Home SIRSI ಮಂಗನ ಕಾಯಿಲೆಗೆ ಇನ್ನೆರಡು ಬಲಿ.

ಮಂಗನ ಕಾಯಿಲೆಗೆ ಇನ್ನೆರಡು ಬಲಿ.

ಸಿದ್ದಾಪುರ: ತಾಲೂಕಿನಲ್ಲಿ ಮಂಗನ ಕಾಯಿಲೆ ವ್ಯಾಪಿಸತೊಡಗಿದ್ದು ಮತ್ತೆರಡು ಜನರನ್ನು ಬಲಿ ತೆಗೆದುಕೊಂಡಿದೆ. ಸೋಮವಾರ ಕಲ್ಲೂರ ಹಾಗೂ ಹೆಗ್ಡೆಕೊಪ್ಪದದ ತಲಾ ಒಬ್ಬರು ಈ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿಯೇ ರೋಗ ಉಲ್ಬಣಿಸಿ ಇಬ್ಬರೂ ವಯೋವೃದ್ಧ ಮೃತಪಟ್ಟಿದ್ದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ಈವರೆಗೆ ತಾಲೂಕಿನಲ್ಲಿ ಒಟ್ಟೂ ಐವತ್ತು ಜನರಲ್ಲಿ ಕೆಎಫ್‌ಡಿ ಕಂಡು ಬಂದಿದ್ದು ಸೋಮವಾರ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟ ಇಬ್ಬರನ್ನೂ ಸೇರಿ ಒಟ್ಟೂ ನಾಲ್ವರು ಮೃತಪಟ್ಟಂತಾಗಿದೆ. ಇದೀಗ ತಾಲೂಕಿನಲ್ಲಿ ಬಿರು ಬೇಸಿಗೆಯ ವಾತಾವರಣವಿದ್ದು ಮಂಗನ ಕಾಯಿಲೆ ಹರಡಲು ಇದು ಪೂರಕವೆನ್ನಲಾಗಿದೆ.ಆರೋಗ್ಯ ಇಲಾಖೆ ಈ ಕಾಯಿಲೆ ಕುರಿತು ಮತ್ತಷ್ಟು ಜಾಗೃತಿ ಮೂಡಿಸುವ ಅಗತ್ಯತೆ ಕಂಡುಬರುತ್ತಿರುವುದಾಗಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.