Home ANKOLA ಕುಮಟಾದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ..!

ಕುಮಟಾದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ..!

ಕುಮಟಾ : ತಾಲೂಕಿನ ಹೆಗಡೆಯಲ್ಲಿ ಕಳೆದ ವಾರವಷ್ಟೇ ಚಿರತೆಯಿಂದ ಭಯದ ಗೂಡಿಗೆ ತಳ್ಳಲ್ಪಟ್ಟ ಜನರು, ಚಿರತೆ ಬೋನಿಗೆ ಬೀಳುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಇದೀಗ ತಾಲೂಕಿನ ಮಿರ್ಜಾನ್, ಕೊಡ್ಕಣಿ, ಕಿಮಾನಿ, ಬರ್ಗಿ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿ ಜನರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮುಸಂಜೆಗೇ ರಸ್ತೆಗೆ ಬರುವ ಚಿರತೆಗಳನ್ನು ಕಂಡು ಹಲವರು ಬೆಚ್ಚಿ ಸ್ಥಳದಿಂದ ಕಾಲುಕಿತ್ತಿರುವ ಘಟನೆಯೂ ನಡೆದಿದೆ.

ಮಿರ್ಜಾನಿನ ಕಿಮಾನಿ ಬೆಳಗಾರಣಿ ಬೆಟ್ಟ ಮತ್ತು ಕೋಡ್ಕಣಿಯಲ್ಲಿ ಸಂಚರಿಸುವ ರಸ್ತೆ ಅಂಚಿನಲ್ಲಿ ಐದಾರು ದಿನಗಳಿಂದ ಸಂಜೆ 7 ಗಂಟೆಯಿಂದ ರಸ್ತೆ ಬದಿಯಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದೆ. ಇದು 3-4 ವರ್ಷದ ಚಿರತೆ ಮರಿಗಳಾಗಿದೆ ಎಂದು ಪತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಅದಲ್ಲದೆ ಅರಣ್ಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಜನರು ಓಡಾಡುವ ಪ್ರದೇಶದಲ್ಲಿ ಚಿರತೆಗಳ ಓಡಾಟ ಹೆಚ್ಚಾಗಿದ್ದು, ಈ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. 

ಈ ಸುದ್ದಿಯನ್ನೂ ಓದಿ – ಕಸ್ತೂರಿ ರಂಗನ್ ವರದಿ ವಿರೋಧಿಸಲು ಪ್ರಭಲ ಹೋರಾಟ

ಇದೀಗ ಕಿಮಾನಿಯ ಬೆಳಗಾರಣಿ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿಯೂ ಸುದ್ದಿ ಹಬ್ಬುತ್ತಿದೆ. ಮಿರ್ಜಾನ್ ಮತ್ತು ಕಿಮಾನಿ ಸುತ್ತಮುತ್ತ 3 ವರ್ಷದ ಚಿರತೆ ಮರಿ ಜನರ ಕಣ್ಣಿಗೆ ಬಿದ್ದಿರುವ ಸುದ್ದಿ ಇದೀಗ ಅರಣ್ಯ ಅಧಿಕಾರಿಗಳ ಹಾಗೂ ಸ್ಥಳೀಯರ ನಿದ್ದೆಗೆಡಿಸಿದೆ. ಈ ಮಾರ್ಗದಲ್ಲಿ ಅನೇಕ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಓಡಾಡುವ ಕಾರಣದಿಂದ ಅಪಾಯ ಎದುರಾಗಬಹುದು ಎಂಬ ಆತಂಕ ಮನೆ ಮಾಡಿದೆ.

Udaya Bazar Sports

ನಾನು ಈ ಮಾರ್ಗದಲ್ಲಿ ಓಡಾಡುವಾಗ ಚಿರತೆಯನ್ನು ಗಮನಿಸಿದ್ದೇನೆ. ವಾಹನದ ದೀಪಕ್ಕೆ ನಮ್ಮನ್ನೇ ಗುರಾಯಿಸುವ ಚಿರತೆ, ಯಾವಾಗ ಮೈ ಮೇಲೆ ಎರಗುತ್ತದೆಯೋ ಎಂದು ಒಮ್ಮೆ ಭಯಪಡುವ ಸ್ಥಿತಿ ನಿರ್ಮಾಣವಾಗುತ್ತದೆ. ಅರಣ್ಯ ಇಲಾಖೆಯವರೆಗೂ ಮಾಹಿತಿ ನೀಡಿದ್ದು ಈ ಬಗ್ಗೆ ಅವರು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. – ರಾಘವೇಂದ್ರ ಪಟಗಾರ, ಸ್ಥಳೀಯ ನಿವಾಸಿ.

Taranga Electronic

ಇತ್ತೀಚಿನ ದಿನದಲ್ಲಿ ದಿನಗಳಲ್ಲಿ ಚಿರತೆಗಳು ಕರಾವಳಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ಬಗ್ಗೆ ಪರಿಶೀಲಿಸುತ್ತೇನೆ. ಜನರಿಗೆ ಸಮಸ್ಯೆ ಆಗದಂತೆ ತಕ್ಷಣದಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ. – ರವಿಶಂಕರ್, ಅರಣ್ಯ ಇಲಾಖೆ ಅಧಿಕಾರಿ.