Home Uttara Kannada ಮನೆ ಕಳ್ಳತನ ಪ್ರಕರಣ : ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ.

ಮನೆ ಕಳ್ಳತನ ಪ್ರಕರಣ : ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ.

ಕಾರವಾರ: ತಾಲೂಕಿನ ಶಿರವಾಡದಲ್ಲಿ ಮನೆಕಳ್ಳತನ ನಡೆದಿದ್ದು, ಮನೆಯಲ್ಲಿದ್ದ ₹ 92000 ನಗದು ಹಣ ಕಳವು ಮಾಡಿದ್ದಾರೆ. ಉಷಾ ನಾಯ್ಕಗೆ ಸೇರಿದ ಮನೆಯಲ್ಲಿ ಘಟನೆ ನಡೆದಿದ್ದು, ಆರೋಪಿ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ಪೋಲಿಸರು ನಡೆಸಿ, ಮನೆ ಕಳವು ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಚಾಕದ ಅನಿಲ ಕುಮಾರ (37), ಮಂಗಳೂರಿನ ನೀರು ಮಾರ್ಗದ ಹರೀಶ ಪೂಜಾರಿ (32) ಬಂಧಿತ ಆರೋಪಿಗಳಾಗಿದ್ದಾರೆ. ಕಾರವಾರ, ಮಂಗಳೂರು, ಉಡುಪಿ, ಮೈಸೂರು, ಕೇರಳ ಮುಂತಾದ ಕಡೆಗಳಲ್ಲೂ ಆರೋಪಿಗಳ ವಿರುದ್ಧ ಪ್ರಕರಣ ಇದ್ದಿದ್ದು, ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.