Home HONNAVAR ಫಲಿಸದ ಚಿಕಿತ್ಸೆ : ಬ್ಯಾಂಕ್ ನೌಕರ ಸಾವು : ಅಪಘಾತದಲ್ಲಿ ಪೆಟ್ಟಾಗಿದ್ದ ವ್ಯಕ್ತಿ.

ಫಲಿಸದ ಚಿಕಿತ್ಸೆ : ಬ್ಯಾಂಕ್ ನೌಕರ ಸಾವು : ಅಪಘಾತದಲ್ಲಿ ಪೆಟ್ಟಾಗಿದ್ದ ವ್ಯಕ್ತಿ.

ಹೊನ್ನಾವರ: ತಾಲೂಕಿನ ಚಂದಾವರದ ನೂರಾ ಮೊಹಲ್ಲಾದ ತಿರುವಿನಲ್ಲಿ ಬೈಕ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೆನರಾ ಬ್ಯಾಂಕ್‌ನಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಮೂರ್ತಿ ಕೆ.ನಾಯ್ಕ ಎನ್ನುವವರೆ ಮೃತಪಟ್ಟವರಾಗಿದ್ದಾರೆ.

ಭಾನುವಾರ ಸಂಜೆ ಇವರ ಬೈಕ್ ಅಪಘಾತ ಸಂಭವಿಸಿ ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವ ಆಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಇವರು ಮೃತಪಟ್ಟಿದ್ದಾರೆ.