Home BHATKAL ಭಟ್ಕಳದಲ್ಲಿ ಮತ್ತೆ ಹಾರಾಡಿದ ಹನುಮ ಧ್ವಜ : ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ಸರಕಾರಕ್ಕೆ ಸೆಡ್ಡು

ಭಟ್ಕಳದಲ್ಲಿ ಮತ್ತೆ ಹಾರಾಡಿದ ಹನುಮ ಧ್ವಜ : ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ಸರಕಾರಕ್ಕೆ ಸೆಡ್ಡು

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯಿತಿಯ ತೆಂಗಿನಗುಂಡಿ ಗ್ರಾಮದಲ್ಲಿ ಅಧಿಕಾರಿಗಳು ತೆರವು ಮಾಡಿದ್ದ ಸಾವರ್ಕರ್ ಧ್ವಜದ ಕಟ್ಟೆಯಲ್ಲಿ ಸೋಮವಾರ ಸಂಸದ ಅನಂತಕುಮಾರ್ ಹೆಗಡೆ ಅವರೇ ಖುದ್ದು ಬಂದು ಹನುಮ ಧ್ವಜವನ್ನು ಹಾರಿಸಿ ನಾಮಫಲಕ ಅಳವಡಿಸಿ ಸೆಡ್ಡು ಹೊಡೆದಿದ್ದಾರೆ.

ತೆಂಗಿನಗುಂಡಿಯಲ್ಲಿ ನಿರ್ಮಾಣ ಮಾಡಿದ್ದ ವೀರ ಸಾವರ್ಕರ್ ವೃತ್ತದ ಕಟ್ಟೆಯನ್ನು ಯಾವುದೇ ಪರವಾನಗಿ ಇಲ್ಲದೇ ನಿರ್ಮಾಣ ಮಾಡಲಾಗಿದೆ ಎಂಬ ಕಾರಣದಿಂದ ಗ್ರಾಮ ಪಂಚಾಯಿತಿ ಇದನ್ನು ತೆರವು ಮಾಡಿತ್ತು. ಪರಿಣಾಮ ಇದರಿಂದಾಗಿ ಹಿಂದೂ ಸಂಘಟನೆಯ ಕಾರ್ಯಕರ್ತರು ತೀವ್ರವಾಗಿ ಈ ಕ್ರಮದ ವಿರುದ್ದ ಆಕ್ರೋಶಗೊಂಡಿದ್ದರು. ಆದರೆ ಈಗ ಸಂಸದ ಅನಂತಕುಮಾರ್‌ ಹೆಗಡೆ ಅವರೇ ಬಂದು ಈ ವೃತ್ತದಲ್ಲಿ ಭಗವಾನ್‌ ಧ್ವಜ ಹಾರಿಸಿರುವುದು ಧ್ವಜ ದಂಗಲ್‌ ಗೆ ಕಾರಣವಾಗಿದೆ.

ಹೆಬಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಾವರ್ಕರ್‌ ಧ್ವಜ ಕಟ್ಟೆ ನಿರ್ಮಾಣಕ್ಕೆ ವಿರೋಧ ಮಾಡಿದರೆ, ಇನ್ನು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರು. ಪಂಚಾಯಿತಿಯಲ್ಲಿಯೇ ಎರಡು ಶಕ್ತಿ ಕೇಂದ್ರಗಳಾಗಿ ನಿರ್ಮಾಣ ಆಗಿದ್ದವು. ಇದೆಲ್ಲದ ನಡುವೆ ಅಧಿಕಾರಿಗಳು ಜೆಸಿಬಿ ಮೂಲಕ ಧ್ವಜದ ಕಟ್ಟೆಯನ್ನು ಧ್ವಂಸ ಮಾಡಿದ್ದರು. ಇದರ ವಿರುದ್ದ ಹೊತ್ತಿಕೊಂಡಿದ್ದ ಕಿಡಿ ಈಗ ಮತ್ತೆ ಧ್ವಜ ಹಾರಾಟಕ್ಕೆ ಕಾರಣವಾಗಿದೆ.