Home HONNAVAR ಪಾಪಣ್ಣ ವಿಜಯ- ಗುಣಸುಂದರಿ ಯಕ್ಷಗಾನ

ಪಾಪಣ್ಣ ವಿಜಯ- ಗುಣಸುಂದರಿ ಯಕ್ಷಗಾನ

ಹೊನ್ನಾವರ: ತಾಲೂಕಿನ ಸಾಸ್ಕೋಡ್ ಗ್ರಾಮದ ಬೊಂಡಕಾರ ದೇವಸ್ಥಾನದ ಬಯಲಿನಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಪಾಪಣ್ಣ ವಿಜಯ- ಗುಣಸುಂದರಿ ಏಳನೇ ವರ್ಷದ ಯಕ್ಷಗಾನ ಬಯಲಾಟ ಮಾರ್ಚ್12 ರಂದು 8 ಗಂಟೆಗೆ ನಡೆಯಲಿದೆ. ಗೆಳೆಯರ ಬಳಗ ಗುಮ್ಮೆಕೇರಿ ಸಾಸ್ಕೋಡ್ ಇವರು ಯಕ್ಷಗಾನ ಆಯೋಜಿಸಿದ್ದು, ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಗಣೇಶ ಯಾಜಿ ಇಡಗುಂಜಿ ಕಾಣಿಸಿಕೊಳ್ಳಲಿದ್ದಾರೆ. ಮದ್ದಳೆಯಲ್ಲಿ ನಾಗರಾಜ ಭಂಡಾರಿ ಹಿರೆಬೈಲ್, ಚಂಡೆಯಲ್ಲಿ ಗಜಾನನ ಸಾತುರು ಸಾತ್ ನೀಡಲಿದ್ದಾರೆ.

ಮುಮ್ಮೇಳದಲ್ಲಿ ಅಶೋಕ ಭಟ್ ಸಿದ್ದಾಪುರ, ಗಣಪತಿ ಹೆಗಡೆ ತೋಟಿಮನೆ, ಅಶ್ವಿನಿ ಕೊಂಡದಕುಳಿ, ನಾಗಶ್ರೀ ಜಿ.ಎಸ್, ನಾಗೇಶ ಕುಳಿಮನೆ, ರಾಮ ಹೆಗಡೆ ಸಾಣ್ಮನೆ, ಸ್ತ್ರೀ ಪಾತ್ರದಲ್ಲಿ ನಾಗರಾಜ ಕುಂಕಿಪಾಲ, ರಕ್ಷಿತ್ ಕುಳಿಮನೆ, ಮಾರುತಿ ನಾಯ್ಕ ಬೈಲಗದ್ದೆ, ಹಾಸ್ಯ ಪಾತ್ರದಲ್ಲಿ ಶ್ರೀಧರ ಹೆಗಡೆ ಚಪ್ಪರಮನೆ, ಶ್ರೀಧರ ಭಟ್ ಕಾಸರಕೋಡ, ಬಾಲ ಕಲಾವಿದರಾದ ಸುಭಾಸ್, ಸಂದೀಪ, ವಿನಿತಾ, ದಿಶಾ ಕಲಾ ಪ್ರದರ್ಶನ ನೀಡಲಿದ್ದು, ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲೆ ಹಾಗೂ ಕಲಾವಿದರನ್ನು ಪೊತ್ಸಾಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.