Home Uttara Kannada ಶರಾವತಿ ಸೇತುವೆಯ ಮೇಲೆ ಅಪಘಾತ : ಬೈಕ್ ಸವಾರರು ನೀರಿಗೆ ಬಿದ್ದು ಓರ್ವ ನಾಪತ್ತೆ.

ಶರಾವತಿ ಸೇತುವೆಯ ಮೇಲೆ ಅಪಘಾತ : ಬೈಕ್ ಸವಾರರು ನೀರಿಗೆ ಬಿದ್ದು ಓರ್ವ ನಾಪತ್ತೆ.

ಹೊನ್ನಾವರ: ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಚಲಿಸುತ್ತಿದ್ದ ಕಾರು ಹೊನ್ನಾವರ ಕಡೆಯಿಂದ ಕಾಸರಕೋಡ ಕಡೆಗೆ ಚಲಿಸುತ್ತಿದ್ದ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಹೊನ್ನಾವರ ತಾಲೂಕಿನ ಶರಾವತಿ ಸೇತುವೆಯ ಮೇಲೆ ಈ ದುರ್ಘಟನೆ ನಡೆದಿದೆ. ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ನೀರಿನಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.ಅಪಘಾತದಲ್ಲಿ ಗಾಯಗೊಂಡ ಓರ್ವ ಈಜಿಕೊಂಡು ದಡ ಸೇರಿದ್ದು, ಇನ್ನೊರ್ವ ನಾಪತ್ತೆಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಬೈಕ್ ಸವಾರರು ಕಾಸರಕೋಡ ನಿವಾಸಿಗಳು ಎನ್ನುವ ಮಾಹಿತಿ ತಿಳಿದುಬಂದಿದ್ದು,‌ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ನದಿಯಲ್ಲಿ ಬಿದ್ದ ಓರ್ವ ವ್ಯಕ್ತಿಯ ಹುಡುಕಾಟ ಮುಂದುವರಿದಿದೆ. ಹೊನ್ನಾವರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.