Home Local News ಅಗಷ್ಟ 1 ಭಾನುವಾರ ಕೊಂಕಣಿ ಅಕಾಡೆಮಿ ಗೌರವ ಪುರಸ್ಕಾರ ಕಾರ್ಯಕ್ರಮ.

ಅಗಷ್ಟ 1 ಭಾನುವಾರ ಕೊಂಕಣಿ ಅಕಾಡೆಮಿ ಗೌರವ ಪುರಸ್ಕಾರ ಕಾರ್ಯಕ್ರಮ.

ಕುಮಟಾ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕೊಡಮಾಡುವ ಗೌರವ ಪುರಸ್ಕಾರ ಕಾರ್ಯಕ್ರಮವು ಅಗಷ್ಟ 1 ನೇತಾರೀಖಿನಂದು ನೆರವೇರಲಿದೆ.ಕೋವಿಡ್ ನಿಯಮಾವಳಿಗಳ ಕಾರರಣದಿಂದ ಅತ್ಯಂತ ಸರಳವಾಗಿ ನೆರವೇರುವ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಕೊಂಕಣಿ ಸಾಹಿತಿ ಹಾಗೂ ಸಂಘಟಕ ಶ್ರೀ ಅರುಣ ಉಭಯಕರ್ ಹಾಗೂ ಜಾನಪದ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಯಲ್ಲಾಪುರದ ಶ್ರೀಮತಿ ಲಕ್ಷ್ಮೀ ಸಿದ್ದಿಯವರಿಗೆ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.ಈ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನೆಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು.ಆದರೆ ಬದಲಾದ ಸನ್ನಿವೇಶದಲ್ಲಿ ಅಕಾಡಮಿಯ ಕೇಂದ್ರ ಸ್ಥಾನವಾದ ಮಂಗಳೂರಿನ ಪುರಭವನದಲ್ಲಿ ರವಿವಾರ ಅಪರಾಹ್ನ ೨ ಗಂಟೆಗೆ ನೆಡೆಸಲಾಗುತ್ತದೆ ಎಂದು ಅಕಾಡೆಮಿಯ ಸದಸ್ಯ ಚಿದಾನಂದ ಭಂಡಾರಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಿ..

ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಪೀಠಾರೋಹಣ ಕಾರ್ಯಕ್ರಮ ನಾಳೆ.

ಉತ್ತರಕನ್ನಡಕ್ಕೆ ಇಂದು ಸಿ.ಎಂ ಬರ್ತಾರೆ