Home YELLAPUR ಮೀನು ಹಿಡಿಯಲು ತೆರಳಿದ್ದ ಸಂದರ್ಭದಲ್ಲಿ ನೀರಲ್ಲಿ ಮುಳುಗಿ ತಂದೆ-ಮಗ ಸಾವು.

ಮೀನು ಹಿಡಿಯಲು ತೆರಳಿದ್ದ ಸಂದರ್ಭದಲ್ಲಿ ನೀರಲ್ಲಿ ಮುಳುಗಿ ತಂದೆ-ಮಗ ಸಾವು.

ಯಲ್ಲಾಪುರ : ತಂದೆ , ಮಗ ಇಬ್ಬರೂ ಮೀನು ಹಿಡಿಯಲು ತೆರಳಿದ್ದ ಸಂದರ್ಭದಲ್ಲಿ ನೀರಲ್ಲಿ ಮುಳುಗಿ ತಂದೆ-ಮಗ ಮೃತಪಟ್ಟಿರುವ ಘಟನೆ ತಾಲೂಕಿನ ಮಂಚಿಕೇರಿ ಸಮೀಪದ ಬೇಡ್ತಿ ಹಳ್ಳದಲ್ಲಿ ನಡೆದಿದೆ. ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಅನುಮಾನ ಬಂದು ಹುಡುಕಾಟ ನಡೆಸಿದ್ದಾಗ ವಿವರ ತಿಳಿದಿದೆ.

ಬೇಡ್ತಿ ಹಳ್ಳದ ಸುತ್ತಮುತ್ತ ಹುಡುಕಾಟ ನಡೆಸಿದಾಗ ಮುಳುಗಿ ಮೃತಪಟ್ಟಿರುವುದು ತಿಳಿದುಬಂದಿದೆ. ತಕ್ಷಣ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿದ್ದು, ಸ್ಥಳೀಯರ ಸಹಾಯದಿಂದ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಹಳ್ಳಿಗದ್ದೆಯ ಖಲಂದರ ಫಕ್ರು ಸಾಬ್ (50) ಹಾಗೂ ಆತನ ಮಗ ತನ್ವೀರ್ ಕಲಂದರ್ ಸಾಬ್ (21) ಮೃತರು. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.