Home SIRSI ದೇಶಕ್ಕೆ ಒಳಿತಾಗಲಿ, ನಮೋ ಮತ್ತೆ ಪ್ರಧಾನಿಯಾಗಲೆಂದು ಪಾದಯಾತ್ರೆ

ದೇಶಕ್ಕೆ ಒಳಿತಾಗಲಿ, ನಮೋ ಮತ್ತೆ ಪ್ರಧಾನಿಯಾಗಲೆಂದು ಪಾದಯಾತ್ರೆ

ಶಿರಸಿ: ಎಲ್ಲ ದೇಶವಾಸಿಗಳಿಗೆ ಸದಾ ಒಳಿತಾಗಲಿ, ನಮ್ಮೆಲ್ಲರ ಹೆಮ್ಮೆಯ ನರೇಂದ್ರ ಮೋದಿ ಇನ್ನೊಮ್ಮೆ ಪ್ರಧಾನಿಯಾಗಲಿ, ಭಾರತಮಾತೆ ಜಗಜ್ಜನನಿಯಾಗಲಿ ಎಂದು ಆಶಿಸಿ ಐದು ಜನರ ತಂಡವು ಶಿರಸಿಯಿಂದ ಎರಡನೇ ತಿರುಪತಿ ಖ್ಯಾತಿಯ ಶ್ರೀ ಕ್ಷೇತ್ರ ಮಂಜುಗುಣಿಗೆ ಭಾನುವಾರ ಪಾದಯಾತ್ರೆ ಮೂಲಕ ಸಾಗಿದ್ದಾರೆ.

ಮುಂಜಾನೆ ಶಿರಸಿಯಿಂದ ಹೊರಟ ತಂಡವು, ಕುಮಟಾ ರಸ್ತೆಯಲ್ಲಿ ಸಾಗಿ, ಮಧ್ಯಾಹ್ನದ ವೇಳೆಗೆ ಒಟ್ಟೂ 29 ಕಿ.ಮೀ. ಕ್ರಮಿಸಿ ಮಂಜುಗುಣಿ ತಲುಪಿ ಶ್ರೀದೇವರಿಗೆ ಪೂಜೆ ಸಲ್ಲಿಸಿ, ನರೇಂದ್ರ ಮೋದಿ ಇನ್ನೊಮ್ಮೆ ಪ್ರಧಾನಿಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಪಾದಯಾತ್ರೆಯಲ್ಲಿ ಸುಗಂಧಿ ಗುರುಪ್ರಸಾದ, ಸಂಪದಾ ಗೋಳಗೋಡು, ಸುಮಾ ಹೆಗಡೆ, ಅಜಯ್ ಹೊನ್ನೆಕಟ್ಟಾ, ಗುರುಪ್ರಸಾದ ಶಾಸ್ತ್ರಿ ಪಾಲ್ಗೊಂಡಿದ್ದರು. ಓರ್ವ ಯುವಕ ಬರಿಗಾಲಿನಲ್ಲಿಯೇ ಪಾದಯಾತ್ರೆಯಲ್ಲಿ ಸಾಗಿದ್ದು ವಿಶೇಷವಾಗಿದೆ.