Home Local News ಬಯಲಾಯ್ತು ಜೀವ ಬೆದರಿಕೆ ಪ್ರಕರ್ಣ: ಪೋಲೀಸ್ ಠಾಣೆಯಲ್ಲಿ ದೂರು ದಾಖಲು.

ಬಯಲಾಯ್ತು ಜೀವ ಬೆದರಿಕೆ ಪ್ರಕರ್ಣ: ಪೋಲೀಸ್ ಠಾಣೆಯಲ್ಲಿ ದೂರು ದಾಖಲು.

ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಡೆದಿಲ್ಲ ಎಂದು ಫೇಸ್ಬುಕ್ ಪೋಸ್ಟ್ ಹಾಕಿದ್ದಕ್ಕೆ ಯುವಕನಿಗೆ ಜೀವ ಬೆದರಿಕೆ ಹಾಕಿದ ಪ್ರಕರ್ಣ ಬೆಳಕಿಗೆ ಬಂದಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಮಹಾಕದನಕ್ಕೆ ಇನ್ನು ಕೇವಲ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು ಕೆಲ ರಾಜಕೀಯ ಪಕ್ಷಗಳು ಕೊನೆಯ ಹಂತದ “ರಾಜಕಾರಣ” ದಲ್ಲಿ ತೊಡಗಿವೆ. ರಾಜ್ಯದ ಹಲವಾರು ಕಡೆ ಹಣ, ಹೆಂಡವನ್ನು ಪೊಲೀಸರು ವಶಪಡಿಸಿಕೊಂಡಿರುವ ಹಲವಾರು ಘಟನೆಗಳು ವರದಿಯಾಗಿದ್ದು ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಭಾರಿ ಶ್ರಮ ಪಡುತ್ತಿದೆ.

ಇನ್ನೊಂದು ಕಡೆ ಪಕ್ಷ ಪಕ್ಷಗಳ ಕಾರ್ಯಕರ್ತರ ನಡುವೆ ಹೊಡೆದಾಟ, ಬೆದರಿಕೆಗಳು ಈ ಕೊನೆಯ ಎರಡು ದಿನಗಳಲ್ಲಿ ಜೋರಾಗಿ ನಡೆಯುತ್ತಿದ್ದು ಈ ಪಟ್ಟಿಗೆ ಇನ್ನೊಂದು ಪ್ರಕರಣ ಸೇರ್ಪಡೆಯಾಗಿದೆ.