Home Information ಗೋಪ್ರಾಣಭಿಕ್ಷಾ – ಗೋ ಸೇವಾ ಬಳಗ

ಗೋಪ್ರಾಣಭಿಕ್ಷಾ – ಗೋ ಸೇವಾ ಬಳಗ

ತ್ಯಾಗೇನೈಕೇಅಮೃತತ್ವ ಮಾನಶುಃ

ಹೀಗಂದರೆ – ಅಮೃತತ್ವ ಪ್ರಾಪ್ತಿಗೆ ಇರುವ ಒಂದೇ ಮಾನದಂಡ ಅಂದ್ರೆ ಅದು ತ್ಯಾಗ ಅಂತ…

ನಾವು ಪ್ರತಿದಿನ ಮಾಡುವ ಊಟದಲ್ಲಿ, ವಾರಕ್ಕೆ‌ ಕೆಲವು ಬಾರಿ ಮಾಡುವ ದುಬಾರಿ ಶಾಪಿಂಗಗಳಲ್ಲಿ,‌ ಸಂಭ್ರಮಾಚರಣೆಗಳಿಗಾಗಿ ಮಾಡುವ ದುಂದುವೆಚ್ಚದಲ್ಲಿ ಒಂದು ಸಣ್ಣ ಪಾಲನ್ನು ತ್ಯಾಗ ಮಾಡಿದರೆ ನಮ್ಮ ಜೀವಕ್ಕೇನೂ ಆಪತ್ತು ಬರುವುದಿಲ್ಲ‌, ಅದರಿಂದ‌ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಎನ್ನುವುದು ಬೇರೆ ವಿಷಯ ಬಿಡಿ. ನಾವು ಹಾಗೇ ತ್ಯಾಗ ಮಾಡಿದ ಅಲ್ಪ ಪಾಲು ಸಾವಿನ ಅಂಚಿನಲ್ಲಿರುವ ಲಕ್ಷಾಂತರ ಗೋವುಗಳ ಜೀವವನ್ನು ಉಳಿಸಬಲ್ಲದು ಅಂದ್ರೆ ನೀವೆಲ್ಲ ನಂಬಲೇಬೇಕು.

ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರ ದಿವ್ಯಾಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ನಮ್ಮ ದಿನನಿತ್ಯದ ಜೀವನಕ್ಕೆ ಏನೂ ನಷ್ಟವಿಲ್ಲದಂತೆ ಅಂತಹ ಗೋವುಗಳನ್ನು ರಕ್ಷಿಸುವ ಯೋಜನೆಗೆ ನಾವೆಲ್ಲ ಮುಂದಾಗೋಣ..

* ಏನಿದು ಯೋಜನೆ?

* ನಾಡಿನ ಸಮಸ್ತ ಗೋಪ್ರೇಮಿಗಳು ಸೇರಿ ಗೋವಂಶವನ್ನು ಉಳಿಸಲು ಕಿರುಕಾಣಿಕೆಯನ್ನು ಪ್ರತಿ ತಿಂಗಳು ಸಮರ್ಪಿಸುವುದು

* ಏನಿದರ ಉದ್ದೇಶ ?

* ಮೇವಿಲ್ಲದೆ ಸಾವಿನ ಅಂಚಿನಲ್ಲಿರುವ ಲಕ್ಷ ಲಕ್ಷ ಗೋವುಗಳಿಗೆ ನಮ್ಮ‌ ಕೈಲಾದಷ್ಟು ಮೇವು ಒದಗಿಸಿ ಅವುಗಳ‌ ಜೀವನಕ್ಕೆ ಆಸರೆಯಾಗೋಣ

* ಗೋವುಗಳ ರಕ್ಷಣೆಗಾಗಿ ಮತ್ತು ಗೋ ಸಂರಕ್ಷಣೆ ಮಾಡುವ ಯಾವುದೇ ಹೋರಾಟ ಅಥವಾ ಆಂದೋಲನಗಳಿಗೆ ನೆರವಾಗೋಣ

* ಯೋಜನೆಯ ಸ್ವರೂಪವೇನು ?

* ಯಾರೊಬ್ಬರಿಗೂ ಹೊರೆಯಾಗದಂತೆ ರೂ ೧೦೦, ರೂ ೨೫೦, ರೂ ೫೦೦, ರೂ ೧೦೦೦/- ಹೀಗೆ ಗೋಪ್ರೇಮಿಗಳು ಪ್ರತಿ ತಿಂಗಳೂ ಸಮರ್ಪಣೆ ಮಾಡುವುದು

ಒಂದು ವರ್ಷದ ಕಾಣಿಕೆಯನ್ನು ಒಂದೆ ಬಾರಿಗೆ ಕೂಡ ಸಮರ್ಪಿಸಬಹುದು

* ಯೋಜನೆಯ ಗುರಿ ಏನು ?

* ಸುಮಾರು ೧೦,೦೦೦ ದಾನಿಗಳಿಂದ‌ ಪ್ರತಿ‌ ತಿಂಗಳಿಗೆ ಕನಿಷ್ಠ ೧೦ಲಕ್ಷ ಸಂಗ್ರಹಿಸುವುದು.

* ಯೋಜನೆಯ ಕಾರ್ಯಚಟುವಟಿಕೆ ಹೇಗೆ ?

* ಕಾಮದುಘಾ ವಿಭಾಗದ ಈ ಕೆಳಗಿನ ಖಾತೆಗೆ ಪ್ರತಿ ತಿಂಗಳ ೧೦ನೇ‌ ತಾರೀಖಿನ ಒಳಗೆ ಸಮರ್ಪಣೆ‌ ಮಾಡುವುದು

Donations to KAMADUGHA are exempted under 80G section
Bank Details:
Kamadugha
A/c # 0992500101611901, IFSC: KARB0000099 Karnataka Bank, Srinagar, Bengaluru

Payment through UPI/BHIM possible:
“account + IFSC” method

* ಪ್ರತಿ ಬಾರಿ ಕಾಣಿಕೆ‌ ಸಮರ್ಪಿಸಿದ ನಂತರ ಈ ಕೆಳಗಿನ ಗೂಗಲ್ ಲಿಂಕಿನಲ್ಲಿ ಅಪ್ಡೇಟ್ ಮಾಡುವುದು
https://goo.gl/forms/N850VJDmNMt3TNGm1