Home HONNAVAR ಮನೆಯ ಬಾಗಿಲಿಗೆ ಬಂದು ನಾಯಿ ಹೊತ್ತೊಯ್ದ ಚಿರತೆ.

ಮನೆಯ ಬಾಗಿಲಿಗೆ ಬಂದು ನಾಯಿ ಹೊತ್ತೊಯ್ದ ಚಿರತೆ.

ಹೊನ್ನಾವರ ತಾಲೂಕಿನ ಹಳದೀಪುರದ ಕುದಬೈಲ್ ನ ಪ್ರಾಥಮಿಕ ಶಾಲೆಯ ಪಕ್ಕದ ಮನೆಯ ಬಾಗಿಲಿಗೆ ಬಂದ ಚಿರತೆ ಅಲ್ಲಿದ್ದ ನಾಯಿಮರಿಯನ್ನು ಹೊತ್ತು ಹೋಗಿರುವ ಘಟನೆ ಮನೆಯವರು ಅಳವಡಿಸಿದ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೋಮವಾರ ನಡುರಾತ್ರಿ 12 ರ ಸುಮಾರಿಗೆ ಚಿರತೆ ಕುದಬೈಲ್ ನ ರಮೇಶ ನಾಯ್ಕ ಎಂಬುವವರ ಮನೆಯಂಗಳಕ್ಕೆ ಬಂದು, ಮಲಗಿದ್ದ ನಾಯಿ ಮರಿಯ ಮೇಲೆ ದಾಳಿ, ಕುತ್ತಿಗೆ ಹಿಡಿದುಕೊಂಡು ಓಡಿಹೋಗಿದೆ.

ಈ ಭಾಗದಲ್ಲಿ ಸರಿಸುಮಾರು ಐವತ್ತಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಸುಮಾರು 300ಕ್ಕೂ ಅಧಿಕ ಜನರು ಸುತ್ತಲೂ ವಾಸಿಸುತ್ತಿದ್ದಾರೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶದಂತಿರುವ ಈ ಗ್ರಾಮದಲ್ಲಿ ಈ ಹಿಂದಿನಿಂದಲೂ ಚಿರತೆಗಳ ಓಡಾಟದ ಭಯ ಇದ್ದೇ ಇತ್ತು. ಮುಸಂಜೆಯ ಸಮಯದಲ್ಲಿಯೇ ಚಿರತೆಗಳು ಓಡಾಡುವುದನ್ನು ಅನೇಕರು ಗಮನಿಸಿದ್ದು ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದರು. ಸಂಬಂಧಪಟ್ಟವರು ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.

ವಿಡಿಯೋ