Home Information ಭಟ್ಕಳ ತಾಲೂಕಾ‌ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕ/ಶಿಕ್ಷಕಿ ಹಾಗೂ ಉಪನ್ಯಾಸಕರುಗಳಿಗೆ ಕವನ...

ಭಟ್ಕಳ ತಾಲೂಕಾ‌ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕ/ಶಿಕ್ಷಕಿ ಹಾಗೂ ಉಪನ್ಯಾಸಕರುಗಳಿಗೆ ಕವನ ರಚನಾ ಸ್ಪರ್ಧೆ.

ಭಟ್ಕಳ.: ಭಟ್ಕಳ ತಾಲೂಕಾ‌ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಭಟ್ಕಳ ತಾಲೂಕಿನ ಶಿಕ್ಷಕ ಶಿಕ್ಷಕಿಯರು ಹಾಗೂ ಉಪನ್ಯಾಸಕರುಗಳಿಗೆ ಚಂದ್ರಯಾನ -೩ ನಮ್ಮ ಹೆಮ್ಮೆ ಎಂಬ ವಿಷಯದ ಕುರಿತು ಕವನ ರಚನಾ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಹಾಗೂ ಕಾಲೇಜು ಉಪನ್ಯಾಸಕರುಗಳಿಗೆ ಪ್ರತ್ಯೇಕವಾಗಿ ನಡೆಯಲಿದೆ‌ ಆಸಕ್ತರು ತಮ್ಮ ಸ್ವರಚಿತ ಕವಿತೆಯನ್ನು, ಮುದ್ರಿಸಿ ಅಥವಾ ಅಂದವಾದ ಕೈ ಬರೆಹದೊಂದಿಗೆ ದ್ವಿಪ್ರತಿಯಲ್ಲಿ ನೀಡಬೇಕಾಗಿದ್ದು ಒಂದು ಪ್ರತಿಯ ಹಿಂಭಾಗದಲ್ಲಿ ಮಾತ್ರ ತಮ್ಮ ಹೆಸರು, ಶಾಲೆ,ಕಾಲೇಜು ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಅಶೋಕ ಆಚಾರಿ, ಇವರ ಬಳಿ ಸೆಪ್ಟೆಂಬರ್ ಎರಡನೇ ತಾರೀಖಿನ ಸಂಜೆ ೫ ಗಂಟೆ ಒಳಗೆ ತಲುಪಿಸಬೇಕು. ವಿಜೇತರಿಗೆ ಶಿಕ್ಷಕರ ದಿನಾಚರಣೆಯಂದು ಶಿಕ್ಷಣ ಇಲಾಖೆಯಿಂದ ನಡೆಯುವ ಗುರುವಂದನಾ ಕಾರ್ಯಕ್ರಮದಲ್ಲಿ ಪುಸ್ತಕ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಗಂಗಾಧರ ನಾಯ್ಕ, ಅಧ್ಯಕ್ಷರು ಕಸಾಪ, ೮೩೧೦೦೯೩೧೯೮ ಶ್ರೀಧರ ಶೇಟ್, ಗೌರವ ಕೋಶಾಧ್ಯಕ್ಷರು ಕಸಾಪ ೯೧೪೧೧೧೧೬೧೧ ಇವರನ್ನು ಸಂಪರ್ಕಿಸಬಹುದೆಂದು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.