Home Local News ಮಾರಿಕಾಂಬಾ‌ ದೇವಸ್ಥಾನ ಶಿರಸಿ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಮಾರಿಕಾಂಬಾ‌ ದೇವಸ್ಥಾನ ಶಿರಸಿ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಶಿರಸಿ : ಶ್ರೀ ಮಾರಿಕಾಂಬಾ‌ ದೇವಸ್ಥಾನ ಶಿರಸಿ ವತಿಯಿಂದ, ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಹಾಗೂ ಅರ್ಹರು ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ.

2021 ನೇ ಇಸ್ವಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 95 % ಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿ/ನಿಯರಿಗೆ ಶ್ರೀ ಮಾರಿಕಾಂಬಾ ದೇವಸ್ಥಾನ ಶಿರಸಿ(ಉ.ಕ.) ವತಿಯಿಂದ ಈ ಹಿಂದಿನಿ0ದಲೂ ಬಂದ ಪದ್ದತಿಯಂತೆ ಪ್ರತಿಭಾ ಪುರಸ್ಕಾರ ನೀಡಲು ಮಂಡಳಿಯು ನಿರ್ಧರಿಸಿದೆ.

ಕಾರಣ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದವರಿಗೆ ಈ ಪ್ರತಿಭಾ ಪುರಸ್ಕಾರ ಅನ್ವಯವಾಗಲಿದೆ.

FB IMG 1629103924708