Home Information ಉದಯ ಸ್ಪೋರ್ಟ್ಸ್ ವರ್ಲ್ಡ್’ ನೂತನ ಮಳಿಗೆಯ ಉದ್ಘಾಟನಾ ಸಮಾರಂಭ : ನೀವೂ ಜೊತೆಗಿದ್ದು ಬೆಂಬಲಿಸಲು ಸಂಸ್ಥಾಪಕರ...

ಉದಯ ಸ್ಪೋರ್ಟ್ಸ್ ವರ್ಲ್ಡ್’ ನೂತನ ಮಳಿಗೆಯ ಉದ್ಘಾಟನಾ ಸಮಾರಂಭ : ನೀವೂ ಜೊತೆಗಿದ್ದು ಬೆಂಬಲಿಸಲು ಸಂಸ್ಥಾಪಕರ ಮನವಿ.

ಕುಮಟಾ : ರಾಷ್ಟ್ರೀಯ ಹೆದ್ದಾರಿ ೬೬ ರ, ಪಟ್ಟಣದ ಬಸ್ ಡಿಪೋ ಕ್ರಾಸ್ ಎದುರಿನಲ್ಲಿ (ಶ್ರೀಧರ ಸ್ಕಾನ್ ಸೆಂಟರ್ ಪಕ್ಕದಲ್ಲಿ) ನೂತನವಾಗಿ ನಿರ್ಮಾಣವಾಗಿರುವ ‘ಉದಯ ಸ್ಪೋರ್ಟ್ಸ್ ವರ್ಲ್ಡ್’ ನೂತನ ಮಳಿಗೆಯ ಉದ್ಘಾಟನಾ ಸಮಾರಂಭ ಅ.೨೩ ಸೋಮವಾರ ಬೆಳಗ್ಗೆ ೧೦:೦೦ ಗಂಟೆಗೆ ನಡೆಯಲಿದೆ.

ಕುಮಟಾ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ ನಾಯ್ಕ ನೂತನ ಮಳಿಗೆ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಗ್ರೇಡ್ ೨ ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಭಟ್ಟ ಸೂರಿ‌ ದೀಪ ಬೆಳಗಲಿದ್ದು, ಎ.ವಿ ಬಾಳಿಗಾ ವಾಣಿಜ್ಯ ವಿದ್ಯಾಲಯದ ಪ್ರಾಂಶುಪಾಲ ಎಸ್.ವಿ ಶೇಣ್ವಿ ಸೈಕಲ್ ಕೌಂಟರ್ ಉದ್ಘಾಟನೆ ಮಾಡುವರು. ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ಸ್ಮರಣಿಕೆ ಮತ್ತು ಮೆಡಲ್ಸ್ ಕೌಂಟರ್ ಲೋಕಾರ್ಪಣೆ ಮಾಡಲಿದ್ದಾರೆ.

ಕರ್ನಾಟಕ ವಾಲಿಬಾಲ್ ತಂಡದ ಹಿರಿಯ ಆಟಗಾರ ಮಾರುತಿ ಜಿ. ನಾಯಕ ಕ್ರೀಡಾ ಸಾಮಗ್ರಿ ಮಳಿಗೆ ಉದ್ಘಾಟಿಸಲಿದ್ದು, ಕುಮಟಾ ಸರಕಾರಿ ಕಾಲೇಜಿನ ಪ್ರಾಂಶುಪಾಲ ಸತೀಶ ನಾಯ್ಕ, ರೋಟರಿ ಕ್ಲಬ್ ಅಧ್ಯಕ್ಷ ಎನ್.ಆರ್ ಗಜು, ಮಣಿಪಾಲದ ಉದ್ಯಮಿ ರಾಬರ್ಟ, ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಕೆನರಾ ಬ್ಯಾಂಕ್‌ ಕುಮಟಾ ಶಾಖೆಯ ವ್ಯವಸ್ಥಾಪಕ ಅಲೋಕ ಕುಮಾರ್‌ ತಿವಾರಿ, ಉದ್ಯಮಿ ಶೈಲೇಶ ನಾಯ್ಕ, ಸಾಮಾಜಿಕ ಕಾರ್ಯಕರ್ತೆ ಶೈಲಾ ಗುನಗಿ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಹಾಜರಿರುವರು.

ಕಾರ್ಯಕ್ರಮಕ್ಕೆ ಹಾಗೂ ಹೊಸ ಮಳೆಗೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೆಂಬಲ ನೀಡುವಂತೆ ಉದಯ ಸಂಸ್ಥೆಯ ರಮೇಶ್ ಎ. ಬಂಗೇರ ಹಾಗೂ ಕುಮಟಾ ಉದಯ ಬಜಾರ್ ವ್ಯವಸ್ಥಾಪಕ ಫ್ರಾನ್ಸಿಸ್ ವಿನಂತಿಸಿದ್ದಾರೆ.