Home Local News ಲಾಯನ್ಸ್ ಕ್ಲಬ್ ನಿಂದ ವಿವಿವಿಗೆ ಕುಟೀರ ಕೊಡುಗೆ.

ಲಾಯನ್ಸ್ ಕ್ಲಬ್ ನಿಂದ ವಿವಿವಿಗೆ ಕುಟೀರ ಕೊಡುಗೆ.

ಗೋಕರ್ಣ: ಕುಮಟಾ ಲಯನ್ಸ್ ಕ್ಲಬ್ ವತಿಯಿಂದ ಅಶೋಕೆ ಪರಿಸರದಲ್ಲಿ 1.5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕುಟೀರವನ್ನು ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಸ್ವಾಮೀಜಿಯವರ ಸಾನಿಧ್ಯದಲ್ಲಿ ಉದ್ಘಾಟಿಸಲಾಯಿತು.

ಲಯನ್ಸ್ 317 ಬಿ ಜಿಲ್ಲಾ ಗವರ್ನರ್ ಡಾ.ಗಿರೀಶ್ ಕೆ.ಚಿನಾದ್ ಮತ್ತು ಕುಮಟಾ ಲಯನ್ಸ್ ಅಧ್ಯಕ್ಷೆ ವಿನಯಾ ಹೆಗಡೆ ಅವರು ಕುಟೀರವನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಸಮರ್ಪಿಸಿದರು. ಈ ಕುಟೀರದ ಸಂಪೂರ್ಣ ವೆಚ್ಚವನ್ನು ಅಧ್ಯಕ್ಷೆ ವಿನಯಾ ಶ್ರೀಧರ ಹೆಗಡೆಯವರು ಭರಿಸಿದ್ದು ವಿಶೇಷ. ಈ ಸಂದರ್ಭದಲ್ಲಿ ಲಾಯನ್ಸ್ ಕುಮಟಾದ ಕಾರ್ಯದರ್ಶಿ ಶ್ರೀಧರ ಹೆಗಡೆ, ವಿ.ವಿ.ವಿ ಆಡಳಿತಾಧಿಕಾರಿ ಸುರೇಂದ್ರ ಹೆಗಡೆ ಇನ್ನಿತರರು ಇದ್ದರು.