Home Information ಮಧುಮೇಹ ನಿರ್ವಹಣೆಗೆ ಮುನ್ನೆಚ್ಚರಿಕೆ ಉಪಚಾರದ ಕುರಿತಾಗಿ ಕಾರ್ಯಾಗಾರ ಹಾಗೂ ಉಚಿತ ಆರೋಗ್ಯ ಶಿಬಿರ

ಮಧುಮೇಹ ನಿರ್ವಹಣೆಗೆ ಮುನ್ನೆಚ್ಚರಿಕೆ ಉಪಚಾರದ ಕುರಿತಾಗಿ ಕಾರ್ಯಾಗಾರ ಹಾಗೂ ಉಚಿತ ಆರೋಗ್ಯ ಶಿಬಿರ

ಕುಮಟಾ : ಸೇವಾಭಾರತಿ ಟ್ರಸ್ಟ್ ಕುಮಟಾ ಇದರ ಅಡಿಯಲ್ಲಿ ಮಧುಮೇಹ ನಿರ್ವಹಣೆಗೆ ಮುನ್ನೆಚ್ಚರಿಕೆ ಉಪಚಾರದ ಕುರಿತಾಗಿ ಕಾರ್ಯಾಗಾರ ಹಾಗೂ ಉಚಿತ ಆರೋಗ್ಯ ಶಿಬಿರವು ಫೇ.೪ ರಂದು ಬೆಳಗ್ಗೆ ೧೦ ಗಂಟೆಯಿಂದ ಮಹಾಸತಿ ಸಭಾಭವನ ಮಾಸ್ತಿಕಟ್ಟೆಯಲ್ಲಿ ನಡೆಯಲಿದೆ.

ಡಾ. ದಯಾಪ್ರಸಾದ ಜಿ. ಕುಲ್ಕರ್ಣಿ (ಯು.ಎಸ್.ಎ)  ಹಾಗೂ ಹರ್ಬಲ್ ಸಂಶೋಧಕ ಡಾ. ಜಿ. ಜಿ. ಕುಲ್ಕರ್ಣಿ ಈ ಕಾರ್ಯಾಗಾರ ನಡೆಸಿಕೊಡುವರು. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.