Home YELLAPUR ಸಹೋದರಿಯನ್ನು ಭೇಟಿಯಾಗಲೆಂದು ತೆರಳಿದವ ಬೈಕ್ ಅಪಘಾತದಲ್ಲಿ ಸಾವು.

ಸಹೋದರಿಯನ್ನು ಭೇಟಿಯಾಗಲೆಂದು ತೆರಳಿದವ ಬೈಕ್ ಅಪಘಾತದಲ್ಲಿ ಸಾವು.

ಯಲ್ಲಾಪುರ : ಕಾರವಾರದಿಂದ ಮುಂಡಗೋಡಿಗೆ ತೆರಳುತ್ತಿದ್ದ ಬೈಕ್ ಸವಾರನೋರ್ವನಿಗೆ ಟ್ಯಾಂಕರ್ ಢಿಕ್ಕಿ ಹೊಡೆದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಾಲೂಕಿನ ಅರಬೈಲ್ ಸಮೀಪದ ರಾಷ್ಟ್ರೀಯ ಹೆಬ್ಬಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪರಶುರಾಮ ಬಾರೇಕರ್ ಎನ್ನುವ ವ್ಯಕ್ತಿ ಮೃತಪಟ್ಟಿದ್ದು, ಈತ ಕಾರವಾರದಲ್ಲಿ ಹೋಮ್‌ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈತ ತನ್ನ ಸಹೋದರಿಯನ್ನು ಭೇಟಿಯಾಗಲೆಂದು ಕಾರವಾರದಿಂದ ಮುಂಡಗೋಡಿಗೆ ತೆರಳುತ್ತಿದ್ದ ವೇಳೆ ಯಲ್ಲಾಪುರದಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಡಾಂಬರ್ ಟ್ಯಾಂಕರ್‌ಗೆ ಬೈಕ್ ಢಿಕ್ಕಿಯಾಗಿದೆ. ಯಲ್ಲಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.