Home DANDELI ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಕುಮಟಾ : ವ್ಯಕ್ತಿಯೊಬ್ಬ ಹಲಸಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಎಪಿಎಂಸಿ ಎದುರಿನಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ. ಈ ಹಿಂದೆ ಕುಮಟಾದ ವಿವಿಧೆಡೆ ಹೋಟೆಲ್ ನಡೆಸಿದ್ದ ಹಾಗೂ ಅದೇ ವೃತ್ತಿಯನ್ನು ಮುಂದುವರಿಸಿದ್ದ ಅಂಕೋಲಾ ತಾಲೂಕಿನ ಮಂಜಗುಣಿ ನಿವಾಸಿ ಕಮಲಾಕರ ನರಸಿಂಹ ತಾಂಡೇಲ(೫೩) ಸಾವಿಗೆ ಶರಣಾದ ವ್ಯಕ್ತಿ.

ಈತ ವ್ಯವಹಾರದಲ್ಲಿ ನಷ್ಟ ಆಗಿದ್ದರಿಂದಲೋ ಅಥವಾ ತನಗಿರುವ ಯಾವುದೋ ಕಾಯಿಲೆಯಿಂದಲೋ ಜೀವನದಲ್ಲಿ ಜಿಗುಪ್ಸೆಗೊಂಡು ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ತಮ್ಮ ಶ್ರೀನಾಥ ನರಸಿಂಹ ತಾಂಡೇಲ ನೀಡಿದ ಹೇಳಿಕೆಯನ್ವಯ ಕುಮಟಾ ಪಿ.ಎಸ್.ಐ ಸುನೀಲ್ ಬಂಡಿವಡ್ಡರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.