ಶಿರಸಿ: ಅಗಸಾಲ ಬೊಮ್ನಳ್ಳಿಯ ಪವನ್ ದಿವಾಕರ ಹೆಗಡೆ ಪ್ರಸ್ತುತ ಸಾಲಿನ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ತೇಗರ್ಡೆಯಾಗುವ ಮೂಲಕ ಅಪ್ರತಿಮ ಸಾಧನೆ ಗೈದಿದ್ದಾರೆ ಎಂದು ತಿಳಿದು ಬಂದಿದೆ.
ಇವರು ತಾಲೂಕಿನ ಅಗಸಾಲ ಬೊಮ್ನಳ್ಳಿಯ ಶ್ರೀಮತಿ ಮಮತಾ ಮತ್ತು ದಿವಾಕರ ಹೆಗಡೆ ಪುತ್ರನಾಗಿದ್ದು, ತಾಲೂಕಿನ ಶ್ರೀ ಶಾರಾದಾಂಬಾ ಪ್ರೌಢಶಾಲೆಯಲ್ಲಿಯಲ್ಲಿ ಪ್ರೌಢಶಿಕ್ಷಣ ಮುಗಿಸಿ, ನಗರದ ಪ್ರತಿಷ್ಠಿತ ಎಂ.ಇ.ಎಸ್ ಕಾಲೇಜಿನಲ್ಲಿ ಪಿಯು ಹಾಗು ಪದವಿ ಶಿಕ್ಷಣ ಪೂರೈಸಿ, ಬೆಂಗಳೂರಿನ ಪವನ್ ಆರ್ & ಅಸೋಸಿಯೇಟ್ಸ್ ಬಳಿ ಆಪ್ಟಿಕಲ್ ಶಿಪ್ ಮುಗಿಸಿದ್ದರು ಎನ್ನಲಾಗಿದೆ.
ಬಾಲ್ಯದಿಂದಲೇ ಇವರಿಗೆ ಅಭ್ಯಾಸದ ಜೊತೆಗೆ ಕ್ರೀಡೆಯಲ್ಲಿ ಅದರಲ್ಲಿಯೂ ಕ್ರಿಕೆಟ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಸತತ ಅಧ್ಯಯನ, ದೃಢಸಂಕಲ್ಪ ಮತ್ತು ಸಾಧಿಸುವ ಛಲವಿದ್ದರೆ ಯಾವುದು ಅಸಾಧ್ಯವಲ್ಲ. ಸೋತಾಗ ಕುಗ್ಗದೆ, ಗೆದ್ದಾಗ ಬೀಗದೇಯಿದ್ದರೆ ಯಶಸ್ಸು ಖಂಡಿತಾ ದೊರೆಯುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ.