡಿದರೆ ಅವರ ವಿರುದ್ಧ ಪ್ರತಿಭಟನೆ ನಡೆಸಲು ನಿಮ್ಮ ಆಪ್ತರಿಗೆ ಕರೆ ಕೊಡುತ್ತೀರಿ ಶಾಸಕ ಭೀಮಣ್ಣನವರಿಗೆ ಆಸ್ಪತ್ರೆಯನ್ನು ಮಾಡಬೇಕೆನ್ನುವ ಮನಸ್ಥಿತಿ ಇದ್ದಂತೆ ಕಾಣುವುದಿಲ್ಲ. ಅಭಿವೃದ್ಧಿಯ ವಿಚಾರ ಇರುವುದು ನಿಜವಾದರೆ, ಈ ರೀತಿ ಲೂಸ್ ಟಾಕ್ ಮಾಡುವ ಕೆಲಸ ಮಾಡುತ್ತಿರಲಿಲ್ಲ. ಪ್ರಶ್ನೆ ಮಾಡಿದವರ ಧ್ವನಿ ಹತ್ತಿಕ್ಕುವ ಅವರ ನಡೆಯನ್ನು ನಾವು ಖಂಡಿಸುತ್ತೇವೆ. ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೆಳದರ್ಜೆಗೆ ಇಳಿಸುವ ಶಾಸಕರ ಪ್ರಯತ್ನ ಘೋರತಪ್ಪು.‌

    ಒಮ್ಮೆ ಕಾಮಗಾರಿಗೆ ಟೆಂಡರ್ ಆದಮೇಲೆ‌ ಗುತ್ತಿಗೆದಾರರಿಗೆ ಬಿಲ್ ಪ್ರಕಾರ ಹಣ ಸಂಬಂಧಪಟ್ಟ ಇಲಾಖೆಯಿಂದ ಬಿಡುಗಡೆ ಆಗುತ್ತದೆ. ಆಸ್ಪತ್ರೆಯ ಕೇವಲ ಕಟ್ಟಡ ಕಾಮಗಾರಿಗಾಗಿ ನೀವು ತಂದಿದ್ದೀರಿ ಎಂದಿರುವ 44 ಕೋಟಿ ರೂಪಾಯಿಗೆ ಮತ್ತು ಶಾಸಕರಿಗೆ ಯಾವುದೇ ಸಂಬಂಧ ಇರುವುದಿಲ್ಲ. ಯಾಕೆಂದರೆ ಅದು ಈಗಾಗಲೇ ಮಂಜೂರಾಗಿರುವ ಹಣವಾಗಿದೆ. ಯಾರೇ ಶಾಸಕರಿದ್ದರೂ, ರಾಷ್ಟ್ರಪತಿ ಆಡಳಿತ ಇದ್ದರೂ ಮಂಜೂರಾದ ಹಣ ಗುತ್ತಿಗೆದಾರರಿಗೆ ಬರುತ್ತದೆ. ಅದರಲ್ಲಿ ಶಾಸಕರ ವಿಶೇಷ ಪಾತ್ರ ಇರುವುದಿಲ್ಲ. ನಾನು ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ ಎಲ್ಲ ದಾಖಲೆಗಳು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪಡೆದುಕೊಂಡಿದ್ದೇನೆ. ಇದ್ಯಾವುದೂ ನನ್ನ ಮನೆಯ ದಾಖಲೆಗಳಲ್ಲ. ಶಿರಸಿಯ ಆಸ್ಪತ್ರೆ ಸ್ಪೆಷಾಲಿಟಿ ಆಸ್ಪತ್ರೆಯೆಂದು ದಾಖಲೆಗಳೇ ಹೇಳುತ್ತಿವೆ. ಆಸ್ಪತ್ರೆ ಕುರಿತಾಗಿ ಶಾಸಕರು ಇದುವರೆಗೆ ತುಟಿ ಬಿಚ್ಚದೇ ಮೌನವಾಗಿರುವುದು ಸರಿಯಲ್ಲ. ಇದಕ್ಕೆ ತಕ್ಷಣ ಭೀಮಣ್ಣ ನಾಯ್ಕ ಉತ್ತರ ನೀಡಬೇಕೆಂದು ಅವರು ಹೇಳಿದರು.

    ಆಸ್ಪತ್ರೆ ಕುರಿತಾಗಿ ಪ್ರಶ್ನೆ ಮಾಡಿದವರ ಮೇಲೆ ನಾನ್ ಬೇಲೆಬಲ್ ಕೇಸ್ ದಾಖಲಿಸುತ್ತಾರೆ. ಬೆಂಬಲಿಗರಿಂದ ಪ್ರತಿಕೃತಿ ದಹನ ಮಾಡಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅಸಂಬದ್ಧ ಕಮೆಂಟ್ ಮಾಡಿಸುತ್ತಾರೆ. ಜಾತಿ ರಾಜಕೀಯವನ್ನು ಹಬ್ಬಿಸುತ್ತಾರೆ. ಪೋಲೀಸ್ ಠಾಣೆಯಲ್ಲಿ ದೂರು ಕೊಡುವವರೇ ನನ್ನ ಮೇಲೆ ನಾನ್ ಬೇಲೆಬಲ್ ಪ್ರಕರಣ ದಾಖಲಿಸುವಂತೆ ಸೆಕ್ಷನ್ ಬರೆದುಕೊಡುತ್ತಾರೆ. ಅದರಂತೆ ನಡೆಯಲು ಪೋಲೀಸರಿಗೆ ಸೂಚನೆ ಕೊಡಲಾಗುತ್ತದೆ ಎಂದರೆ ನಾವು ಯಾವ ಪ್ರಜಾಪ್ರಭುತ್ವದಲ್ಲಿ ಇದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ. ಇದೇನು, ರಿಪಬ್ಲಿಕ್ ಆಫ್ ಶಿರಸಿನಾ ? ಶಾಸಕರನ್ನು ಪ್ರಶ್ನಿಸುವುದು ಅಪರಾಧವಾಗುತ್ತದೆಯಾ ? ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಜೊತೆಗೆ ಮಾನನಷ್ಟ ಮೊಕದ್ದಮೆ ದಾಖಲಿಸುವ ಕಾರಣ ಕೇಳಿ, ಲೀಗಲ್ ನೋಟೀಸ್ ಸಹ ನೀಡಿದ್ದೀರಿ. ದಯಮಾಡಿ ವಯಕ್ತಿಕ ದ್ವೇಷ ರಾಜಕಾರಣ ಮಾಡಬೇಡಿ. ನಮಗೂ ಕುಟುಂಬವಿದೆ. ಸಣ್ಣ ಮಕ್ಕಳು, ವಯಸ್ಸಾದ ತಂದೆ-ತಾಯಿಗಳಿದ್ದಾರೆ. ಆಸ್ಪತ್ರೆ ಹೋರಾಟ ಮಾಡುವ ಬದಲು ಕೋರ್ಟು, ವಕೀಲರ ಆಫೀಸು, ಪೋಲೀಸ್ ಸ್ಟೇಷನ್ ಗಳನ್ನು ಅಲೆಯಬೇಕೆಂಬುದು ನಿಮ್ಮ ಉದ್ದೇಶವಾದಂತೆ ಕಾಣುತ್ತದೆ ಎಂದರು.

    ಶಾಸಕರು ಮೊದಲಿಗೆ ಕ್ಷೇತ್ರದ ಅಭಿವೃದ್ಧಿ ಕುರಿತಾಗಿ ಗಮನ ನೀಡಬೇಕು. ಶಿರಸಿ ಬಸ್ ಸ್ಟಾಂಡ್ ತಕ್ಷಣ ಉದ್ಘಾಟನೆ ಆಗಬೇಕಿದೆ. ಇಂದಿರಾ ಕ್ಯಾಂಟೀನ್ ತಕ್ಷಣ ಉದ್ಘಾಟನೆ ಆಗಿ ಬಡವರಿಗೆ ಕಡಿಮೆ ದರದಲ್ಲಿ ಊಟ ದೊರೆಯಬೇಕು. ಆಯುಷ್ಮಾನ್ ರೆಫರೆಲ್ ಲೆಟರ್ ಶಿರಸಿಯಲ್ಲೇ ಸಿಗುವಂತಾಗಬೇಕು. ಈಗ ಇರುವ ಆಸ್ಪತ್ರೆಗೆ ಜನರಲ್ ಫಿಜಿಶಿಯನ್ ನೇಮಕ ಆಗಬೇಕು. ಈಗಾಗಲೆ 80% ಕೆಲಸ ಆಗಿರುವ ಆಸ್ಪತ್ರೆಗೆ ಸಲಕರಣೆಗೆ ಟೆಂಡರ್ ಕರೆದು, ವೈದ್ಯರ ನೇಮಕಾತಿ ಆಗಬೇಕು, ಶಿರಸಿ ಆಸ್ಪತ್ರೆಗೆ ಎಲ್ಲಾ ಸಾಮಗ್ರಿಗಳು ಬಂದು ಈ ಮೇಲಿನ ಎಲ್ಲಾ ಸೌಲಭ್ಯಗಳು ಬರಲೇಬೇಕು. ಇನ್ನೂ 15 ದಿನ ಕಾಯುತ್ತೇವರ. ಶಾಸಕರಿಂದ ಏನೂ ಪ್ರತಿಕ್ರಿಯೆ ಬಂದಿಲ್ಲ ಎಂದರೆ ಆಸ್ಪತ್ರೆ ಉಳಿಸಿ, ಎಂದು ಬೀದಿಯಲ್ಲಿ ಸಹಿ ಸಂಗ್ರಹಣೆ ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

    ಮಾಜಿ ಜಿಪಂ ಸದಸ್ಯ ಹಾಲಪ್ಪ ಜಕ್ಕಣ್ಣನವರ್ ಮಾತನಾಡಿ, ಸಾರ್ವಜನಿಕ ವಿಚಾರವನ್ನು ಕೇಳುವುದು ಪ್ರತಿಯೊಬ್ಬನ ಹಕ್ಕು. ಶಾಸಕರು ಅವರ ಸಲಹೆಗಾರರನ್ನು ಮಾರ್ಪಡಿಸಿಕೊಳ್ಳುವ ಅವಶ್ಯಕತೆ ಇದ್ದಂತೆ ಕಾಣುತ್ತದೆ. ನಾವು ಯಾರೂ ಶಾಸಕರ ವಿರೋಧಿಗಳಲ್ಲ. ಅಭಿವೃದ್ಧಿ ಪರವಾಗಿ ಮಾತನಾಡುತ್ತಿದ್ದೇವೆ. ಪ್ರಶ್ನೆ ಮಾಡಿದವರ ಪ್ರತಿಕೃತಿ ದಹಿಸುವುದು ಸರಿಯಲ್ಲ. ಇದಕ್ಕೆ ಶಾಸಕರು ಪ್ರೋತ್ಸಾಹ ನೀಡಬಾರದು ಎಂದರು.

    ಸಿದ್ದಾಪುರ ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಕೆ. ತಿಮ್ಮಪ್ಪ ಮಾತನಾಡಿ, ಈ ಹಿಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ನದಿಂದ ಶಿರಸಿಗೆ ಈ ಸ್ಪೆಷಾಲಿಟಿ ಆಸ್ಪತ್ರೆ ಬಂದಿದೆ. ಬಾಯಿ ತೆಗೆದರೆ ಸಂವಿಧಾನ ಎಂದು ಹೇಳುವ ಕಾಂಗ್ರೆಸಿಗರು, ಸಂವಿಧಾನದ ಅಡಿಯಲ್ಲಿಯೇ ಅನಂತಮೂರ್ತಿ ಹೆಗಡೆ ಅವರು ಆಸ್ಪತ್ರೆಗಾಗಿ ಹೋರಾಟ ಮಾಡಿದರೆ ಅವರ ಮೇಲೆ ಕೇಸ್ ಹಾಕುತ್ತಾರೆ. ಬಡವರ ಪರವಾಗಿ ಹೋರಾಟ ಮಾಡಿದರೆ ಅದನ್ನು ಹತ್ತಿಕ್ಕುವ ಕೆಲಸ ಮಾಡುವ ಕಾಂಗ್ರೆಸ್ ಸರಕಾರ ಮತ್ತು ಶಾಸಕರ ನಡೆ ಸರಿಯಲ್ಲ ಎಂದರು.

    ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಶಿರಸಿ ತಾಲೂಕು ಅಧ್ಯಕ್ಷೆ ಉಷಾ ಹೆಗಡೆ, ರಂಗಪ್ಪ ದಾಸನಕೊಪ್ಪ ಇದ್ದರು.

    ಶಿರಸಿಯದು ಕೇವಲ ಮೇಲ್ದರ್ಜೆಗೇರಿಸಿದ ಆಸ್ಪತ್ರೆಯಲ್ಲ, ಬದಲಾಗಿ ಸ್ಪೆಷಾಲಿಟಿ ಆಸ್ಪತ್ರೆ ಆಗಿರುವ ಕಾರಣಕ್ಕೇ ಇದರಲ್ಲಿ ಹೃದಯ ಚಿಕಿತ್ಸೆಗೆ ಸಂಬಂಧಿಸಿ ಕ್ಯಾಥ್ ಲ್ಯಾಬ್, ಕಾರ್ಡಿಯಾಲಜಿ ಇದೆ. ನೆಫ್ರೊಲೊಜಿ, ಯುರೊಲೊಜಿ, ನ್ಯುರೋಲಜಿ, ಟ್ರಾಮಾ ಸೆಂಟರ್ ಮಾಡುವ ಆವಕಾಶ ಇದೆ, ಎಂಆರ್ಐ ಮಷಿನ್ ಮತ್ತು ಸಿಟಿ ಸ್ಕ್ಯಾನ್ ಮಷಿನ್ ಒಳಗೊಂಡು ಇನ್ನೂ ಹಲವಾರು ಸ್ಪೆಶಾಲಿಟಿ ಸೌಲಭ್ಯಗಳು ಇದೆ. ನಾರ್ಮಲ್ ಆಸ್ಪತ್ರೆಯಲ್ಲಿ ಇವೆಲ್ಲ ಇರತ್ತಾ? 250 ಬೆಡ್, 142 ಕೋಟಿ ಬಜೆಟ್ ಇರುತ್ತಿತ್ತಾ ಎಂದು ಅವರು ಪ್ರಶ್ನಿಸಿದ್ದಾರೆ. ಇಷ್ಟೆಲ್ಲ ಸೌಕರ್ಯಗಳನ್ನು ಒಳಗೊಂಡಿರುವ ಆಸ್ಪತ್ರೆ ಸ್ಪೆಷಾಲಿಟಿ ಆಸ್ಪತ್ರೆಯಲ್ಲವೆಂದು ಕೆಳದರ್ಜೆಗೆ ತಳ್ಳುವುದು ಸರಿಯಲ್ಲ. ಬಡವರ ಭಾಗ್ಯವನ್ನು ಶಾಸಕರು ಕಸಿಯಬಾರದು.

  • ಶ್ರೀದೇವಿ ಚೌಡೇಶ್ವರಿ ವಾರ್ಷಿಕ ಸಮಾರಾಧನೆ ಹಾಗೂ ಸನ್ಮಾನ

    ಶ್ರೀದೇವಿ ಚೌಡೇಶ್ವರಿ ವಾರ್ಷಿಕ ಸಮಾರಾಧನೆ ಹಾಗೂ ಸನ್ಮಾನ

    ಸಿದ್ದಾಪುರ : ಇತ್ತೀಚಿಗೆ ತಾಲೂಕಿನ ಕುಳ್ಳೆ ಗ್ರಾಮದಲ್ಲಿ ಶ್ರೀದೇವಿ ಚೌಡೇಶ್ವರಿ ವಾರ್ಷಿಕ ಸಮಾರಾಧನೆ ಹಾಗೂ ಸನ್ಮಾನ ಸಮಾರಂಭನಡೆಯಿತು. ಕಲಾವಿದ ಮತ್ತು ಸಮಾಜ ಸೇವಕ ಈಶ್ವರ ಗೌಡ, ನಾಟಿ ವೈದ್ಯ ಮಂಜುನಾಥ್ ಗೌಡ ಹಾಗೂ ಇನ್ನುಳಿದವರಿಗೆ ಸನ್ಮಾನಿಸಲಾಯಿತು.

    ನಂತರ ವಸುಂಧರಾ ಸಮೂಹ ಸೇವಾ ಸಂಸ್ಥೆ ಶಿರಸಿ ಇವರ ಸಂಯೋಜನೆಯಲ್ಲಿ ಕದಂಬ ಕೌಶಿಕೆ ಯಕ್ಷಗಾನ ತಾಳಮದ್ದಲೆ ನಡೆಯಿತು. ಹಿಮ್ಮೇಳದ ಭಾಗವತರು ಗಜಾನನ ಭಟ್ ತುಳಗೆರೆ ಮದ್ದಲೆವಾದನದಲ್ಲಿ ಗಜಾನನ ಹೆಗಡೆ ಕಂಚಿಕೈ, ಚಂಡೇ ವಾದನ ರಘುಪತಿ ಹೆಗಡೆ ಹುಡೆಹದ್ದ ರಂಜಿಸಿದರೆ, ಮುಮ್ಮೇಳದಲ್ಲಿ ಆರ್ ಟಿ ಭಟ್ಟ ಕಬ್ದಾಲ ಶುಂಭಾಸುರನಾಗಿ, ಎಮ್ ವಿ ಹೆಗಡೆ ಅಮ್ಮಿಮನೆ ರಕ್ತಬೀಜಾಸುರನಾಗಿ, ಮಾಬ್ಲೆಶ್ವರ್ ಭಟ್ ಇಟಗಿ ಶ್ರೀದೇವಿಯಾಗಿ, ಈಶ್ವರ ಗೌಡ ಕುಳ್ಳೆ ಸುಗ್ರೀವನಾಗಿ, ರಘುಪತಿ ನಾಯ್ಕ ಹೆಗ್ಗರಣಿ ಚಂಡಾಸುರನಾಗಿ ಅಭಿನಯಿಸಿ ಜನ ಮೆಚ್ಚುಗೆ ಗಳಿಸಿದರು.

    ಈ ಕಾರ್ಯಕ್ರಮಗಳು ಸೀತಾರಾಮ ಗೌಡ ಕುಳ್ಳ ಹುತ್ತಾರ ಹಾಗೂ ಅವರ ಕುಟುಂಬದವರ ಹಿರಿತನ ದಲ್ಲಿ ನೆರವೇರಿತು. ವೇ. ಮೂ. ವಿ ಕೆ ಜೋಶಿ ಶಿವಳಮನೆ, ಉಂಚಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಮ್ ಎಲ್ ಭಟ್, ಎಸ್ ಕೆ ಭಾಗವತ್‌ ಶಿರಸಿಮಕ್ಕಿ, ಸಿ.ಎಂ. ನಾಯಕ್ ಹೆಗ್ಗರಣಿ, ಪದ್ಮಾವತಿ ಗೌಡ ಉಪಸ್ಥಿತರಿದ್ದರು.

  • ಶಿರಸಿ ನಗರ ಠಾಣೆ ಮಾದರಿ ಪೊಲೀಸ್ ಸ್ಟೇಷನ್..!

    ಶಿರಸಿ ನಗರ ಠಾಣೆ ಮಾದರಿ ಪೊಲೀಸ್ ಸ್ಟೇಷನ್..!

    ಶಿರಸಿ: ಜಿಲ್ಲೆಯ 30 ಪೊಲೀಸ್ ಠಾಣೆಗಳಲ್ಲಿ ಶಿರಸಿ ನಗರ ಠಾಣೆಯನ್ನು ಮಾದರಿ ಪೊಲೀಸ್ ಠಾಣೆಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ ಆಯ್ಕೆ ಮಾಡಿದ್ದಾರೆ.

    ಠಾಣೆಯಲ್ಲಿನ ಕಡತಗಳು ಹಾಗೂ ದಸ್ತಾವೇಜುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುವುದು ಹಾಗೂ ಠಾಣೆಯ ಒಳ ಆವರಣವನ್ನು ಹೈಟೆಕ್ ಆಗಿ ನಿರ್ವಹಿಸುವುದು ಬಂದಂತಹ ಸಾರ್ವಜನಿಕರಿಗೆ ಜನಸ್ನೇಹಿಯಾಗಿ ವ್ಯವಹರಿಸುವುದು ಸೇರಿದಂತೆ ಹಲವು ನಿಬಂಧನೆಗಳನ್ನು ಹೇರಿ ಉತ್ತರ ಕನ್ನಡ ಜಿಲ್ಲೆಯ ಮಾದರಿ ಪೊಲೀಸ್ ಠಾಣೆಯಾಗಿ ಶಿರಸಿ ನಗರ ಪೊಲೀಸ್ ಠಾಣೆಯನ್ನು ಆಯ್ಕೆ ಮಾಡಲಾಗಿದೆ.

    ಈಗಾಗಲೇ ನಗರ ಠಾಣೆಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದ್ದು, ಪಿಎಸ್‌ಐ ನಾಗಪ್ಪ ಬಿ. ಮುತುವರ್ಜಿ ವಹಿಸಿ ಠಾಣೆಯ ಸೌಂದರ್ಯವನ್ನು ಹಾಗೂ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರಿಗೆ ನೀಡಲು ಕ್ರಮ ಕೈಗೊಂಡಿದ್ದಾರೆ. ಠಾಣೆಯ ಒಳ ಆವರಣದ ಪರಿವರ್ತನೆ ಕಾರ್ಯ ಭರದಿಂದ ಸಾಗಿದೆ.

  • ಬೈಕ್ ಓಡಿಸುವಾಗಲೇ‌ ಹೃದಯಸ್ತಭನ?

    ಬೈಕ್ ಓಡಿಸುವಾಗಲೇ‌ ಹೃದಯಸ್ತಭನ?

    ಶಿರಸಿ : ನಗರದ ದೇವಿಕರೆ ಬಳಿ ಹೃದಯಾಘಾತದಿಂದ ಬೈಕ್ ನಿಂದ ಕುಸಿದು ಬಿದ್ದು ವ್ಯಕ್ತಿ ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಎದೆ ನೋವು ಕಾಣಿಸಿಕೊಂಡ ಕಾರಣ ತಾಯಿಯೊಂದಿಗೆ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಸಲಹೆ ಪಡೆದು‌ ಬೈಕ್‌‌ ಮೇಲೆ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಹೃದಯಾಘಾತ ಉಂಟಾಗಿ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ.

    ಹನುಮಂತಿಯ ನಿವಾಸಿಯಾಗಿದ್ದ‌ ಪ್ರೇಮಾನಂದ ಗಂಗಾಧರ ತಳಗೇರಿ (25) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಮಧ್ಯಾಹ್ನದ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ.‌ಬಳಿಕ ಆತ‌ ತಾಯಿ ಬಳಿ ವಿಚಾರವನ್ನ ಹೇಳಿ ಆಸ್ಪತ್ರೆಗೆ ಹೋಗಲು ಹೋರಟಿದ್ದು, ಈ ವೇಳೆ ಮಗನಿಗೆ ಎದೆ‌ ನೋವು ಇರುವ ಕಾರಣ ತಾಯಿ ನಾನು ಸಹ ಜೊತೆಯಲ್ಲೆ ಬರುವುದಾಗಿ ಮಗನಿಗೆ ಹೇಳಿದ್ದಳು ಎನ್ನಲಾಗಿದ್ದು, ಹೀಗಾಗಿ ಆತ ತಾಯಿಯನ್ನು ಸಹ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.

    ಬಳಿಕ ವೈದ್ಯರನ್ನ ಭೇಟಿ ಯಾದ ಪ್ರೇಮಾನಂದ ಬೈಕ್‌ನಲ್ಲಿ ವಾಪಸ್ ಮನೆಗೆ ಬರುವಾಗ ಏಕಾಏಕಿಯಾಗಿ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಮೃತಪಟ್ಟಿದ್ದಾನೆ.‌ಇನ್ನೂ ಬೈಕ್ ಹಿಂಬದಿಯಲ್ಲಿದ್ದ ಆತನ ತಾಯಿಗೂ ಸಹ ಗಾಯವಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಸ್ಪಷ್ಟ ಮಾಹಿತಿ ತನಿಖೆ ನಂತರ ತಿಳಿದು ಬರಬೇಕಿದೆ.

  • ಪ್ರವಾಸಕ್ಕೆ ಬಂದಾಗ ಹೃದಯಾಘಾತ : ಸಾವು

    ಪ್ರವಾಸಕ್ಕೆ ಬಂದಾಗ ಹೃದಯಾಘಾತ : ಸಾವು

    ಶಿರಸಿ: ಕರ್ನಾಟಕಕ್ಕೆ ಪ್ರವಾಸಕ್ಕೆ ಬಂದಿದ್ದ ನಿವೃತ್ತ ಉದ್ಯೋಗಿ, ಮಹಾರಾಷ್ಟ್ರ ರಾಜ್ಯದ ಚಿಂಚವಾಡಾ ಸಮೀಪದ ಪಾವನಾ ನಗರ ಕಾಲೋನಿಯ ಪ್ರದೀಪ ವಸಂತ ಪ್ರಧಾನ (70) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಹೃದಯ ರೋಗಿಯಾಗಿದ್ದ ಇವರಿಗೆ ಕಳೆದ 15 ವರ್ಷಗಳ ಹಿಂದೆ ಎಂಜಿಯೋಗ್ರಾಫಿ ಮಾಡಿಸಿ 2 ಸ್ಟಂಟ್‌ಗಳನ್ನು ಅಳವಡಿಸಲಾಗಿತ್ತು. ಫೆ.8 ರಂದು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವಾಸಕ್ಕೆ ಬಂದು ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿರುವ ಗ್ರೀನ್ ವರ್ಲ್ಡ ರೆಸಾರ್ಟಿನಲ್ಲಿ ಉಳಿದುಕೊಂಡಿದ್ದರು. ಫೆ. 14 ರಂದು ಕೆಮ್ಮು, ಕಫ ಹೆಚ್ಚಾಗಿದ್ದರಿಂದ ಶಿರಸಿಯ ಟಿ.ಎಸ್. ಎಸ್. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಇಸಿಜಿ ಮಾಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಫೆ.15 ರಂದು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಇವರ ಪತ್ನಿ ಸುಲಭಾ ಪ್ರದೀಪ ಪ್ರಧಾನ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಸಮಾಜ ಅಭಿವೃದ್ಧಿ ಯಾಗಬೇಕಾದರೆ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು.

    ಸಮಾಜ ಅಭಿವೃದ್ಧಿ ಯಾಗಬೇಕಾದರೆ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು.

    ಶಿರಸಿ: ಸಮಾಜ ಅಭಿವೃದ್ಧಿ ಯಾಗಬೇಕಾದರೆ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ತಾಲೂಕಾಡಳಿತ, ನಗರಸಭೆ ಹಾಗೂ ತಾಲೂಕಾ ಪಂಚಾಯತ್ ಶಿರಸಿ ಮತ್ತು ಶಿರಸಿ – ತಾಲೂಕಾ ಸೇವಾಲಾಲ್ ಬಂಜಾರಾ ಸಂಘ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ೫. ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ರವರ 286ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಸಂತ ಸೇವಾಲಾಲರು ಸಮಾಜಸುಧಾರಕರು. ಸಮಾಜಕ್ಕೆ ಅನೇಕ ಸಂದೇಶವನ್ನು ನೀಡಿದವರು. ಇಂತವರನ್ನು ಸ್ಮರಿಸಿ ಗೌರವಿಸಬೇಕು ಎಂಬ ಉದ್ದೇಶದಿಂದ ಇದನ್ನು ಸರ್ಕಾರಿ ಕಾರ್ಯ ಕ್ರಮವನ್ನಾಗಿ ಆಚರಿಸುತ್ತಿದ್ದೇವೆ. ಸಮಾಜದ ಬಳ್ಳೆಯನ್ನು ಬಯಸುವುದು ಪ್ರತಿಯೊಬ್ಬರ – ಜವಾಬ್ದಾರಿ ಸಮಾಜದ ಮುತ್ತಖ್ಯ ವಾಹಿನಿಗೆ ಬರಲು ಶಿಕ್ಷಣ ಆತೀ ಮುಖ್ಯವಾಗಿರುತ್ತದೆ. ಶಿಕ್ಷಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 5 ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳನ್ನು ಸಮಾಜದ ಮಕ್ಕಳು ಜರ ಸದುಪಯೋಗ ಪಡಿಸಿಕೊಂಡು ಉತ್ತಮ ವಿದ್ಯಾವಂತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.

    ಮಾದನಗೇರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಸಂಘದ ಅಧ್ಯಕ್ಷ ಡಾ.ಕೆ.ಬಿ ಪವಾರ, ಶಿವಾನಂದ ಇದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ.ಎಂ ಕೃಷ್ಣಮೂರ್ತಿ ಸ್ವಾಗತಿಸಿದರು. ರೂಪೇಶ್ ಚೌಹಾಣ್ ನಿರೂಪಿಸಿದರು. ಶನಿವಾರ ಮಾರಿಕಾಂಬಾ ದೇವಸ್ಥಾನದಿಂದ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸೇವಾಲಾಲರ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.