Home Business ‘ಉದಯ ಸ್ಪೋರ್ಟ್ಸ್ ವರ್ಲ್ಡ್’ ಉದ್ಘಾಟನೆ.

‘ಉದಯ ಸ್ಪೋರ್ಟ್ಸ್ ವರ್ಲ್ಡ್’ ಉದ್ಘಾಟನೆ.

ಕುಮಟಾ: ಕುಮಟಾದಲ್ಲಿ ನಿತ್ಯೋಪಯೋಗಿ ವಸ್ತುಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಮನೆಮಾತಾದ ಉದಯ ಬಜಾರ್ ನ ಇನ್ನೊಂದು ಶಾಖೆ ‘ಉದಯ ಸ್ಪೋರ್ಟ್ಸ್ ವರ್ಲ್ಡ್’ ಪಟ್ಟಣದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ (66)ರ ಕುಮಟಾ ಬಸ್ ಡಿಪೋ ಕ್ರಾಸ್ ಎದುರಿನಲ್ಲಿ ಸ್ಥಾಪಿತವಾದ ಸುಸಜ್ಜಿತ ಕಟ್ಟಡದಲ್ಲಿ ಇಂದು ಉದ್ಘಾಟನೆಗೊಂಡಿತು.

ನೂತನವಾಗಿ ನಿರ್ಮಾಣವಾಗಿರುವ `ಉದಯ ಸ್ಪೋರ್ಟ್ಸ್ ವರ್ಲ್ಡ’ ನೂತನ ಮಳಿಗೆಯನ್ನು ಕುಮಟಾ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ ನಾಯ್ಕ ಉದ್ಘಾಟಿಸಿ ಮಾತನಾಡಿದರು. ಉಡುಪಿಯ ಪ್ರಸಿದ್ಧ ಉದ್ಯಮಿ ರಮೇಶ ಬಂಗೇರ ಅವರ ಮಾಲೀಕತ್ವದಲ್ಲಿ ನೂತನ ಮಳಿಗೆ ಶುಭಾರಂಭಗೊಂಡಿದ್ದು, ಹಲವಾರು ವರ್ಷಗಳಿಂದ ಉದಯ್ ಬಜಾರ್ ಸಂಸ್ಥೆ ಕುಮಟಾ ಮತ್ರವಲ್ಲದೇ ಇಡೀ ಜಿಲ್ಲೆಯ ಜನರ ಪ್ರೀತಿ-ವಿಶ್ವಾಸವನ್ನು ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

IMG 20231022 WA0015

ಯಾವುದೇ ಗೃಹ ಬಳಕೆಯ ವಸ್ತುಗಳನ್ನು ಖರೀದಿಸುವುದಿದ್ದರೆ ನಮಗೆ ಮೊದಲು ನೆನಪಾಗುವುದು ಉದಯ ಬಜಾರ್. ಇದೀಗ ಇನ್ನಷ್ಟು ಹೊಸತನದೊಂದಿಗೆ ನೂತನವಾಗಿ `ಸ್ಪೋರ್ಟ್ಸ ವರ್ಲ್ಡ್‌’ ಮಳಿಗೆ ಆರಂಭಿಸುವ ಮೂಲಕ ಹೊಸ ಹೆಜ್ಜೆ ಇರಿಸಿದೆ ಇದು ಯಶಸ್ಸು ಪಡೆಯಲಿ ಎಂದು ಅವರು ಶುಭ ಹಾರೈಸಿದರು.

ನಮ್ಮ ಇಲಾಖೆಯಲ್ಲಿ ವಲಯಮಟ್ಟ, ತಾಲೂಕಾಮಟ್ಟ, ಜಿಲ್ಲಾಮಟ್ಟ ಮತ್ತು ವಿಭಾಗಮಟ್ಟ ಹೀಗೆ ಹಲವಾರು ಕ್ರೀಡಾಕೂಟಗಳು ಪ್ರತೀ ವರ್ಷ ನಡೆಯುತ್ತವೆ. ಈ ಕ್ರೀಡಾಕೂಟಕ್ಕೆ ಬೇಕಾದ ಅಗತ್ಯ ಪರಿಕರಗಳು ಪೂರ್ಣಪ್ರಮಾಣದಲ್ಲಿ ಲಭ್ಯವಿರದ ಕಾರಣ ಹೊರ ಜಿಲ್ಲೆಗೆ ಹೋಗಿ ತರಬೇಕಾದ ಅನಿವಾರ್ಯತೆ ಇತ್ತು ಎಂದು ಅವರು ಅಭಿಪ್ರಾಯಪಟ್ಟರು.

Screenshot 2023 10 23 22 28 45 32 c1ebbaff44ba152fb7f7c2e1f7129fd1

ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್-2 ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಭಟ್ಟ ಸೂರಿ ಮಾತನಾಡಿ, ಉದ್ಯಮಿ ರಮೇಶ ಬಂಗೇರ ಅವರ ಇಚ್ಛೆಯಂತೆ ಕುಮಟಾದಲ್ಲಿ `ಸ್ಪೋಟ್ರ್ಸ್ ವಲ್ರ್ಡ್’ ಮಳಿಗೆ ಆರಂಭಿಸುವ ಬಹುದಿನದ ಕನಸು ಇದೀಗ ಈಡೇರಿದೆ. ಜನತೆ ಉದಯ್ ಬಜಾರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಸಂಸ್ಥೆಯೂ ಸಹ ಜನರ ಮೇಲೆ ಅತ್ಯಂತ ಗೌರವದಿಂದ ಕಂಡಿದೆ. ಕ್ರೀಡೆಗೆ ಸಂಬಂಧಿಸಿದ ಎಲ್ಲಾ ಸಾಮಗ್ರಿಗಳು ಕುಮಟಾ ಭಾಗದ ಜನರಿಗೆ ಕಡಿಮೆ ದರದಲ್ಲಿ ದೊರಕಬೇಕು ಎಂಬ ಕನಸನ್ನು ಬಂಗೇರ ಅವರು ಹೊತ್ತಿದ್ದರು. ಇದು ಕೇವಲ ಅವರೊಬ್ಬರ ಕನಸಾಗಿರಲಿಲ್ಲ, ಇದು ನಮ್ಮೆಲ್ಲರ ಕನಸಾಗಿತ್ತು. ಕ್ರೀಡಾ ಸಾಮಗ್ರಿಗಾಗಿ ವಿವಿಧ ಜಿಲ್ಲೆಯನ್ನು ಸುತ್ತುವ ಸ್ಥಿತಿ ಇತ್ತು. ಇಂದು ಬಂಗೇರ ಅವರ ಕಸಿನ ಜತೆ ನಮ್ಮ ಕನಸೂ ಈಡೇರಿದಂತಾಗಿದೆ. ಈ ಮಳಿಗೆ ನಮ್ಮದು ಎಂದು ಭಾವಿಸಿ, ಪ್ರೀತಿಯಿಂದ ಕಟ್ಟಿ ಬೆಳೆಸುವ ಜತೆಗೆ ಸಂಪೂರ್ಣ ಸಹಕಾರವನ್ನೂ ನೀಡುತ್ತೇವೆ ಎಂದರು.

ಸಿಪಿಐ ತಿಮ್ಮಪ್ಪ ನಾಯ್ಕ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಕುಮಟಾ ಪಟ್ಟಣಕ್ಕೆ ಸ್ಪೋಟ್ರ್ಸ್ ಮಳಿಗೆಯ ಅವಶ್ಯಕತೆ ತೀರಾ ಇತ್ತು. ಆ ಕನಸನ್ನು ಇಂದು ಉದಯ್ ಬಜಾರ್ ಮಾಲೀಕರಾದ ರಮೇಶ ಬಂಗೇರ ಅವರು ಈಡೇರಿಸಿದ್ದಾರೆ. ನವನಾವಿನ್ಯತೆಯ ಸೈಕಲ್‍ಗಳು, ಕ್ರೀಡಾ ಸಾಮಗ್ರಿಗಳು ಒಂದೇ ಸೂರಿನಡಿ ದೊರೆಯಲಿದೆ. ಸೈಕಲ್ ಸಂಚಾರ ದೇಹಕ್ಕೆ ಆರೋಗ್ಯಕರ ಎಂಬಂತೆ ಎಲ್ಲರೂ ಸೈಕಲ್ ಖರೀದಿಸಿ ಆರೋಗ್ಯ ವೃದ್ಧಿಸಿಕೊಳ್ಳಿ. `ಸ್ಪೋಟ್ರ್ಸ್ ವರ್ಲ್ಡ’ ಮಳಿಗೆ ಎಲ್ಲರ ಜೀವನಾಡಿಯಾಗಿ ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಉದಯ ಗ್ರುಪ್ ನ ಜಿ.ಎಂ ಉಮೇಶ ಬಾದ್ಯಾ ಮಾತನಾಡಿ, 1979 ರಿಂದ ಈವರೆಗೆ ಉತ್ತರ ಕನ್ನಡ ಜಿಲ್ಲೆಯ ಜನತೆ ನೀಡಿದ ಸಹಕಾರಕ್ಕೆ ನಾನು ಚಿರಋಣಿಯಾಗಿದ್ದೇನೆ. ಈ ದಿನ ಪ್ರಾರಂಭಗೊಂಡ `ಸ್ಪೋಟ್ರ್ಸ್ ವರ್ಲ್ಡ’ ಮಳಿಗೆಯಲ್ಲಿ ದೈಹಿಕ ಆರೋಗ್ಯಕ್ಕೆ ಬೇಕಾದ ಎಲ್ಲ ಬಗೆಯ ಸಲಕರಣೆಗಳು ಲಭ್ಯವಿದ್ದು, ಜನತೆ ಇನ್ನೂ ಹೆಚ್ಚಿನ ಸಹಕಾರ ನೀಡಬೇಕು ಎಂದು ವಿನಂತಿಸಿದರು.

ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ಸ್ಮರಣಿಕೆ ಮತ್ತು ಮೆಡಲ್ಸ್ ಕೌಂಟರ್ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕರ್ನಾಟಕ ವಾಲಿಬಾಲ್ ತಂಡದ ಹಿರಿಯ ಆಟಗಾರ ಮಾರುತಿ ಜಿ. ನಾಯಕ ಕ್ರೀಡಾ ಸಾಮಗ್ರಿ ಮಳಿಗೆ ಉದ್ಘಾಟಿಸಿ ಮಾತನಾಡಿದರು.

ಉದಯ ಬಜಾರ್ ಮಾಲೀಕ ರಮೇಶ ಬಂಗೇರ, ಕುಮಟಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಸತೀಶ ನಾಯ್ಕ, ರೋಟರಿ ಕ್ಲಬ್ ಅಧ್ಯಕ್ಷ ಎನ್.ಆರ್ ಗಜು, ಮಣಿಪಾಲದ ಉದ್ಯಮಿ ರಾಬರ್ಟ್, ಕೆನರಾ ಬ್ಯಾಂಕ್ ಕುಮಟಾ ಶಾಖೆಯ ವ್ಯವಸ್ಥಾಪಕ ಅಲೋಕ ಕುಮಾರ್ ತಿವಾರಿ, ಉದ್ಯಮಿ ಶೈಲೇಶ ನಾಯ್ಕ, ಸಾಮಾಜಿಕ ಕಾರ್ಯಕರ್ತೆ ಶೈಲಾ ಗುನಗಿ, ಉದಯ ಬಜಾರ್ ವ್ಯವಸ್ಥಾಪಕ ಫ್ರಾನ್ಸಿಸ್ ಇತರರು ಇದ್ದರು.